ಪುಟ:Rangammana Vathara.pdf/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

vi

ಆ ವರ್ಷಗಳಲ್ಲಿ ಕನ್ನಡ ನಾಡಿನ ಉದ್ದ ಅಗಲ ಅಳೆದಿದ್ದೆ. ಸ್ವಾತಂತ್ರ್ಯ
ಪ್ರಾಪ್ತಿಯ ಅನಂತರದ ಭ್ರಮೆ ನಿರಸನ ಸಾಕಷ್ಟು ನೋವು ಉಂಟು ಮಾಡಿತ್ತು. ಆ
ನೋವು ಉಲ್ಬಣಿಸಿದ್ದು, ಜಾತೀಯತೆಯ ವಿರಾಟ್ ರೂಪವನ್ನು ನಾನು ಕಂಡಾಗ.
ಈ ಪಿಡುಗು ಕ್ರಮೇಣ ಸರ್ವವ್ಯಾಪಿಯಾಗತೊಡಗಿತು.

ಆ ಹಿನ್ನೆಲೆಯಲ್ಲಿ ಕರ್ನಾಟಕದ ರಾಜ್ಯ ಉದಿಸಿತು. ಕನ್ನಡಿಗರ ಪಾಲಿಗೆ
ಅದೊಂದು ಮಹಾಸಂಭವ. ಜಯದೇವ ಈಗಲೂ ಅಧಾಪಕ. ನೂತನ ರಾಜ್ಯೋ
ದಯದ ವೀಕ್ಷಕ. 'ದೂರದ ನಕ್ಷತ್ರ'ದ ಕಥೆಯ ಮುಂದುವರಿಕೆಯೇ “ನವೋದಯ.'

****

ಪುಟ್ಟದಾದ ಒಂದೂರು. ಒಂದು ಪ್ರಾಥಮಿಕ ಶಾಲೆ, ಒಂದು ಮಾಧ್ಯಮಿಕ
ಶಾಲೆ, ನೀಲಿ ನಕಾಶೆಯಲ್ಲಿ ಕಂಗೊಳಿಸಿದ ಫ್ರೌಡಶಾಲೆ. ನಾಲ್ಕಾರು ಉಪಾಧ್ಯಾಯರು
ಮಕ್ಕಳಿಗೆ ಪಾಠ ಹೇಳುವ ಆಟದಲ್ಲಿ ನಿರತರು.

ಕಾಲದ ಚೌಕಟ್ಟಿನಲ್ಲಿ ವಿಸ್ತಾರ ಬದುಕಿನ ಪುಟ್ಟ ಭಾಗವನ್ನು ಕಲಾತ್ಮಕವಾಗಿ ಸೆರೆ
ಹಿಡಿಯುವ ಪ್ರಯತ್ನವಿದೆ 'ದೂರದ ನಕ್ಷತ್ರ'ದಲ್ಲಿ, 'ನವೋದಯ'ದಲ್ಲಿ.

ಇತರ ಪಾತ್ರಗಳು ಹಲವಿದ್ದರೂ, ಇಲ್ಲಿ ಪ್ರಮುಖರು ಅಧಾಪಕರು. ವೈಯು
ಕ್ತಿಕ ಮತು ಸಾಮುದಾಯಿಕ ಜೀವನದಲಿ ಅನಪೇಕಣಿಯ ಅಂಶಗಳು ಸಾಕಷ್ಟಿದ್ದರೂ
ಅವನ್ನು ಮೆಟ್ಟಿ ನಿಲ್ಲಬಲ್ಲ ಮಾನವೀಯ ಗುಣವೂ ಒಂದಿದೆ. ಆ ಗುಣ ಇಲ್ಲಿ ಇರುಳಿನ
ಹಣತೆಯಾಗಿ ಮಂದ ಬೆಳಕು ಬೀರಿದೆ; ದಡಗಳನ್ನು ಜೋಡಿಸುವ ಸೇತುವೆಯಾಗಿದೆ.
****
ಈ ಸಂಪುಟದ ಆನುಬಂಧದಲ್ಲಿ, ಮೇಲೆ ಪ್ರಸ್ತಾಪಿಸಿದ ಕಾದಂಬರಿಗಳನ್ನು
ಕುರಿತು ಇನ್ನಿಷ್ಟು ವಿವರಗಳನ್ನು ಕಲೆ ಹಾಕಿದ್ದೇನೆ. ಸಂಪುಟದ ಓದಿಗೆ ಅದು ಸಹಾಯಕ.

'ನಿರಂಜನ: ಮೂವತ್ತು ಸಂಪುಟಗಳಲ್ಲಿ.' ಐ.ಬಿ.ಎಚ್. ಪ್ರಕಾಶನದ ಯೋಜನೆ,
ಅದಕ್ಕೆ ಕಾರಣರು ಸಂಸ್ಥೆಯ ಜನರಲ್ ಮ್ಯಾನೇಜರ್ ಶ್ರೀ ಜಿ. ಕೆ. ಅನಂತರಾಮ್
ಅವರು. ಗದಗಿನ ತ್ವರಿತ ಮುದ್ರಣದ ಶ್ರೀ ಫ. ಶಿ. ಭಾಂಡಗೆಯವರು ಈ ಸಂಪುಟವನ್ನು
ಒಂದೂವರೆ ತಿಂಗಳಲ್ಲಿ ಅಂದವಾಗಿ ಮುದ್ರಿಸಿದ್ದಾರೆ.

--ಇವರಿಗೆ ನಾನು ಕೃತಜ್ಞ.


9–6–1987

ನಿರಂಜನ

'ಕಥೆ' 515 7ನೇ ಮುಖ್ಯಬೀದಿ,

46ನೇ ಅಡ್ಡರಸ್ತೆ, ಜಯನಗರ, ಬೆಂಗಳೂರು-560 04!