ಪುಟ:Rangammana Vathara.pdf/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಂಗಮ್ಮನ ವಠಾರ

19

"ನಾನು ರಂಗಮ್ನೋರೆ....ಬಂದೆ, ಎತ್ತಿ ಹಾಕ್ತೀನಿ..."
ರಂಗಮ್ಮ ಗೊಣಗುತ್ತ ಹಿಂತಿರುಗಿ, ಓಣಿಯುದ್ದಕ್ಕೂ ನಡೆದು ಈ ತುದಿಗೆ
ಬಂದು, ತಮ್ಮ ಮನೆಯ ಬಾಗಿಲ ಬಳಿ ನಿಂತರು.
ರಾಜಮ್ಮ ರಂಗಮ್ಮನ ಪರವಾಗಿ ಕೊಳಾಯಿಗೆ ಬೀಗ ತಗಲಿಸಿ, ಬೀಗದ ಕೈಯನ್ನು
ತಂದುಕೊಟ್ಟಳು:
"ಆಯ್ತೇನು ನೀರು ಎಲ್ರಿಗೂ?"
"ಆಯ್ತು ರಂಗಮ್ನೋರೆ."
ಇದು ಕೂಡ ಪದ್ಧತಿಯ ಮಾತು.
ರಂಗಮ್ಮ ತಮ್ಮ ಮನೆಯೊಳಕ್ಕೆ ಬಂದರು. ಒಲೆ ಹಚ್ಚಬೇಕಿನ್ನು. ತಮಗಾಗಿ
ನೀರು ಬಿಸಿ ಮಾಡಿ, ಆಡುಗೆ ಮನೆಯಲ್ಲೇ ಇದ್ದ ಬಚ್ಚಲಲ್ಲಿ ಸ್ನಾನ ಮಾಡಬೇಕು. ಆ
ಬಳಿಕ ದೇವರ ಪೂಜೆ. ತಮ್ಮ ಒಪ್ಪೊತ್ತಿನ ಊಟಕ್ಕಾಗಿ ಅನ್ನ, ಸಾರು.
ಈ ದಿನ ಏನೂ ಬೇದವೆಂದು ತೋರಿತು ರಂಗಮ್ಮನಿಗೆ. ಕಾಯಿಸದೆ ಹಾಗೆಯೇ
ಇರಿಸಿದ್ದ ಅರ್ಧ ಪಾವು ಹಾಲನ್ನು ನೋಡುತ್ತ ಅವರು ಗೋಡೆಗೊರಗಿ ಕುಳಿತರು.
ಯೋಚನೆಗಳು ಅವರನ್ನು ಕಾಡಿದುವು.
ಏನು ಮಾದಬೇಕು? ತಾನೇನು ಮಾಡಬೇಕು?
ತಿಂಗಳಿಗೆ ಹದಿನೇಳರಂತೆ ಮೂರು ತಿಂಗಳು...ಮೂರು ಸಾರೆ ಹತ್ತು ಮತ್ತು
ಮೂರು ಸಾರೆ ಏಳು..ಮೂವತ್ತು ಮತ್ತು ಇಪ್ಪತೋಂದು...ಐವತೋಂದು....
ಅದಂತೂ ದೊರೆಯುವ ಆಸೆ ಇರಲಿಲ್ಲ. ಒಂದು ತಿಂಗಳ ಬಾಡಿಗೆಯನ್ನೂ
ಮುಂಗಡವಾಗಿ ಆ ಸಂಸಾರ ಕೊಟ್ಟಿರಲಿಲ್ಲ. ಹೀಗಾಗಿ ಅಷ್ಟು ಹಣವೂ ಕೈ ಬಿಟ್ಟು
ಹೋದ ಹಾಗೆಯೇ.
ಆದರೆ ಅಷ್ಟೇ ಹಣವೆಂದು ಹೇಳುವುದು ಹೇಗೆ? ಮುಂದಿನ ಹತಿ ಏನು?
ಆ ಮಹಾರಾಯ ಮನೆಯನ್ನಾದರೂ ಖಾಲಿ ಮಾಡಿದರೆ ಚೆನ್ನಾಗಿತ್ತು...
ಆದರೆ ಆತ ಖಾಲಿ ಮಾಡುವ ಯಾವ ಚಿಹ್ನೆಯೂ ಇರಲಿಲ್ಲ. ನಿರುದ್ಯೋಗ
ಬೇರೆ..ಮಕ್ಕಳನ್ನು ಸಾಕುವುದಕ್ಕಾದರೂ ಎರಡನೇ ಮದುವೆ? ಅಷ್ಟೆಲ್ಲ ಸಾಮರ್ಥ್ಯ
ಆ ಗಂಡಸಿಗೆ ಇದ್ದ ಹಾಗೆ ತೋರಲಿಲ್ಲ. ಅಂದ ಬಳಿಕ-?
ಬೇಕಾದಷ್ಟು ಕಾಲ ಬಾಡಿಗೆ ಇಲ್ಲದೆಯೇ ಇಲ್ಲಿ ಇರು- ಎಂದು ಹೇಳಿದ ಹಾಗೆ
ಅದು ಹೇಗೆ ಸಾಧ್ಯ? ಶ್ರೀರಾಮಪುರದಲ್ಲೇ ಪ್ರಖ್ಯಾತವಾಗಿರುವ ರಂಗಮ್ಮನ
ವಠಾರವೇನು ಧರ್ಮಛತ್ರ ಕೆಟ್ಟು ಹೋಯ್ತೆ?
ಹಾಗಾದರೆ ಆತನಿಗೆ ಹೇಳಬೇಕು, ಮನೆ ಖಾಲಿ ಮಾಡು ಅಂತ.
ಹಾಗೆ ಹೇಳುವುದು ಮಾಅತ್ರ ಸುಲಭವಾಗಿರಲಿಲ್ಲ.
ಏನು ಮಾಡಬೇಕೆಂಬುದು ತೋಚದೆ, ಹಲ್ಲಿನ ಸದ್ದು ಮಾಡುತ್ತ ಆಂ-ಹೂಂ-
ಎಂದು ನರಳುತ್ತ ರಂಗಮ್ಮ ಸಂಕಟಪಟ್ಟರು.
ನಾಲ್ವತ್ತು ವರ್ಷ ವಯಸ್ಸಾಗಿದ್ದಾಗಲೇ ವಿಧವೆಯಾಗಿದ್ದರು ರಂಗಮ್ಮ. ಆ