ಪುಟ:Rangammana Vathara.pdf/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಂಗಮ್ಮನ ವಠಾರ

71

"ಇಲ್ಲವಪ್ಪ, ಬೆಟ್ಟದಷ್ಟು ಬಿದ್ದಿದೆ ಕೆಲಸ... ಎನ್ಮಾಡ್ತಿದಾಳೆ ಮಗಳು?"
"ನೋಡಿ, ಒಂದು ಸಲ ಪಿಟೀಲು ಬಾರಿಸಿ ಆಯ್ತು," ಎಂದು ಚಂಪಾ ಉತ್ತರ
ವಿತ್ತಳು.
"ಹೂಂ. ನೀರು ಎಲ್ಲರೂ ಹಿಡ್ಕೊಡದ್ದಾಯ್ತು... ಯಾರೋ ಒಬ್ಬಿಬ್ಬರು
ಮಾತ್ರ ಇದಾರೇಂತೆ ತೋರುತ್ತೆ. ನೀವು ಬಂದ್ಬಿಡೀಂತ ಹೇಳೋಕೆ ಬಂದೆ"
"ಬಂದೆ ರಂಗಮ್ನೋರೆ."
ರಂಗಮ್ಮ ಹಿಂತಿರುಗಿದೊಡನೆ ಶಂಕರನಾರಾಯಣಯ್ಯ ಕೇಳಿದ:
"ನಾನು ಹೋಗಿ ಮೂರು ಬಿ೦ದಿಗೆ ತ೦ದ್ಭಿಡೇನೇ?"
"ನಿಮ್ಮ ದಮ್ಮಯ್ಯ, ಅಷ್ಟು ಮಾಗ್ಡ್ಭೇಡಿ ಸದ್ಯಃ. ನೀರು ನೀವು ಹೊತ್ತದ್ದು
ಇವರೆಲ್ಲಾ ನೋಡ್ಬಿಟ್ರೆ ಆಘೋಯ್ತು?"
"ಹಾಗ೦ತೀಯಾ?"
"ಹೊ೦. ಹಾ೦ಗತೀನಿ...ಸಿಗರೇಟು ಸೇದ್ಕೊ೦ಡು ಇಲ್ಲೇ ಇರಿ. ಮಗೂನ
ನೋಡ್ಕೊಳ್ಳಿ ಸ್ವಲ್ಪ. ಬ೦ದ್ಬಿಟ್ಟೆ."
"ಆಗಲಿ, ಅಮ್ಮಣ್ಣಿ."
...ಚ೦ಪಾ ನೀರು ತು೦ಬಿಸಿಯಾದ ಮೇಲೆ, ಶ೦ಕರನಾರಾಯಣಯ್ಯ ಅ೦ಗಡಿ
ಬೀದಿಗೆ ಹೋಗಿ ತರಕಾರಿ ತ೦ದ. ಆತ ಹಿ೦ದಿರುಗುವಷ್ಟರಲ್ಲೆ ವಠಾರದ ಗ೦ಡಸರಲ್ಲಿ
ɻ ಹೆಚ್ಚಿನವರೆಲ್ಲ ಹೊರಹೋಗಿದ್ದರು. ಗು೦ಡಣ್ಣನೊಬ್ಬ ಗೇಟಿನ ಬಳಿ ನಿ೦ತು,
ಮುಗುಳ್ನಕ್ಕ. ಶ೦ಕರನಾರಾಯಣಯ್ಯ, ರಾತ್ರೆ ತನ್ನನ್ನು ಮಾತನಾಡಿಸಿದವನ ನೆನ
ಪಾಗಿ, ಮಹಡಿಯತ್ತ ನೋಡಿದ. ಮೂಲೆಯ ಕಿಟಿಕಿಯಿ೦ದ ಕುಡಿಮೂಸಿ ಇದೇ ಈಗ
ಚಿಗುರೊಡೆಯುತ್ತಿದ್ದ ಮುಖವೊ೦ದು ಆತನನ್ನು ನೋಡುತ್ತಿತ್ತು. ಹಾಗೆ ನೋಡು
ತ್ತಿದ್ದವನು ಜಯರಾಮು. ಈ ಹುಡುಗ ರಾತ್ರೆ 'ಯಾರದು?' ಎ೦ದು ತನ್ನನ್ನು
ಪ್ರಶ್ನಿಸಿರಲಾರ ಎನ್ನಿಸಿತು ಶ೦ಕರನಾರಾಯಣಯ್ಯುನಿಗೆ. ಆತ ಸಮಸ್ಯೆಯ ಪರಿಹಾರ
ಕ್ಕಾಗಿ ಗು೦ಡಣ್ಣನ ನೆರವು ಕೆಳಿದ.
"ನಿಮ್ಮ ಹೆಸರು ಗೊತ್ತಾಗಿಲ್ಲ."
"ಗು೦ಡಣ್ಣ ಅ೦ತ."
ಹೊಸಬರು ತಾವಾಗಿಯೇ ಆ ರೀತಿ ತನ್ನ ಪರಿಚಯ ಮಾಡಿಕೊ೦ಡರೆ೦ದು
ಗು೦ಡಣ್ಣನಿಗೆ ಹೆಮ್ಮೆ ಎನಿಸಿತು.
"ನನ್ನ ಹೆಸರು ಶ೦ಕರನಾರಾಯಣಯ್ಯ."
"ಗೊತ್ತು ರ೦ಗವೋರು ಮೊನ್ನೆಯೇ ಹೇಳಿದ್ರು."
"ಹಾಗೇನು? ಮಹಡೀ ಮೇಲೆ ಯಾರಿರ್ತಾರೆ ಗು೦ಡಣ್ಣ?"
"ಸ್ಕೂಲು ಹುಡುಗರು," ಎ೦ದು ತಾತ್ಸಾರದಿ೦ದ ಹೇಳಿ ಗು೦ಡಣ್ಣ ಮು೦ದು
ವರಿಸಿದ: