ಪುಟ:Rangammana Vathara.pdf/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಂಗಮ್ಮನ ವಠಾರ

63

ಆ ಅಪೇಕ್ಷೆಯೇ ಇರಲಿಲ್ಲ.
ಅಡ್ಡಪಂಚೆಯುಟ್ವು ಬೇರೆ ಜುಬ್ಬ ಧರಿಸುತ್ತ ಆತ ಹೇಳಿದ,
"ಇವತ್ತು ಎಷ್ಟಾಗುತ್ತೋ ಅಷ್ಟು ನೀರು ತುಂಬಿಸ್ಕೊಂಡ್ಬಿಡೇ. ನಾಳೆಯಿಂದ
ಬಿಂದಿಗೆ ಲೆಕ್ಕ ಹಿಡೀತಾರೆ."
"ಸರಿ! ಸರಿ!"
ಚಂಪಾ ಬಲಬದಿಯ ಮನೆಗೆ ಹೋಗಿ ಬಾಗಿಲಲ್ಲೆ ನಿಂತಳು.
ನಾಗರಾಜರಾಯ ಅಲ್ಲಿದ್ದ.
"ಯಾರೋ ಬಂದಿದಾರೆ ನೋಡೇ," ಎಂದು, ಅಡುಗೆ ಮನೆಯಲ್ಲಿದ್ದ ಹೆಂಡತಿಗೆ
ಆತ ಕರೆದು ಹೇಳಿದ.
ಪದ್ಮಾವತಿ ಹೊರಬಂದಳು. ಮುಗುಳುನಗುತ್ತಿದ್ದ ಚಂಪಾಳನ್ನು ಕಂಡು ಅರೆಕ್ಷಣರ
ಆಕೆಗೆ ಕಕ್ಕಾವಿಕ್ಕಿಯಾಯಿತು.
"ಏನಾದರೂ ಬೇಕಾಗಿತ್ತೆ?" ಎಂದು ಆಕೆ ಕೇಳಿದಳು.
"ನೀವು ದಿನಾಗಲೂ ಹಸುವಿನ ಸೆಗಣಿ ಎಲ್ಲಿಂದ ತರ್ತೀರಾ?"
"ಅದೊಂದು ಇಲ್ಲಿ ಸಿಗೋದು ಸ್ವಲ್ಪ ಕಷ್ಟವೇ. ಸಾಮಾನ್ಯವಾಗಿ ಬೆಳಗ್ಗೆ
ಹುಡುಗರನ್ನ ಬೀದಿ ಉದ್ದಕ್ಕೂ ಕಳಿಸ್ತೀವಿ. ಎಲ್ಲಿಯಾದರೂ ಸಿಗುತ್ತೆ, ಒಮ್ಮೆ ತಂದರೆ
ಐದಾರು ದಿವಸಕ್ಕೆ ಸಾಕಾಗುತ್ತೆ."
"ಓ.... ಹಾಗೇನು?... ಈಗ ಅಡುಗೆ ಮನೆ ಶುದ್ಧಿ ಮಾಡೋಕೆ ಒಂದು ಚೂರು
ಬೇಕಾಗಿತ್ತು. ಸ್ವಲ್ಪ ಕೊಡ್ತೀರಾ?"
"ಅದಕ್ಕೇನ್ರೀ, ತಾಳಿ ಕೊಡ್ತೀನಿ."
ಪದ್ಮಾವತಿ ಅದನ್ನು ತಂದುಕೊಟ್ವಳು. ಹೊಸಬಳೊಡನೆ ತಾನೇ ಮೊದಲು
ಮಾತನಾಡಿದವಳು, ಆಕೆಗೆ ನೆರವಾದಳು, ಎಂದು ಅವಳಿಗೆ ಸಂತೋಷ.
ಶಂಕರನಾರಾಯಣಯ್ಯ ಕೇಳಿದ:
"ಒಲೆ ಹಚ್ತೀಯೇನು?"
"ಯಾಕೆ, ಬೇಡ್ವೆ?"
"ಅದೇ ಯೋಚ್ನೆ ಮಾಡ್ತಿದೀನಿ."
"ಹೇಳಿ ಬೇಗ್ನೆ. ದೀಪದ ಗತಿ ಏನಾಗುತ್ತೋ ಆಮೇಲೆ."
"ನೀನು ಬಹಳ ವಿಷಯ ವಿಚಾರಿಸ್ಕೊಂಡೆ. ಆದರೆ ಒಂದನ್ನು ಮಾತ್ರ ಕೇಳಲಿಲ್ಲ
ನೋಡು."
"ಅದೇನೋ?"
"ಇಲ್ಲಿ ಹೋಟ್ಲು ಎಲ್ಲಿದೇಂತ?"
"ನಾನು ಯಾತಕ್ಕೆ ಕೇಳ್ಲಿ ಅದನ್ನ?"
"ಅದ್ಸರಿ ಅನ್ನು. ನನಗಂತೂ ಈ ವಠಾರ ಎಲ್ಲಿದೇಂತ ಗೊತ್ತಾಗೋಕ್ಮುಂಚೇನೆ