ಪುಟ:Rangammana Vathara.pdf/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಂಗಮ್ಮನ ವಠಾರ

49

ನಾದರೂ ಒಳ್ಳೆಯ ಮಾತನಾದಲು ರಂಗಮ್ಮ ಬಯಸಿದರು.
"ಅದಕ್ಕೆನಂತೆ ಈಗ? ಇನ್ನೊಂದ್ಸಲ ಖಾಲಿಯಾದಾಗ ನಿಮಗೇ ಕೊಡ್ತೀನಿ."
ಒಳಗೆ ಮೂಲೆಯ ಬಚ್ಚಲಲ್ಲಿ ಕೈ ತೊಳೆಯುತ್ತಿದ್ದ ಜಯರಮು ಹೇಳಿದ:
"ಇನ್ನೊಂದ್ಸಲ ಖಾಲಿಯಾದಾಗ?ಬೇರೆ ಯಾರನ್ನ ಕಳಿಸ್ಬೇಕೊಂತೆ ಮಾಡಿದೀರಿ
ರಂಗಮ್ನೇರೆ!"
ಕೆಟ್ಟ ಹುಡುಗ 'ಕಳಿಸು'ವ ಮಾತನ್ನಾಡಿ ನಾರಾಯಣಿಯ ನೆನಾಪು ಹುಟ್ಟಿಸಿದ.
"ಅದೆಂಥ ಮಾತೋ..." ಎಂದಳು ತಾಯಿ, ಮಗನನ್ನುದೇಶಿಸಿ, ಬೇಸರದ
ಧ್ವನಿಯಲ್ಲಿ.
"ನೋಡು, ನೋಡು-ಹ್ಯಾಗೆ ಆದಡ್ತನೇಂತ.ಬರ್ತ ಬರ್ತ ಯಾಕೋ ಅತಿ
ಆಘೋಯ್ತುಮ್ಮ ನಿನ್ಮಗಂದು," ಎಂದು ರಂಗಮ್ಮ ನೊಂದ ಧ್ವನಿಯಲ್ಲಿ ಅಂದರು.
ಮತ್ತೆ ಅಲ್ಲಿರಲು ಮನಸ್ಸಾಗದೆ ಹಿಂತಿರುಗಿ ಹೊರಟರು.
"ಬರ್ತೀನಮ್ಮ."
"ಹೊಂ ರಂಗಮ್ಮ್ನೋರೆ."
"ಕಾಗದ ಬಂದಿತ್ತೇನು ನಿಮ್ಮ ಯಜಮಾನರ್ದು? ಯಾವೂರಲ್ಲಿದಾರೆ ಈಗ?"
"ಹೂದ ವಾರ ದವಣಗೆರೆಯಿಂದ ಬ್ಂದಿತ್ತು."
"ಯಾವತ್ತು ಬರ್ತಾರಂತೆ?"
"ಈ ತಿಂಗಳ ಕೊನೇಲಿ ಬರ್ತಿನೀಂತ ಬರೆದಿದಾರೆ.
"ಚಂದ್ರಶೆಖರಯ್ಯನ ಕೊಠಡಿ ದಾಟುತ್ತ ರಂಗಮ್ಮ ಕೇಳಿದರು:
"ಏನು ಈತ ಊರಲ್ಲೆ ಇಲ್ವೋ ಹ್ಯಾಗೆ?"
"ನಿನ್ನೆಯಿಂದ ಬಂದಿಲ್ಲ.ಇಲ್ಲಂತ ತೋರುತ್ತೆ."
"ಇವನ್ನೊಬ್ಬ ಮನುಷ್ಯ.ಅದ್ಯಾಕೆ ಹೀಗಿದಾನೋ....
"ಮೆಟ್ಟಲು ಇಳಿಯತೊಡಗುತ್ತ ರಂಗಮ್ಮ ಹೇಳಿದರು;
"ಹೊಂ.ಬರ್ತಿನಮ್ಮ,ಊಟ ಮುಗಿಸಿ ದೀಪ ಆರಿಸಿ ಮಲಕೊಂಡ್ಬಿಡಿ.
"ಆ ಮಾತಿಗೆ ಉತ್ತರ ಬರಲಿಲ್ಲ. ಧಡಾರನೆ ಬಾಗಿಲು ಹಾಕಿದ ಸದ್ದು ಮಾತ್ರ
ಕೇಳಿಸಿತು.
ಬಲು ನಿಧಾನವಾಗಿ ರಂಗಮ್ಮ ಇಳಿಯುತ್ತಿದ್ದರು. ಇಪ್ಪತ್ತೈದು ವರ್ಷಗಳ
ಹಿಂದೆ ಅವರ ಗಂಡ ಕೃಷ್ಣಪ್ಪನವರು ಆ ಮಹಡಿ ಕಟ್ಟಿಸುತ್ತಿದ್ದ ಕಾಲ. ಆಗ ಎಷ್ಟೊಂದು
ಸುಲಭವಾಗಿ ಅವರು ಹತ್ತಿ ಇಳಿಯುತ್ತಿದ್ದರು! ಆಗಲೆ ಅವರಿಗೆ ನಾಲ್ವತ್ತು ವರ್ಷ
ವಯಸ್ಸು.ದೊಡ್ಡವರಾಗಿದ್ದ ಮೂವರು ಮಕ್ಕಳ ತಾಯಿ. ಆದರು ಅವರು ದೃಢ
ಕಾಯಕರಾಗಿದ್ದರು.ದಣಿವು ಎಂಬುದನ್ನೇ ಕಂಡಿರಿಯದ ದೇಹ ಅವರದು.
ಈಗ, ಒಮ್ಮೆ ಮಹಡಿ ಸಂದರ್ಶನ ಮಾಡಿಬರುವುದೆಂದರೆ ತಿರುಪತಿ ಬೆಟ್ಟವನ್ನು