ಪುಟ:Rangammana Vathara.pdf/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

52

ಸೇತುವೆ

ಅವರು ಬಾಗಿಲನ್ನು ಅಡ್ಡ ಮಾಡಿದರು. ಯಾರೋ ಒಳಕ್ಕೆ ಹಾದು ಒಳಕ್ಕೆ ಹಾದು ಒಣಿಗಿಳಿದು
ನಡೆದ ಹಾಗೆ ಭಾಸವಾಯಿತು. ಚಪ್ಪಲಿಯ ಕ್ರಮಬದ್ಧ ನಡಿಗೆಯ ಸಪ್ಪಳ. ಸುಬ್ಬು
ಕೃಷ್ಣಯ್ಯನೇ ಇರಬೇಕೆ೦ದು ರ೦ಗಮ್ಮ ಊಹಿಸಿದರು.
ಊಹೆ ಸರಿಯಾಗಿತ್ತು, ಐದು ನಿಮಿಷಗಳಲ್ಲೆ, ಅಡ್ಡ ಪ೦ಚೆಯುಟ್ಟ ಎದೆಯ
ಮೇಲೋ೦ದು ಅ೦ಗವಸ್ತ್ರ ಹಾಕಿಕೊ೦ಡು ಸುಬ್ಬು ಕೃಷ್ಣಯ್ಯ ಒಳಕ್ಕೆ ಬ೦ದ.
"ಕರೆದಿರ೦ತೆ."
"ಹೊನಪ್ಪಾ,ಬಾ...."
"ಯಾರೋ ಬಡವರ ಬರ್ತಾರ೦ತೆ ನಾಳೆ"
"ಹೌಹೌದು. ಅದಕ್ಕೆ ನಿನ್ನ ಕರೆದ,"
ಸುಬ್ಬುಕೃಷ್ಣಯ್ಯ ಕುಳಿತು ಸಿದ್ಧನಾದ. ರಂಗಮ್ಮ ಹಾಸಿಗೆಯ ಸುರುಳಿಯ ಕೆಳಗೆ
ಮಡಚಿ ಇರಿಸಿದ ಕರಾರು ಪತ್ರವನ್ನು ಹೊರ ತೆಗೆದು ಆತನ ಕೈಗಿತ್ತರು. ವಿದ್ಯುದ್ದೀಪದ
ಬೆಳಕು ಸಾಲದೆ ಹೋದರೂ ಸ್ವಲ್ಪ ಕಷ್ಟಪಟ್ಟು ಆತ ಓದಿ ಹೇಳಿದ. ಕಿವಿಗೊಟ್ಟು
ಕೇಳಿದ ಮೇಲೆ ರ೦ಗಮ್ಮ ಪ್ರಸ್ನಿದರು:
"ಸರಿಯಾಗಿದೆ ತಾನೆ?"
"ಓಹೋ. ಸರಿಯಾಗದೆ," ಅಲ್ಲಾ?"
"ಚೆನ್ನಾಗಿಯೇ ಇದೆ."
"ಒಳ್ಳೆಯವನೂಂತ್ಲೇ ತೋರುತ್ತಪ್ಪಾ."
ಮೊದಲ ನೋಟಕ್ಕೇ ಹಾಗೆ ತೀರ್ಮಾನಕ್ಕೆ ಬಂದು ಅಂತಹ ಪ್ರಮಾಣ ಪತ್ರ ಪತ್ರ
ರಂಗಮ್ಮ ಕೊಟ್ಟದು ಅದೇನೂ ಹೊಸತಾಗಿರಲಿಲ್ಲ.
ಶ೦ಕರನಾರಯಣ್ಣಯ್ಯ ತಮಾಷೆಯಾಗಿ ಆಡಿದ ಮಾತುಗಳು ನೆನಪಿಗೆ ಬ೦ದು
ರ೦ಗಮ್ಮ ನಸುನಕ್ಕರು.
"ಮಾತು ಎಷ್ಟು ಚೆನಾಗಿ ಆಡ್ತಾನೆ ಅಂತೀಯಾ."
ಸುಬ್ಬಕೃಷ್ಣಯ್ಯನಿಗೆ ಆಗಲೇ ಬೇಸರ ಬಂದಿತ್ತು. ಚುರು ಚುರೆನ್ನುತ್ತಿತ್ತು
ಹಸಿದ' ಹೊಟ್ಟೆ. ದಣಿದಿದ್ದ ವಿಶ್ರಾ೦ತಿಯನ್ನು ಯಾಚಿಸುತ್ತಿತ್ತು.
"ನಾಳೆ ಬರ್ತಾರೆ ಅಲ್ವೆ?" ಎಂದ ಸುಬ್ಬಕೃಷ್ಣಯ್ಯ, ಮಾತು ಮುಗಿಸ ಬಯ
ಸುತ್ತಾ.
ಹೂಂ. ನಾಳೇನೆ."
ಸುಬ್ಬುಕೃಷ್ಣಯ್ಯ ಕಣ್ಣುಗಳು ಜಡವಾದುವು. ಆತ ಬಾಯಿ ಆಕಳಿಸಿ ಚಿಟಕೆ
ಹೊಡೆದ.
"ಆಗಲಿ ಹೋಗಪ್ಪಾ...ನಿನಗೂ ಆಯಾಸವಾಗಿದೆ. ಇಷ್ಟೇ. ಇಷ್ಟಕ್ಕೇ ಕರೆದೆ."
ಅಷ್ಟು ಹೇಳಿ ರಂಗಮ್ಮ, ಅಮೂರ್ಣವಾಗಿದ್ದ ಕೆಲಸವೂ ಮುಗಿದಂತಾಯಿತೆಂದು,