ಪುಟ:Rangammana Vathara.pdf/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

86

ಸೇತುವೆ

ಸಾಕಲು ಅವರು ಎಷ್ಟೊಂದು ಕಷ್ಟಪಡಬೇಕು! ತಂದೆ ಮತ್ತು ತಾಯಿ ...
ಜಯರಾಮು ಮನೆಯಿಂದ ಈ ಸಂಜೆ ಹೊರಟು ಬಂದುಬಿಟ್ಟಿದ್ದ, ಹೆತ್ತವರು
ತಮ್ಮ ಮಕ್ಕಳೆದುರು ಮಾತನಾಡಲಾಗದ ಎಷ್ಟೋ ವಿಷಯಗಳಿದ್ದುವು. ದಂಪತಿ
ಎಂದ ಮೇಲೆ ಅವರಿಗೆ ಏಕಾಂತ ಬೇಡವೆ? ರಾತ್ರಿಯಂತೂ ಆ ಕೊಠಡಿ_ಮನೆಯೊಳಗೆ
ಸಂಸಾರವೆಲ್ಲ ನಿದ್ದೆ ಹೋದಾಗ ಗೋಪ್ಯವೆಂಬುವುದಿಲ್ಲ. ಹಗಲಾದರೂ ಮಾತನಾಡಲು
ಅವರಿಗೆ ಅವಕಾಶವಿಲ್ಲದಿದ್ದರೆ?
'ರಾಧೆಗೇನೂ ತಿಳಿಯೋದೇ ಇಲ್ಲ. ಆಕೆ ಇನ್ನೂ ಹಸುಳೆ', ಎಂದುಕೊಂಡು ಜಯರಾಮು. ತಾನು ಆಕೆಯನ್ನು ಕರೆದುಕೊಂಡು ಬರಬೇಕಾಗಿತ್ತು, ಒಬ್ಬನೇ ಬಂದು ತಪ್ಪು ಮಾಡಿದೆ _ಎಂದು ಪರಿತಪಿಸಿದೆ.
ಜಯರಾಮುವಿಗೆ ಓದಿನಲ್ಲಿ ಆಸಕ್ತಿ ಇರಲಿಲ್ಲ. ಆತ ಪರೀಕ್ಷೆಯಲ್ಲಿ ಉತ್ತೀರ್ಣ
ನಾಗದೆ ಇರಲು ಇದೇ ಬಹಳ ಮಟ್ಟಿಗೆ ಕಾರಣವಾಗಿತ್ತು.
ಒಂದು ದಿನ ಅರ್ಥಶಾಸ್ತ್ರದ ಉಪನ್ಯಾಸಕರು ಕೇಳಿದ್ದರು:
"ಏನಪ್ಪಾ, ಓದೋಕೆ ಮನಸಿಲ್ವೆ?"
ಆ ಮಾತು ಕೇಳಿ ಜಯರಾಮುವಿನ ಮುಖ ಕೆಂಪಗಾಗಿತ್ತು. ಉತ್ತರ ಹೊರ
ಟಿರಲಿಲ್ಲ.
ಈಗಿನ ಕಾಲದ ಹುಡುಗರೆಲ್ಲ ಖಂಡಿತವಗಿಯೂ ಕೆಟ್ಟು ಹೋದರೆಂದು ನಂಬಿದ್ದ
ಸ್ವಲ್ಪ ವಯಸ್ಸಾಗಿದ್ದ ಆ ಅಧ್ಯಾಪಕರು ನೊಂದ ಧ್ವನಿಯಲ್ಲಿ ಹೇಳಿದ್ದರು:
"ಅನುಕೂಲವಿದ್ದರೆ ಎಷ್ಟು ವರ್ಷ ಬೇಕಾದರೂ ಇಲ್ಲೇ ಇರು. ಸಂತೋಷವೇ.
ಆದರೆ, ನಿನ್ನನ್ನ ನೋಡಿದರೆ, ಅನುಕೂಲವಿದ್ದ ಹಾಗೆ ಕಾಣಿಸೋದಿಲ್ಲ. ಕಲಿಯೋಕೆ
ಇಷ್ಟವಿಲ್ಲದೆ ಹೋದರೆ ಸುಮ್ಸುಮ್ನೆ ಹೆತ್ತವರ ಹೊಟ್ಟೆ ಉರಿಸಬಾರದಪ್ಪಾ."
ಜಯರಾಮುಗೆ ಅಳು ಬಂದಿತ್ತು. ಆದರೆ ಅದು ನಿರ್ಜನ ಪ್ರದೇಶವಾಗಿರಲಿಲ್ಲ
ವಾದ್ದರಿಂದ ಬಿಗಿದುಕೊಂಡ ಕುತ್ತಿಗೆಯ ನರಗಳು ಮತ್ತೆ ಸಡಿಲವಾದವು. ಆ ದಿನವೂ
ಜಯರಾಮು ಈ ಬೆಟ್ಟವನ್ನೇರಿ ಬಂದು,ಕತ್ತಲು ಆ ಭೂಮಿಯ ಮೇಲೆಲ್ಲ ಕರಿಯ
ತೆರೆ ಎಳೆಯುವವರೆಗೂ ಆಲ್ಲಿ ಕುಳಿತಿದ್ದ. ಯಾರೂ ಇಲ್ಲದೆ ಇದ್ದಾಗ ಕಣ್ಣೀರು
ಧಾರಾಕಾರವಾಗಿ ಹರಿದಿತ್ತು.
ಅಧ್ಯಾಪಕರು ನಿಜವಾದ್ದನ್ನೇ ಹೇಳಿದ್ದರು. ಪಾಠಗಳಲ್ಲಿ ಆತನಿಗೆ ಆಸಕ್ತಿ
ಇರಲಿಲ್ಲ. ಕಾಲೇಜಿನ ತರಗತಿಯ ನಾಲ್ಕು ಗೋಡೆಗಳೊಳಗಿದ್ದರೆ ಮಾತ್ರ ವಿದ್ಯಾವಂತ
ನಾಗುವುದು ಸಾಧ್ಯವೆಂಬುದನ್ನು ಅವನು ಒಪ್ಪುತ್ತಿರಲಿಲ್ಲ. ವಿದೇಶೀಯರು ಬಳುವಳಿ
ಯಾಗಿ ಕೊಟ್ಟು ಹೋಗಿದ್ದ ಈ ವಿದ್ಯಾಪದ್ಧತಿಯನ್ನು ಖಂಡಿಸುವ ಹಲವಾರು ಭಾಷಣ
ಗಳನ್ನು ಆತ ಕೇಳಿದ್ದ.ಈ ವಾದಸರಣಿ ಆತನಿಗೆ ಮೆಚ್ಚುಗೆಯಾಗಿತ್ತು. ಅವನಿಗೆ
ಇದ್ದ ಆಕರ್ಷಣೆ ಸಾಹಿತ್ಯವೊಂದೇ. ಪುಸ್ತಕಗಳ ಲೋಕದಲ್ಲಿ ಸುಖಿಯಾಗಿ ಇಲ್ಲವೆ
ದುಃಖಿಯಾಗಿ ವಿಹರಿಸುತ್ತ ಆತ ಕಷ್ಟಕೋಟಲೆಗಳ ವಾಸ್ತವ ಲೋಕವನ್ನು