ರಂಗಮ್ನೋರು ನಮ್ಮನ್ನ ಕೇಳ್ಲೊ ಇಲ್ಲ."
"ರಂಗಮ್ನಿಗೆ ಗೊತ್ತಿಲ್ವೆ ನಮ್ಮ ಪರಿಸ್ಥಿತಿ? ಅದಕ್ಕೇ ಕೇಳ್ಲಿಲ್ಲ."
"ನಾನೂ ಸುಮ್ನಿದ್ದೆ. ಆ ವಿಷಯ ಪ್ರಸ್ತಾಪಿಸ್ಲಿಲ್ಲ.ಜಾಸ್ತಿ ಬಾಡಿಗೆ ಕೊಡೋ" ದೊಂದಾಯ್ತ್ತು, ಇದೇ ಬಾಡಿಗೆಗೆ ಬನ್ನಿ ಅಂದ್ರೂ...ಸಾವಿನ ಮನೆಗೆ...."
"ಅಯ್ಯೋ ಅದೆಲ್ವಾ ನೋಡೋಕಾಗುತ್ತೇನೆ ಈಗಿನ ಕಾಲ್ದಲ್ಲಿ?"
ತಾಯಿ ಸುಮ್ಮನಾದಳು.ಮಾತನಾಡಬೆಕಾದ ವಿಷಯಗಳೆಷ್ಟೋ ಇದ್ದುವು. ಅದರೆ ಮಗಳೆದುರಲ್ಲಿ ಅವುಗಳನ್ನು ಪ್ರಸ್ತಾಪಿಸುವ ಹಾಗಿರಲಿಲ್ಲ. ಆ ಕೊಠಡಿ ಮನೆ ಯಲ್ಲಿ ಏಕಾಂತವಾದರೂ ಎಲ್ಲಿಂದ ಬಂತು? ಹೀಗಾಗಿ,ಯಾವುದನ್ನು ಹೇಳಬಾರದು... ಹೇಳಬಹುದು ಎಂದು ಯೋಚಿಸಿ ಯೋಚಿಸಿ ಆಕೆ ಮಾತನಾಡುವಂತಾಯಿತು.
"ಎಷ್ಟು ದಿವಸ ಇರ್ತೀರ ಈ ಸಲ?"
"ಇರ್ತೀನಿ ಇನ್ನೊ ಮೂರು ನಾಲ್ಕು ದಿವಸ."
"ಅಷ್ಟು ಬೇಗ್ನೆ ಹೊರಡ್ಬೇಕೆ?"
ಅಷ್ಟೈಶ್ವರ್ಯದ ಸುಕವನ್ನು ಸುಟ್ಟಿತುಃ ಗಂಡನ ಸಾಮೂಪ್ಯವಾದರೂ ತನ್ನ ಪಾಲಿಗಿರಬಾರದೆ? ಎಂದು ವಯಸ್ಸಾದ ಆ ಜೀವ ಚಡಪಡಿಸಿತು.
"ಈ ಸಲ ಮಲೆನಾಡು ಕಡೆ ಹೋಗೋಣಾಂರತಿದೀನಿ. ಈಗ ಬೇಸಿಗೆ ಸ್ವಲ್ಪ ತಡವಾದರೂ ಮಳೆ ಬಂದ್ಬಿಡುತ್ತೆ. ಹೋದರೆ ಈಗ್ಲೋ ಹೋಗ್ಬೇಕು."
"ಹೊಂ."
ಅವರು ತಲೆತಗ್ಗಿಸಿ ಏನೋ ಯೋಚಿಸುತ್ತ ತಮ್ಮ ಅಂಗಾಂಗಗಳನ್ನು ನೋಡಿ ದರು. ಮಗಳತ್ತ,ಬಾಡಿದ ಮುಖದಿಂದ ದೃಷ್ಟಿ ಬೀರಿದರು.
ಮಗಳನ್ನು ಕೆಳಕ್ಕೆ ಕಳುಹೋಣವೆಂದು ತೋರಿತು ಆಕೆಗೆ. ಆದರೆ ಅದಕ್ಕಾಗಿ ಏನಾದರೊಂದು ಕಾರಣವನ್ನು ಸೃಷ್ಟಿಸಿ ಹೇಳಲು ಆ ತಾಯಿ ಸಮರ್ಥಳಾಗಿರಲಿಲ್ಲ.
"ಇನ್ನೇನು ಸಮಾಚಾರ ವಠಾರದ್ದು?"
"ವಠಾರದ್ದೇನು ಸಮಾಚಾರ? ಇದೆ ಹಾಗೆಯೇ."
ವಿಷಯ ಒರತೆ ಬತ್ತಿದಂತೆ ತೋರಿತು.
ರಾಧೆಯ ತಾಯಿ ತನ್ನ ಗಂಡನನ್ನು ಕಣ್ಣು ತುಂಬಾ ನೋಡಿದಳು. ಮತ್ತೆ ತಲೆ ಬಾಗಿಸಿ ನೆಲ ಕೆರೆಯುತ್ತ ಕುಳಿತಳು. ಅತ್ಮಗತವಾಗಿಯೇ ಏನನ್ನೋ ಆಕೆ ಗಟ್ಟಿಯಾಗಿ ಅನ್ನತೊಡಗಿದವಳು. ಮಾತುಗಳು ಕಡಿದು ಕಡಿದು ಬಂದವು.ಅಸ್ಪಷ್ಟವಾಗಿದ್ದರೂ ಅವರ ಕಿವಿಗಳೊಳಕ್ಕೆ ಆ ಮಾತುಗಳು ಉರಿಯುವ ನೋವನ್ನವಂಟುಮಾಡುತ್ತ ಇಳಿದುವು.
"ಹ್ಯಾಗಾಗಿದೀರಿ ಒಮ್ಮೆ ನೋಡ್ಬಾರ್ದೆ? ಹೊತ್ತು ಹೊತ್ತಿಗೆ ಊಟ ಇಲ್ಲ. ಸಿಕ್ಕಿದ್ದನ್ನ ತಿನ್ನೋದು...ಎಣ್ಣೆ ಸ್ನಾನ ಇಲ್ಲ...ನಾವೇನು ಮನುಷ್ಯ ಜನ್ಮವೋ
ಅಲ್ಲಾ"