"ಆದೇನು ವಾಚನಾಲಯವೋ ಮೂರು ಹೊತ್ತೊ ಅಲ್ಲಿಗೆ ಹೋಗ್ತೀನೀಂತ
ಸಾಯ್ತಿರ್ತಾನೆ," ಎಂದು ತಾಯಿ,ತಂದೆಗೆ ದೊರು ಕೊಟ್ಟಳು.
"ಹೋಗಲಿ ಬಿಡು,ಮಾರ್ಚ್ ಗಂಮ್ತೂಇದೆ ಕಟ್ಟೋಕಾಗಲ್ಲ ಇನ್ನು ಸೆಪ್ಟೆಂಬರ್ ತಾನೆ? ಟೈಮಿದೆ ."
"ವಾಚನಾಲಯಕ್ಕೆ ಎಲ್ಲಾ ಪೇಪರೂ ಬರುತ್ತಂತಪ್ಪ.ಆದರೆ ಹುಡುಗೀರು ಅಲ್ಲಿಗೆ ಹೋಗ್ಕೂಡ್ದಂತೆ," ಎಂದು ರಾಧಾ ತಂದೆಗೆ ಊರಿನ ಸಮಾಚಾರ ಒದಗಿಸಿದಳು.
"ಹುಡುಗಿರು ವಾಚನಾಲಯಕ್ಕೆ ಹೋಗೋದೂಂದು ಬಾಕಿ ಇದೆ ಇನ್ನು..." ಎಂದು ರಾಧೆಯ ತಾಯಿ ಬೇರೆ ಯಾವುದೋ ಬೇಸರವನ್ನು ಆ ಮಾತಿನಲ್ಲಿ ಪ್ರಕಟಿ ಸಿದಳು.
"ಮನೆ ಸಾಮಾನು ಎಲ್ಲಾ ಇದ್ಯೇನು?" ಎಂದು ತಂದೆ ವಿಚಾರಿಸಿದರು.
"ಹೂಂ" ಎಂದು ತಾಯಿ ಉತ್ತರ ಕೊಡುತ್ತಲೆ,ರಾಧಾ ಒಂದು ಹೊಸ ಕಾದಂಬರಿಯನ್ನೆತ್ತಿಕೊಂಡಳು.ತಾಯ್ತಂದೆಯರ ಆ ಸಂವಾದದಲ್ಲಿ ಆಕೆಗೆ ಆಸಕ್ತಿ ಇರಲಿಲ್ಲ.ನೆಲದಲ್ಲಿದ್ದ ಹಾಸಿಗೆಯ ಸುರುಳಿಯ ಮೇಲೆ ಗೋಡೆಗೊರಗೆ ಕುಳಿತು, ಕಾದಂಬರಿಯನ್ನು ಬರೆದವರ ಹೆಸರನ್ನೂಮ್ಮೆ ಗಮನಿಸಿ, ಮುನ್ನುಡಿಯ ಪುಟಗಳನ್ನು ಓದದೆಯೇ ಹಾರಿಸಿ, ಮೊದಲ ಅಧ್ಯಾಯದಿಂದಲೇ ಅರಂಭಿಸಿದಳು.ಸ್ವಲ್ಪ ಹೊತ್ತಿ ನೆಲ್ಲೆ ಆಕೆ ಕಾದಂಬರಿಯಲ್ಲಿ ತಲ್ಲೀನಳಾದಳು.
ಮಗಳು ಓದುತ್ತಿದ್ದಂತೆ ತಾಯಿ ತಂದೆಯರ ಸಂಭಾಷಣೆ ನಡೆಯಿತು.
"ನಾರಾಯಣೆ ತೀರ್ಕೊಂಡ್ಲು."
"ಯಾರು ನಾರಾಯಣೆ?"
"ಆ ಕೊನೇ ಮನೆ,ಗೊತ್ತಿಲ್ವೆ? ಸೌದೆ ಕದ್ದಳೊಂತ.."
"ಹೂಂ.ಹೂಂ...ಅಯ್ಯೋ ಪಾಪ...ಏನಾಗಿತ್ತು?"
"ಆದೇನೋ ಸುಡುಗಾಡು ಜ್ವರದ ಕಾಹಿಲೆ.....ನಾಲ್ಕರಲ್ಲಿ ಮೂರು ಚಿಕ್ಕ ಮಕ್ಕಳು. ಕೊನೇದಕ್ಕಂತೂ ಒಂದು ವರ್ಷ್ ಕೂಡಾ ಇಲ್ಲ..."
"ತ್ಸ್....ತ್ಸ್...ಹೂ...ಏನ್ಮಾಡೋಕಾಗುತ್ತೆ? ಯಾರ ಕೈಲಿದೆ ಹೇಳು ಇದೆಲ್ಲ?"
ಆತ ನಿಟ್ಟುಸಿರುಬಿಟ್ಟುದರಿಂದ ಸಂಭಾಷಣೆ ಸ್ವಲ್ಪ ಹೊತ್ತು ನಿಂತಿತು. ತುಸು ತಡೆದು ಆಕೆ ಹೇಳಿದಳು:
"ಕೆಳಗೆ ಯಾವುದಾದರೂ ಮನೆ ಖಾಲಿಯಾದರೆ ಕೊಡ್ತೀನೀಂತ ರಂಗಮ್ಮ ಹೇಳಿರ್ಲಿಲ್ವೆ?"
"ಹೂಂ,ಹೌದು."
"ಅದೇ-ನಾರಾಯಣೆ ಇದ್ದ ಮನೆ ಖಾಲಿಯಾಯ್ತು."
ಹಾಗೇನು? ಆದರೆ ಅದಕ್ಕೆ ಬಾಡಿಗೆ ಜಾಸ್ತಿ ನೇನೋ?"
"ಹೌದು.ಅಲ್ದೆ ಅದನ್ನ ಆಗ್ಲೆ ಬೇರೆಯವರಿಗೆ ಕೊಟ್ತಿಟ್ರು ಅನ್ನಿ, ಅದರೆ