ಪುಟ:Rangammana Vathara.pdf/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

12

ಸೇತುವೆ

ಸಾವು ಸಂಭವಿಸಿದ ಮಾರನೆಯ ದಿನ...
ನಸುಕು ಹರಿಯುತ್ತಿದ್ದಂತೆ ಒಂದೊಂದಾಗಿ ವಠಾರದ ಮನೆಗಳು ಎಚ್ಚರ
ಗೊಂಡುವು. ಎಂದಿನಂತೆಯೇ ಅದು ಒಂದು ಮುಂಜಾನೆ. ಹೆಚ್ಚೂ ಇಲ್ಲ, ಕಡಮೆಯೂ ಇಲ್ಲ.

ಆಗ ಉರಿಯುತ್ತಿದ್ದುದೆಲ್ಲ ಸೀಮೆಎಣ್ಣೆಯ ಹೊಗೆ ದೀಪಗಳು. ಪ್ರತಿದಿನ,

ಅಂದರೆ ರಾತ್ರೆ, ರಂಗಮ್ಮನ ವಠಾರದಲ್ಲಿ ವಿದ್ಯುದ್ದೀಪಗಳು ಉರಿಯುತ್ತಿದ್ದುದು, ಮೂರು ಘಂಟೆಗಳ ಮಾತ್ರ. ರಾತ್ರೆ ಒಂಧತ್ತೂವರೆಯಿಂದ ಹತ್ತರೊಳಗಾಗಿ ರಂಗಮ್ಮ ದೀಪ ಆರಿಸಿ ಬಿಡುತ್ತಿದ್ದರು. ಆ ಬಳಿಕ 'ದೀಪ ಹಾಕು'ವುದು ಮಾರನೆಯ ಸಂಜೆ ಮಾತ್ರವೇ. ವಠಾರಕ್ಕೆ ಹೊಸತಾಗಿ ಬಾಡಿಗೆಗೆ ಬಂದವರು ಗೊಣಗುವುದಿತ್ತು. ಆದರೆ ನಾಲ್ಕು ದಿನಗಳಲ್ಲೇ ಅವರೂ ಇತರ ಎಲ್ಲರ ಹಾಗೆ ಸರಿಹೋಗುತ್ತಿದ್ದರು. ಕತ್ತಲಿರುವಾಗಲೇ ಏಳಬೇಕಾದವರಿಗೆ ಸೀಮೆಎಣ್ಣೆಯ ದೀಪಗಳೇ ಗತಿ. ಆ ವಿಷಯ ದಲ್ಲಿ ರಂಗಮ್ಮನದು ಸರ್ವ ಸಮತಾ ದೃಷ್ಟಿ. ಸ್ವತಃ ತಾವೇ ನಸುಕಿನಲ್ಲಿ ಎದ್ದಾಗಲೂ ರಂಗಮ್ಮ ವಿದ್ಯುದ್ದೀಪ ಉರಿಸುತ್ತಿರಲಿಲ್ಲ.

ಮೊದಲು ಮಿಣಿಮಿಣಿ ಬೆಳಕಾಗುವುದು ರಾಮಚಂದ್ರಯ್ಯನ ಮನೆಯಲ್ಲಿ, ಆತ

ಟಿ.ಆರ್.ಮಿಲ್ಲಿನಲ್ಲಿ ಸ್ಟೋರ್-ಕೀಪರ್. ಆರು ಗಂಟೆಗೆ ಸರಿಯಾಗಿ ಮಲ್ಲೇಶ್ವರದ ಅಂಗಡಿ ಬೀದಿ ಸೇರಿ, ಕರೆದೊಯ್ಯಲು ಬರುವ ಬಸ್ಸನ್ನೇರಬೇಕು. ಇನ್ನೂ ಮದುವೆ ಯಿಲ್ಲ ಮಹಾರಾಯನಿಗೆ. ಅದು ಮೂವರ ಸಂಸಾರ. ಬಡಕಲು ಬಡಕಲಾಗಿರುವ ತಾಯಿ ಮತ್ತು ಮದುವೆಗೆ ಸಿದ್ದಳಾಗಿರುವ ತಂಗಿ ಅಹಲ್ಯಾ. ಅಹಲ್ಯೆ ಬೇಗನೆ ಏಳು ತ್ತಿರಲಿಲ್ಲ. ಆದರೆ ಆಕೆಯ ಅಣ್ನ ರಾಮಚಂದ್ರನೆದ್ದು, ತಂಬಿಗೆ ನೀರಿನೊಡನೆ ಕತ್ತಲೆಯ ಓಣಿಯಲ್ಲಿ ನಡೆದು, ಸುಬ್ಬುಕೃಷ್ಣಯ್ಯನ ಮನೆಯ ಪಕ್ಕದಲ್ಲಿದ್ದ ಕಕ್ಕಸಿಗೆ ಹೋಗುತ್ತಿದ್ದ. ಅದು ಜೋಡಿ ಕಕ್ಕಸು. ವಠಾರದ ಗಂಡಸರಿಗೊಂದು. ಹೆಂಗಸರಿಗೊಂದು. ಹೆಂಗಸರ ವಿಭಾಗಕ್ಕೆ ಹಳೆಯ ಎರಡು ಸೀಮೆಎಣ್ಣೆ ಡಬ್ಬಗಳನ್ನು ಬಿಡಿಸಿ ತಗಡನ್ನು ಮರದ ಚೌಕಟ್ಟಿಗೆ ಒಡೆದು ಬಾಗಿಲು ತಯಾರಿಸದ್ದರು. ಗಾಳಿ ಬೀಸಿದಾಗಲೆಲ್ಲ ಬಡೆದು ಸದ್ದು ಮಾಡುತ್ತ ಆ ಬಾಗಿಲು ವಠಾರಕ್ಕೆ ಕಾವಲುಗಾರನಾಗುತ್ತಿತ್ತು.

ರಾಮಚಂದ್ರಯ್ಯನ ಮನೆಯಲ್ಲಿ ತಾಯಿ ಮಕ್ಕಳ ಮಾತು ಕೇಳಿದುಡನೆಯೇ

ಪದ್ಮಾವತಿಗೆ ಎಚ್ಚರ. ಆಕೆ ನಾರಾಯಣಿಯ ಮಕ್ಕಳಿಗೆ ಉಣಬಡಿಸಿದ ಮೂರು ಮಕ್ಕಳ ತಾಯಿ. ಪದ್ಮಾವತಿ ಎದ್ದು ಕುಳಿತು, ಕತ್ತಲೆಯಲ್ಲಿ ಕ್ಷಣಕಾಲ ಗಂಡನನ್ನು ನೋಡುತ್ತ ಲಿದ್ದು, ಬಳಿಕ ಮೈ ಮುಟ್ಟಿ ಎಬ್ಬಿಸುತ್ತಿದ್ದಳು. ರಾಜಾ ಮಿಲ್ಲಿನ ಟೈಂ ಕಿಪರ್ ನಾಗ ರಾಜರಾಯ "ಆಂ... ಊಂ.." ಎಂದು ಪ್ರತಿಭಟಿಸುತ್ತಿದ್ದ, ತಬ್ಬಿಕೊಂಡಿದ್ದ ನಿದ್ದೆ ಯನ್ನು ಬಿಟ್ಟುಕೊಡಲು ಇಷ್ಟಪಡೆದೆ.

ಪದ್ಮಾವತಿ ಗಂಡನ ತೋಳನ್ನು ಮುಟ್ಟಿ ಕುಲುಕಿ ಹೇಳುತ್ತಿದ್ದಳು

"ಏಳೀಂದ್ರೆ.. ಬೆಳಗಾಘೋಯ್ತು."

ಬೆಳಗು ಆಗಬೇಕಾದರೆ ಆರು ಘಂಟೆಯವರೆಗೂ ಎಲ್ಲರೂ ಕಾದಿರಬೇಕೆಂಬ

ನಿಯಮ ಎಲ್ಲಿದೆ? ಆಗಿನ್ನೂ ಐದೋ, ಈದೂಕಾಅಲೋ, ಸಹಸ್ರ ಸಂಸಾರಗಳಿಗೆ