ಪುಟ:Rangammana Vathara.pdf/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

64

ಸೇತುವೆ

ಹೋಟ್ಲಿನ ಪರಿಚಯ ಆಗಿದೆ."
"ಬಿಡಾರ ಬಂದಿದೇವೆ ಅಂತ ಈಗ ಆವರಿಗೆ ಹೇಳ್ಬಿಟ್ಟು ಬರಬೇಕೇನೋ?"
"ನೋಡಿದ್ಯಾ_ ಎಷ್ಷು ಸರಿಯಾಗಿ ಊಹಿಸ್ಕೊಂಡೆ!"
"ನಡೀರಿ. ನಾನೂ ಬರ್ತೀನಿ."
"ರಂಗಮ್ಮನಿಗೆ ಗೊತ್ತಾದರೆ ನಾಳೇನೇ ನೋಟೀಸು ಕೊಡ್ತಾರೆ."
"ಅದೆಲ್ಲಾ ಸಾಕು. ಏನ್ಮಾಡೋಣಾಂತ ಈಗ? ಒಲೆ ಹಚ್ಚಲೋ ಬೇಡ್ವೋ?"
"ಆ ರೈಲುಚೆಂಬು ತಾ.ಹೋಟ್ಲಿಗೆ ಹೋಗಿ ಪೂರಿ ಪಲ್ಯಾನೋ ಚಪಾತೀನೋ
ಕಟ್ಟಿಸ್ಕೊಂಡು, ಕಾಫಿ ತಗೊಂಡ್ಬರ್ತೀನಿ."
"ನೀವು ಅಲ್ಲಿ ಕುಡಿಯೋಲ್ಲ ತಾನೆ?"
"ಎಷ್ಟೊಂದು ಹೊಟ್ಟೆ ಉರಿಯ ನಿಂಗೆ!"
"ಮಗೊಗೆ?"
"ಎಚ್ಚರವಾದರೆ ಇನ್ನೊ ಒಂದು ಚೊರು ಬಿಸ್ಕತ್ತು ಬಾಯಿಗೆ ಹಾಕಿ ಎರಡು
ಚಮಚ ಕಾಫಿ ಕು‍‍‍‍‍ಡಿಸೋದು."
"ಹೊಂ. ನಿಮ್ಕೈಲಿ ಬಚಾಯಿಸ್ಕೊಂಡೋರು ಯಾರು?"
"ಚಂಪಾ ಒಪ್ಪಿಗೆಯಿಂದೆಲೆ ರೈಲುಚೆಂಬನ್ನು ತಂದುಕೊಟ್ಟಳು.
"ಇನ್ನೊಂದು ಬಿಂದಿಗೆ ನೀರು ಹಿಡ್ಕೊಂಡ್ಬಿಡ್ತೀನಿ.ಬೀಗ ಹಾಕ್ಬಿಟ್ಟೇ ಹೋಗಿ."
ಶಂಕರನಾರಾಯಣಯ್ಯ ಚಿಲ್ಲರೆ ದುಡ್ದನ್ನು ಜೀಬಿಗೆ ಸೇರಿಸಿ, ರೈಲುಚೆಂಬನ್ನು
ಕೈಲೆತ್ತಿಕೊಂಡ. ಹೊರ ಒಂದು, ಕೊಳಾಯಿಗೆ ಬೀಗ ಹಾಕಿ, ಬೀಗದ ಕೈಯನ್ನು
ರಂಗಮ್ಮನ ಬಳಿಗೊಯ್ದ.
ರಂಗಮ್ಮ ನಿರ್ವಿಕಾರ ಸ್ವರದಲ್ಲಿ ಕೇಳಿದರು:
"ನೀರು ಆಯ್ತೆ?"
"ಆಯ್ತು."
ಆತನ ಕೈಲಿದ್ದ ರೈಲುಚೆಂಬು ನೋಡುತ್ತ ರಂಗಮ್ಮನೆಂದರು:
"ಹೊರಗೆ ಹೋದರೆ ವಾಪಸು ಬರುವಾಗ ಹಿತ್ತಿಲಗೇಟು ಭದ್ರವಗಿ ಹಾಕ್ಕೊ
ಳ್ಳೀಪ್ಸಾ."
"ಹೊಂ. ಹಾಕ್ಕೋತೀನಿ."
ಶಂಕರನಾರಾಯಣಯ್ಯ ಹೋಟೆಲಿಗೆ ಬಂದಾಗ, ಅಲ್ಲಿ ಬಾಗಿಲು ಮುಚ್ಚುವ
ಸಿದ್ದತೆ ನಡೆದಿತ್ತು.ಬೇರೆ ಯಾವ ತಿಂಡಿಯೂ ದೊರೆಯದ ಕೊನೆಯದಾಗಿ ಉಳಿದಿದ್ದ
ಚೌಚೌವನ್ನೇ ಒಂದು ಪಾವು ಕಟ್ಟಿಸಿಕೊಳ್ಳಬೇಕಾಯಿತು. ಕಾಫಿಯೆಂಬ ಹೆಸರಿನ ಒಂದು
ದ್ರವಕವನ್ನೇನೋ ಅಲ್ಲಿ ಕೊಟ್ಟರು. ಹತ್ತಿರದಲ್ಲೇ ಇದ್ದ ಅಂಗಡಿಯಿಂದ ನಾಲ್ಕು
ಪಚ್ಚಬಾಳೆ ಹಣ್ಣುಗಳನ್ನೂ ಒಂದು ಪ್ಯಾಕೇಟು ಚಾರ್ಮಿನಾರ್ ಸಿಗರೇಟನ್ನೂ ಅತ
ಕೊಂಡುಕೊಂಡ.