ಪುಟ:Rangammana Vathara.pdf/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಂಗಮ್ಮನ ವಠಾರ

51

"ಸುಮ್ನೆ ಕೊಗ್ದೆ ಅಗಲಿ, ಕೆಲಸ ಆಗಲಿ, "ಎಂದು ರಂಗಮ್ಮ ಇನ್ನೊಂದು
ಕಿಟಿಕಿಯತ್ತ ತೆರಳಿದರು.
ಹಾಗೆ ರಂಗಮ್ಮ ರಾತ್ರಿ ಹೊತ್ತು ಇನಕಿ ನೋಡುವುದೇನೂ ಯಾರಿಗೂ ಹೊಸ
ತಾಗಿರಲಿಲ್ಲ. ಎದುರು ಮನೆಯ ಕಿಟಕಿಯ ಬಳಿಯಿಂದಲೂ ರಂಗಮ್ಮ ಮಾತನಾಡು
ತ್ತಿದದು ಉಪಧ್ಯಾಯರು ಹೆಂಡತಿಗೆ ಕೇಳಿಸುತ್ತಿತ್ತು.
"ಇನಸ್ಪೆಕ್ಟ್ರು ಬಂದಿಲ್ವಾ ಇನ್ನೂ?"
"ಇಲ್ಲ ಕಣ್ರೀ "
ಅದು ಪೋಲೀಸನ ಹೆಂಡತಿ ಸರೋಜಮ್ಮನ ಸ್ವರ.
"ಹುಡುಗ್ರಿಗೆಲ್ಲಾ ಊಟ ಆಯ್ತೇನು?"
" ಮಲಕ್ಕೊಂಡ್ಬಿಟ್ಟಿವೆ ಆಗ್ಲೇ".
"ಏನು ಮಾಡ್ದೆ ಅಡುಗೆ?"
"ಏನೂ ಇಲ್ಲ್ ರಂಗಮ್ಮೋರೆ....ಮಧ್ಯಾಹ್ನ್ ದ್ದೇ ಇತ್ತು ಸ್ವಲ್ಪ...."
"ಆಗಲೀಮ್ಮ ಬರ್ತೀನಿ "
ರಂಗಮ್ಮ ಬೇರೆ ಬಾಗಿಲುಗಳ ಬಳ್ಳಿ ಬಂದರು. ಬಾಗಿಲು ಮುಚ್ಚಿದ್ದ ಕಡೆ ಕಿಟಕಿ
ಗಳ ಮೂಲಕ ಮಾತನಾಡಿದರು.
-"ಮಲಕ್ಕೊಂಡ್ಬಿಟ್ಯಾ ರಾಜಮ್ಮ?"
-"ಹುಡುಗರು ಇನ್ನೂ ಓದ್ತಾನೆ ಇದಾರೊ?ಓದೀಪಾ ಚ್ಚೆನ್ನಾಗಿ ಓದಿ."
-"ಏನು ಮೀನಾಕ್ಷೀ ...ಎಲ್ಲಿ ನಿನ್ನ ಗಂಡ ಬರೋದು ಹೋಗೋದು ಗೊತ್ತೇ
ಆಗಲ್ವೆ..."
-"ಏನಾಮ್ಮ, ಯಜಮಾನ್ರಿಂದ ಕಾಗ್ದ ಇದೆಯೋ?"
-"ಹಿಟ್ಟು ರುಬ್ಬಿದ್ದಾಯ್ತೆ ಕಮಲಮ್ಮ?"
-"ಇನ್ನೂ ಸವಾರಿ ಬಂದಿಲ್ವೆ ಪದ್ಮಾವತಿ ?"
-"ಮಲಕ್ಕೊಂಡ್ಬಿಟ್ಲೇನು ಅಹಲ್ಯಾ? ಎಲ್ಲಿ ಮಗ? ಅಂಗಡಿ ಬೀದಿಗೆ
ಹೋದ್ನೆ?"
ರಂಗಮ್ಮ ಅಲ್ಲಿಂದ ಮುಂದಕ್ಕೆ ಹೋಗಲಿಲ್ಲ. ಒಂದು ಖಾಲಿ ಮನೆ,ಆ ರಾತ್ರೆಯ
ಮಟ್ಟಿಗೆ.ನಾರಾಯಣಿ ಇದದ್ದು.ಇನ್ನೊಂದು ಮಿನಾಕ್ಷಮ್ಮನ ಮನೆ. ಸುಬ್ಬು
ಕೃಷ್ಣಯ್ಯ ಇನ್ನೂ ಬಂದಿರಲಿಲ್ಲ.
ತಮ್ಮ ಮನೆಗೇ ರಂಗಮ್ಮ ವಾಪಸು ಬಂದು ಕೈಕಾಲು ತೊಳೆದು, ಗೋಡ
ಗೊರಗಿ ಕುಳಿತು,ದೇವರ ಹೆಸರನ್ನು ಜಪಿಸತೊಡಗಿದರು... ನಾಲಿಗೆ ಮೌನವಾಗಿ ದೇವರ
ಹೆಸರನ್ನು ತೊದಲುತ್ತಿದ್ದರೂ ಯೋಚನೆ ವಠಾರದ ಬೇರೆ ಬೇರೆ ಸಂಸಾರಗಳ ಬಳಿ
ಸುಳಿಯತ್ತಲೇ ಇತ್ತು.. ಅಷ್ಟೊಂದು ಜನರೆಡೆಯಲ್ಲಿ ತಾವು ಏಕಾಕಿನಿ ಎಂಬ ಭಾವನೆ
ಅವರಲ್ಲಿ ಮೂಡಲಿಲ್ಲ.