"ಏನ್ಮಾಡ್ಲೇ ನಾನು?"
ಹೆಂಗಸು ನಿಟ್ಟುಸಿರು ಬಿಟ್ಟಳು.
ಅಷ್ಟರಲ್ಲಿ ಕಳಗಿನಿಂದ ಅಹಲ್ಯೆಯ ಸ್ವರ ಕೇಳಿಸಿತುಃ
"ರಾಧಾ,ಏ ರಾಧಾ,ಸ್ವಲ್ಪ ಬಾರೆ ಇಲ್ಲಿ."
ಕೇಳಿಸಿದರೂ ಓದುತ್ತಲಿದ್ದ ರಾಧಾ ಉತ್ತರ ಕೊಡದೆ ಸುಮ್ಮನಿದ್ದಳು.
"ರಾಧಾ ಬಾರೇ..."
ತಾಯಿಯೆಂದಳು ಮಗಳಿಗೆ:
"ಕರೆಯೋದು ಕೇಳಿಸಲ್ವೆನೇ? ಹೋಗು."
"ಊ...ನಾನು ಹೋಗೊಲ್ಲ...ಓದ್ಬೇಕು."
"ರಾತ್ರೆ ಓದಿದರಾಯ್ತು."
"ಊ...ದೀಪ ಇರೋಲ್ಲ ರಾತ್ರೆ."
"ನಾಳೆ ಓದೀಯಂತೆ."
ರಾಧಾ ಮತ್ತೊಮ್ಮೆ ಊ ಎಂದು ರಾಗ ಎಳೆಯುತ್ತಿದ್ದಂತೆಯೇ ಅಹಲ್ಯಾ ಸ್ವಲ್ವ ಗಟ್ಟಿಯಾಗಿಯೇ ಕರೆದಳು.
ರಾಧಾ ಪುಸ್ತಕವನ್ನು ತನ್ನ ಹಿಂದುಗಡೆ ಮರೆಮಾಡುತ್ತ ಎದ್ದು ನಿಂತು,ಮುಖ ವನ್ನಷ್ಟೆ ಕಿಟಿಕಿಯಿಂದ ಹೊರಹಾಕಿ,"ಯಾಕೆ?"ಎಂದಳು.
ಕೆಳಗೆ ನಿಂತಿದ್ದ ಅಹಲ್ಯೆ ತನ್ನ ಬಳೆಯನ್ನು ಮುಟ್ಟಿ ತೋರಿಸಿದಳು.ರಾಧೆಗೆ ಒಮ್ಮೆಲೆ ನೆನಪಾಯಿತು.ಮಲ್ಲೇಶ್ವರದ ಅಂಗಡಿ ಬೀದಿಯಿಂದ ಬಳೆ ಕೊಳ್ಳ ಬೇಕೆಂದಿದ್ದ ಅಹಲ್ಯೆಯ ಜತೆಯಲ್ಲಿ ತಾನೂ ಬರುವೆನೆಂದು ಹಿಂದಿನ ದಿನ ರಾಧಾ ಮಾತು ಕೊಟ್ಟಿದ್ದಳು.ಈಗ "ತಾಯಿ ಬಿಡೋದಿಲ್ಲ" ಎಂದು ನೆಪ ಹೇಳಿ ತಪ್ಪಿಸಿ ಕೊಳ್ಳುವ ಮನಸ್ಸಾಯಿತು.ಮಲ್ಲೇಶ್ವರದವರೆಗೆ ' ಹೋಗುವುದೆಂದರೆ ತಾಯಿ ಬೇಡ ವೆನ್ನೆ ಬಹುದೆಂಬ ಯೋಚನೆಯೂ ಹೊಳೆಯಿತು. "ತಾಳು ಅಮ್ಮನ್ನ ಕೇಳ್ತೀನಿ ಎನ್ನು ವಂತೆ ರಾಧಾ ಕೈಸನ್ನೆ ಮಾಡಿದಳು.
"ಏನೇ ಅದು?"
---ಎಂದಳು ರಾಧೆಯ ತಾಯಿ.
"ಅಹಲ್ಯೆ ಬಳೆ ಕೊಂಡ್ಕೋಬೇಕಂತೆ. ಮಲ್ಲೇಶ್ವರಕ್ಕೆ ಹೋಗೋಕೆ ನನ್ನನ್ನೂ ಕರೀತಿದಾಳೆ."
"ಅಷ್ಟೇನೇ? ಹೋಗ್ಬಾ."
ರಾಧೆ ನಿರುಪಾಯಳಾಗಿ,ಓದುತ್ತಿದ್ದ ಪುಟಕೊಂದು ಕಾಗದದ ಚೂರಿನ ಗುರು ತಿಟ್ಟು ಪುಸ್ತಕ್ಕವನ್ನು ಮಡಚಿ ತೆಗೆದಿರಿಸಿದಳು.
"ಕುಂಕುಮ ಇಟ್ಕೋ,"
---ಎಂದು ತಾಯಿ ಹೇಳುತ್ತಿದ್ದಂತೆಯೇ, ಆ ಕೆಲಸಕ್ಕಾಗಿಯೇ ರಾಧಾ