ಪುಟ:Rangammana Vathara.pdf/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

44

ಸೇತುವೆ

ಬರಕ್ಕೊಡೋದು, ನಾನು ತಗೊಳ್ಳೋದು."
ಶಂಕರನಾರಾಯಣಯ್ಯ ಸಣ್ಣಗೆ ನಕ್ಕ.
“ಹಾಗೆಯೇ ಆಗಲಿ. ಇನ್ನು ಬರ್ಲೇನು ನಾನು?"
“ಆಗಬಹುದಪ್ಪಾ. ನಾಳೇನೇ ಬರ್ತೀರೊ?"
“ಹೂಂ. ಸುಣ್ಣ ಹೊಡಿಸಿ ನೆಲ ಸಾರಿಸಿದೆ ತಾನೆ?"
ಆ ಕೆಲಸವಾಗಿರಲಿಲ್ಲ. ಮುಂಗಡ ಬಾಡಿಗೆ ಬಂದು ಕರಾರು ಪತ್ರವಾದ ಮೇಲೆ
ಮಾಡಿಸಿದರಾಯಿತೆಂದು ರಂಗಮ್ಮ ಸುಮ್ಮನೆ ಇದು ಬಿಟ್ಟಿದ್ದರು.
"ಅಯ್ಯೋ, ಅದೆಲ್ಲ ಎಷ್ಟರ ಕೆಲಸ! ಬೆಳಗ್ಗೆ ಮಾಡಿಸ್ತೀನಿ."
ಕರಾರು ಪತ್ರವನ್ನು ಪಡೆದುಕೊಂಡು ರಂಗಮ್ಮ ನಾಜೂಕಾಗಿ ಮಡಚಿ ಕೈಯಲ್ಲೆ
ಇರಿಸಿಕೊಂಡರು.
ಶಂಕರನಾರಾಯಣಯ್ಯನಿಗೆ ಒಂದು ತರಹೆಯಾಯಿತು. ಆತ ಹಣವನ್ನೂ
ಕೊಟ್ಟಿದ್ದ, ಸಹಿಯನ್ನೂ ಹಾಕಿದ್ದ. ಆದರೆ ಹಣ ತಲಪಿದುದಕ್ಕೆ ವಠಾರದ ಒಡತಿ
ಯಿಂದ ರಶಿತಿ ಬಂದಿರಲಿಲ್ಲ.
"ಹೊರಡ್ತೀರಾ ಹಾಗಾದರೆ?"
-ಎಂದು ರಂಗಮ್ಮ ಕೇಳಿದರು.
“ಹೂಂ."
ಆತ ಎದ್ದು ನಿಂತ. ಪೆಚ್ಚು ಮೋರೆಯ ಲಕ್ಷಣ ಮೊದಲ ಬಾರಿಗೆ ಮೂಡಿ
ಮರೆಯಾಯಿತು.
“ಹಣ ತಲಪಿದ್ದಕ್ಕೆ ರಶೀತಿ ಕೊಡ್ತೀರಾ ರಂಗಮ್ನೋರೆ?
"ರಶೀತೀನೆ? ಏನೂ ಪರವಾಗಿಲ್ಲ. ಹೋಗ್ಬಿಟ್ಟು ಬನ್ನಿ"
ಶಂಕರನಾರಾಯಣಯ್ಯ ಮನಸ್ಸಿನೊಳಗೇ ಅನುಮಾನಿಸಿದರೂ ಹೊರಗೆ ಒಣ
ನಗೆ ತೋರುತ್ತಾ ಹೊರಡಲು ಸಿದ್ಧನಾದ.
ಆತನ ಪ್ರಶ್ನೆಯಿಂದ ಸ್ವಲ್ಪ ನೊಂದುಕೊಂಡವರ ಹಾಗೆ ರಂಗಮ್ಮ ಮತ್ತೂ
ಹೇಳಿದರು:
"ಇಲ್ಲಿ ಯಾರನ್ನು ಬೇಕಾದರೂ ಕೇಳಿ ನೋಡಿ. ನಮ್ಮ ವಠಾರದಲ್ಲಿ ರಶೀತಿ
ಕೊಡೋ ಪದ್ದತಿನೇ ಇಲ್ಲ."
"ನನಗೆ ಗೊತ್ತಿರ್ಲಿಲ್ಲ, ಆದ್ದರಿಂದ ಕೇಳ್ದೆ...ನಾವು ಈಗಿರೋ ಮನೆಯ ಮಾಲಿ
ಕರು ರಶೀತಿ ಕೊಡ್ತಾರೆ. ನೀವು ಇಷ್ಟು ಹೇಳಿದ್ಯೆಲೆ ಏನೂ ಪರವಾಗಿಲ್ಲ, ಬರ್ತೀನಿ."
"ಆಗಲಪ್ಪಾ."
ಈ ದಿನ ಆತನೊಬ್ಬನೇ ಅಂಗಳ ದಾಟಿ ಬೀದಿಗಿಳಿದ. ರಂಗಮ್ಮ ಬೀಳ್ಕೊಡಲು
ಬರಲಿಲ್ಲ.
ಆತ ಹೋದೊಡನೆಯೇ ಅಹಲ್ಯಾ ರಂಗಮ್ಮನ ಮನೆ ಬಾಗಿಲಲ್ಲಿ ನಿಂತಳು.