ರಂಗಮ್ಮನ ವಠಾರ
61
ಹುಡುಗರೆಲ್ಲ ತಮ್ಮ ತಮ್ಮ ಮನೆಗಳನ್ನು ಸೇರಿದರು. ಹಕ್ಕಿಗಳ ಗೂಡಿನಲ್ಲಿ ಸಂಜೆ
ಹೊತ್ತು ಚಿಲಿಪಿಲಿ ಸದ್ದಾಗುವ ಹಾಗೆ, ಮನೆಗಳಿಂದ ವಿವಿಧ ವಯೋಮಾನದ ಮನುಷ್ಯ
ಸ್ವರಗಳು ಹೊರಟುವು.
ಪೋಲೀಸನ ಹೆಂಡತಿ "ಕಿಟ್ಟೀ ಕಿಟ್ಟೀ" ಎಂದು ಕೂಗುತ್ತ ಮುಂಭಾಗದಿಂದ
ಓಣಿಗೆ ಬಂದಳು.
"ಮೀನಾಕ್ಷಮ್ಮಾ, ನಮ್ಮ ಕಿಟ್ಟೀ ಇದಾನೇನ್ರಿ ನಿಮ್ಮನೇಲಿ?" ಎನ್ನುತ್ತ ಆಕೆ
ಓಣಿಯ ಕೊನೆಯನ್ನು ತಲುಪಿದಳು.
"ಇಲ್ಲ ಕಣ್ರೀ,ನಮ್ಮೋನು ಆಗ್ಲೇ ಬಂದ," ಎಂದು ಉತ್ತರವಿತ್ತುದಾಯ್ತು.
ಆದರೂ ಮೀನಾಕ್ಷಮ್ಮನ ಬಾಗಿಲ ಬಳಿ ಇಬ್ಬರೂ ಸೇರಿದರು.ಪ್ರಶ್ನೋತ್ತರಗಳಾ
ದುವು."ಅಡುಗೆ ಆಯ್ತೆ?","ಏನು ಮಾಡಿದ್ರಿ?",ನೀವೇನು ಮಾಡಿದ್ರಿ?"
ಆದರೂ ಪೋಲೀಸನ ಹೆಂಡತಿಯ ದ್ರಿಷ್ಟಿ ಎದುರು ಮನೆ ಕಡೆಗೆ ಇತ್ತು. ಗಂಡ
ಹೆಂಡತಿ ಸಾಮಾನುಗಳನ್ನೆತ್ತಿ ಇಡುತ್ತಿದ್ದುದನ್ನು ಆಕೆ ಈಕ್ಷಿಸಿದಳು. ಕಿಟ್ಟಿಯನ್ನು
ಹುಡುಕುವ ನೆಪ ಮಾಡಿ ಅಲ್ಲಿಗೆ ಬಂದುದೇ ಆ ಉದ್ದೇಶದಿಂದ.
ಗಂಡಸರೂ ಅಷ್ಟೆ. ಕಕ್ಕಸಿಗೆಂದು ಹೊರಟವರು ಕೊನೆಯ ಮನೆ ಬಂದಾಗ
ಒಳ್ಳಕ್ಕೆ ದೃಷ್ಟಿ ಬೀರುತ್ತಿದ್ದರು. ವಠಾರದಲ್ಲಿನ್ನು ತಮ್ಮ ಜತೆ ಇರಲು ಬಂದ ಹೊಸ
ಗಂಡಸು ಯಾರೆಂದು ತಿಳಿಯುವ ಸ್ವಾಭಾವಿಕ ಕುತೂಹಲ ಅವರಿಗೆ. ಗಂಡಸನ್ನು
ನೋಡಿದ ಮೇಲೆ,ಹಾಗೆಯೇ ಆತನ ಕೈ ಹಿಡಿದಾಕೆಯನ್ನೂ ಅವರು ನೋಡದೆ ಇರು
ತ್ತಿರಲಿಲ್ಲ.
ರಂಗಮ್ಮ ವಿಚಾರಿಸಿಕೊಳ್ಳಲು ಮತ್ತೆ ಬರಲಿಲ್ಲ.ಇದು ತನ್ನ ಹೆಂಡತಿಯ ಪ್ರಭಾವ
ಎಂಬುದು ಶಂಕರನಾರಾಯಣಯ್ಯನಿಗೆ ಸ್ಪಷ್ಟವಾಗಿತ್ತು.
ಕತ್ತಲಾಗಿ ಒಂದು ಘಳಿಗೆಯಾಗುವುದರೊಳಗೇ ಮನೆಗೊಂದು ಸ್ವರೂಪ ಬಂತು.
ಮೇಜು ಕುರ್ಚಿಗಲನ್ನೂ ಶಂಕರನಾರಾಯಣಯ್ಯ ಒಂದು ಮೂಲೆಯಲ್ಲಿ ನಿಲ್ಲಿಸಿದ.
ಮಗು ಚಾಪೆಯ ಮೇಲೆಯೆ ನಿದ್ದೆ ಮಾಡಿತ್ತು.ತಂದೆ ಆಯಾಸ ಪರಿಹಾರ
ಕ್ಕೆಂದು ಅದರ ಬಳಿಯಲ್ಲಿ ಕುಳಿತುಕೊಂಡ.ತನ್ನ ಕೊಳಕು ಕೈಯಿಂದ ಮಗುವನ್ನು
ಮುಟ್ಟಲು ಮನಸ್ಸಾಗಲಿಲ್ಲ.ಬಾಗಿ ನೋಡಿದಾಗ ಲಂಗದ ಕೆಳಭಾಗವೂ ಚಾಪೆಯೂ
ಒದ್ದೆಯಾಗಿದ್ದಂತೆ ಕಂಡಿತು.ಮಗುವಿನ ತಂದೆ,ಮಗುವಿನ ತಾಯಿಯನ್ನು ಗದರಿಸ
ಬಯಸಿದ.
"ನೋಡೆ,ನಿನ್ನ ಮಗಳು ಏನ್ಮಾಡಿದಾಳೇಂತ!"
ಚಂಪಾ,ದೂರದಿಂದಲೇ ಅದೇನೆಂದು ಊಹಿಸಿಕೊಂಡು ಹೇಳಿದಳು:
"ಅಷ್ಟೆ ತಾನೆ?ತೀಥ ಪ್ರೋಕ್ಷಣ;ಪಾವನವಾಯ್ತು ಮನೆ."
ತೊಟ್ಟಿಲಿನೊಳಗೆ,ಗೋಡೆಯನ್ನು ಅಲಂಕರಿಸಬೇಕಾದ ಕಟ್ಟು ಹಾಕಿದ ಚಿತ್ರ
ಗಳಿದ್ದುವು.ಅದನ್ನೆಲ್ಲಾ ಹೊರತೆಗೆದು ಗೋಡೆಗೆ ಮೊಳೆ ಬಡಿದು ತಗಲ ಹಾಕುವ