ಪುಟ:Rangammana Vathara.pdf/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

56

ಸೇತುವೆ

ಆಡ್ಕೊಳ್ಳೀ..."
ಹುಡುಗರು ಮನಸ್ಸಿಲ್ಲದ ಮನಸ್ಸಿನಿಂದ ಹೊರಹೋದರು.
ಸಂಸಾರದೊಡನೆ ರಂಗಮ್ಮನ ಸ್ನೇಹ ಆರಂಭವಾಯಿತು.
"ಮಗು ಆಳ್ತಿದೆಯೆಲ್ಲಾ. ಹಸಿವಾಗಿದೆಯೋ ಏನೋ..."
"ಅಯ್ಯೋ! ಅವಳಿಗೇನು ಧಾಡಿ? ಅಳ್ತಾ ಇರೋದೇ!"
ಆ ಹೆಂಗಸಿನ ಉತ್ತರ ಕೇಳಿ ರಂಗಮ್ಮ ಬೆಚ್ಚಿ ಬಿದ್ದರು. ಆದರೂ ಸಾವರಿಸಿ
ಕೊಂಡು ಮಗುವಿನೆದುರು ನಿಂತು, ತಮ್ಮ ಹಲ್ಲಿಲ್ಲದ ಬಾಯಿಯನ್ನು ತೋರಿಸುತ್ತ,
ಮುಖಚೇಷ್ಟೆ ಮಾಡಿದರು. ಉಸಿರಾಡಲು ಬೇಕಾದ ಗಾಳಿಯೂ ದೊರೆತು, ತಮಾಷೆ
ಯಾಗಿದ್ದೊಂದು ಮುಖವನ್ನೂ ಕಂಡು, ಮಗು ಅಳು ನಿಲ್ಲಿಸಿ ನಕ್ಕಿತು.
"ಥತ್ ಮು೦ಡೆ," ಎಂದು ರಂಗಮ್ಮ ಬಲು ಪ್ರೀತಿಯಿಂದ ಮಗುವಿನ ಗಲ್ಲ
ಮುಟ್ಟಿದರು. ಶಂಕರನಾರಾಯಣಯ್ಯ ಮತ್ತು ಆತನ ಹೆಂಡತಿ ಪರಸ್ಪರರನ್ನು
ನೋಡಿ ನಸುನಕ್ಕರು.
ಶಂಕರನಾರಾಯಣಯ್ಯ ಚಾಪೆಯ ಸುರುಳಿಯನ್ನು ಬಿಚ್ಚಿ, ಪೊರಕೆಗಳನ್ನು
ಮೂಲೆಗೆಸೆದು, ಚಾಪೆಯನ್ನು ಒಂದು ಬದಿಯಲ್ಲಿ ಹಾಸಿ ಹೇಳಿದ:
"ಕೂತ್ಕೊಳ್ಳಿ ರಂಗಮ್ನೋರೇ, ನಿಂತೇ ಇದೀರಲ್ಲಾ!"
"ಅಯ್ಯೋ! ಸರಿ ಹೋಯ್ತು. ಇದೇನು ಉಪಚಾರ? ನೀವಿನ್ನೂ ಸಾಮಾನು
ಗಂಟುಗಳನ್ನ ಬಿಚ್ಚೇ ಇಲ್ಲ."
"ಅದೇನು ಮಹಾ? ರಾತ್ರೆಯೆಲ್ಲ ಇದೆಯಲ್ಲ. ನಿಧಾನವಾಗಿ ಮಾಡ್ಕೋತೀವಿ."
ಆ ಮಾತು ಕೇಳುತ್ತ ರಂಗಮ್ಮನ ಹುಬ್ಬುಗಳು ಪರಸ್ಪರ ಸಮೀಪಿಸಿದುವು. ಈ
ದಂಪತಿಯ ಸಡಗರದಲ್ಲಿ ಆ ರಾತ್ರಿಯೆಲ್ಲಾ ವಿದ್ಯುದ್ದೀಪ ಉರಿಸಬೇಕಾಗಬಹುದೇನೋ
ಎಂದು ಅವರು ಚಿಂತಿಸಿದರು. ಆದರೆ ಆ ವಿಷಯ ಪ್ರಸ್ತಾಪಿಸಿ ಮೊದಲ ದಿನವೇ
ವಿರಸಕ್ಕೆ ಎಡೆಗೊಡಲು ಅವರು ಸಿದ್ಧರಿರಲಿಲ್ಲ.
ಆ ಶಂಕರನಾರಾಯಣಯ್ಯನೋ ಬೇಕು ಬೇಕೆಂದೇ ಹಾಗೆ ಹೇಳಿದ್ದ. ಎಷ್ಟು
ಹೊತ್ತಿಗೆ ಎಂಬುದು ಗೊತ್ತಿಲ್ಲವಾದರೂ ವಠಾರದ ಒಡತಿ ರಾತ್ರೆ ದೀಪಗಳನ್ನೆಲ್ಲ ಆರಿ
ಸುವ ಪದ್ಧತಿ ಇದೆಯೆಂದು ಮೊದಲ ಸಾರಿ ಅಲ್ಲಿಗೆ ಬಂದಾಗಲೇ ಆತ ತಿಳಿದುಕೊಂಡಿದ್ದ.
ರಂಗಮ್ಮನ ಮುಖದ ಮೇಲೆ ಮೂಡಿ ಮಾಯವಾದ ಕಳವಳ ಆತನಿಗೆ ಗೋಚರಿ
ಸದೆ ಇರಲಿಲ್ಲ. ಗಂಡನ ತುಂಟತನ ಹೆಂಡತಿಗೂ ಅರಿವಾಯಿತು.
ಬಂದವರನ್ನು ಸಂತುಷ್ಟಪಡಿಸುವ ಮಾತನ್ನೇ ರಂಗಮ್ಮ ಆಡಬಯಸಿದರು.
"ಸಾಮಾನು ಎತ್ತಿಟ್ಟ ತಕ್ಷಣ ಹೇಳೀಪ್ಪಾ. ನಲ್ಲಿ ಬೀಗ ತೆಗೀತೀನಿ. ನೀರು
ಹಿಡಿಕೊಡೀರಂತೆ."
ಶಂಕರನಾರಾಯಣಯ್ಯನೇನೊ "ಆಗಲಿ" ಎಂದ. ಆದರೆ ಆತನ ಹೆಂಡತಿ ಸುಮ್ಮ
ನಿರಲಿಲ್ಲ.