ಪುಟ:Rangammana Vathara.pdf/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಚಪ್ಪಲಿ ಮೆಟ್ಟಿಕೊಂಡು ಶಂಕರನಾರಾಯಣಯ್ಯ ಅಂಗಳಕ್ಕಿಳಿದ. ಚ೦ಪಾ
ಕೂಸನ್ನೆತ್ತಿಕೊ೦ಡು ಗೇಟನವರೆಗೂ ಆತನನ್ನು ಹಿ೦ಬಾಲಿಸಿ బంದಳು.
ಗೇಟಿನ ಹೊರಗೆ ಒಂದು ಕ್ಷಣ ನಿಂತು ಶಂಕರನಾರಾಯಣಯ್ಯ ಕೇಳಿದ:
"ಎನಾದರು ತರಬೇಕೇನು?"
"ದುಡು ಕೈಗೆ ಬರೋ ಲಕ್ಷಣ ಲಕ್ಷಣ ಇದೆಯೊ?"
"ಅದ್ಯಾ?ಕೆ ನಿ೦ಗೆ?
"ನ೦ಗೇನೂ ಬೇಡಿಪ್ಪಾ."
“ಸರಿ ಮತ್ತೆ!"
ಬಲು ಸುಲಭವಾಗಿ ರೇಗುವ ಗುಣವಿತ್ತು ಶಂಕರನಾರಾಯಣಯ್ಯನಿಗೆ. ಆತ
ರೇಗಿದೊಡನೆ ಚ೦ಪಾಗೆ ಸಂತೋಷವಾಗುತ್ತಿತ್ತು.
"ಹೋಗಲಿ. ಹಾದೀಲಿ ಎಲ್ಲಾದರೂ ಓ೦ದು ಕುಚ್ಚು ಹೂ ತನ್ನಿ."
"ಅಬ್ಬ!"
ವಠಾರದ ಮು೦ಭಾಗದ ಕಿಟಕಿಗಳಿ೦ದಲೂ ಬೀದಿಯಾಚಿಗಿನ ಎದುರು ಮನೆ
ಗಳಿ೦ದಲೂ-ಬೀದಿಯಲ್ಲಿ ನಡೆದು ಹೋಗುತ್ತಿದ್ದ ಕೆಲವರೂ-ರಂಗಮ್ಮನ ವಠಾರ
ದೆದುರು ಸಲ್ಲಾಪ ನಡೆಸುತ್ತಿದ್ದ ದ೦ಪತಿಯನ್ನು ನೋಡಿದರು. ಆ ದೃಷ್ಟಿಗಳ ಬಿಸಿ
ತಾಕುತ್ತಲೇ ಶಂಕರನಾರಾಯಣಯ್ಯ ಹೇಳಿದ :
“ಹೀಗೆ ನಾವು ನಿಂತು ಮಾತನಾಡೋದು ಸರಿಯಲ್ಲ ಕಣೇ."
"ಯಾಕೊ?"
“ನಾವು ಗಂಡ ಹೆಂಡತಿ ಅಲ್ಲಾ೦ತ ತಿಳಿಕೊಂಡಿಟ್ಟಾರು ಯಾರಾದರೂ!"
"ಓಹೋ!"
"ಗಂಡ ಹೆಂಡತಿ ಎಲ್ಲಿಯಾದರೂ ಇಷ್ಟು ಅನ್ಯೋನ್ಯವಾಗಿ ಇರ್ತಾರೇನು?"
"ಹೋಗೀಪಾ, ಸಾಕು ನಿಮ್ಮ ಚೇಷ್ಟೆ."
ಆತ ಬೀದಿಗಿಳಿಯುತ್ತಿದ್ದಂತೆ ಚಂಪಾ ಮೆಲುದನಿಯಲ್ಲಿ ಎಚ್ಚರಿಕೆಯ ಮಾತ
ನಾಡಿದಳು;
“ಸಾಯಂಕಾಲ ಜಾಗ್ರತೆ ಬ೦ದ್ಬಿಡಿ....."
ಹೆಂಡತಿಯೊಡನೆ ಮಾತನಾಡುತ್ತಿ ಶಂಕರನಾರಾಯಣಯ್ಯ ಮಹಡಿಯತ್ತ
ತಿರುಗಿ ನೋಡಲಿಲ್ಲ. ಚಂದ್ರಶೇಖರಯ್ಯ ಎಲ್ಲಾದರೂ ತನ್ನನ್ನು ಕಂಡು 'ನಮಸ್ಕಾರ'
ಎನ್ನಬಹುದೆಂದು ಆತ ಹೆದರಿದ್ದ.
ಚಂಪಾ ಒಳಹೋಗುತ್ತಿದ್ದಂತೆ ರಂಗಮ್ಮ ಕೇಳಿದರು:
"ದಿನಾ ಇಷ್ಟುಹೊತ್ತಿಗೆ ನಿಮ್ಮ ಯಜಮಾನರು ಕೆಲಸಕ್ಕೆ ಹೋಗ್ತಾರೋ?"
"ಹೂ೦ ಕಣ್ರಿ."