ಪುಟ:Rangammana Vathara.pdf/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

88

ಸೇತುವೆ

"ಈಗ ಬೇಡ. ಮೊದಲು ಪರೀಕ್ಷೆಯೊಂದು ಆಗಲಿ."
ಈ ಸಂಜೆ ತಾಯಿ ತಂದೆಯರಿಂದ, ತಂಗಿಯಿಂದ ದೂರ ಬಂದು ಕುಳಿತು ಜಯ
ರಾಮು ಅಂತರ್ಮುಖಿಯಾಗಿ ಬಹಳ ಹೊತ್ತು ಯೋಚಿಸಿದ.
ತಂದೆ ಬಡಕಲಾಗಿದ್ದರು. ಪ್ರವಾಸ ವ್ಯಾಪಾರದಿಂದ ಅವರ ಆರೋಗ್ಯ ಕೆಟ್ಟಿತ್ತು
ಇಳಿಮುಖವಾಗಿತ್ತು ಸಂಪಾದನೆ. ತನ್ನ ತಂಗಿಯ ಮದುವೆ...
ಮತ್ತೂ ಹಿಂದಕ್ಕೆ ಬಂಡೆಕಲ್ಲಿಗೊರೈಗಿ ಕಾಲುಗಳನ್ನು ಸಡಿಲವಾಗಿ ಚಾಚಿ ಜಯ
ರಾಮು ನಿಟ್ಟುಸಿರುಬಿಟ್ಟ.
ಹೇಗಿರುತ್ತಾರೆ ಮನುಷ್ಯರು! ಉದಾಹರಣೆಗೆ ರಂಗಮ್ಮ. ಅವರಲ್ಲಿ ಜಯ
ರಾಮು ಒಳ್ಳೆಯವೆಂದು ಭಾವಿಸಿದ್ದ ಎಷ್ಟೋ ಗುಣಗಳಿದ್ದುವು. ಕೆಟ್ಟ ಗುಣಗಳೂ
ಇದ್ದವು. ಅವರು ಕಷ್ಟಪಟ್ಟು ಮಕ್ಕಳನ್ನು ಬೆಳಸಿ ದೊಡ್ಡವರಾಗಿ ಮಾಡಿದ ಸಾಹಸದ
ಕತೆ ಕೇಳಿದಾಗ ಜಯರಾಮು ಬೆರಗಾಗಿದ್ದ. ಆದರೆ ರಂಗಮ್ಮ ವಯಸ್ಸಾದಂತೆ ಹೆಚ್ಚು
ಹೆಚ್ಚು ಜಿಪುಣರಾಗುತ್ತ ಬಂದಿದ್ದರು. ಹಣ ಎಂದರೆ ಎಷ್ಟೊಂದು ಪ್ರೀತಿ ಅವರಿಗೆ!
ಆ ನೀರು ಲೈಟುಗಳು ಲೆಕ್ಕ...
ಒಂದು ದಿನ ವಠಾರದ ಎಲ್ಲರ ಮುಂದೆ ಜಯರಾಮು ಅವರನ್ನು ಕೇಳಿದ್ದ :
"ಕಕ್ಕಸು ನೋಡಿದ್ರಾ ರಂಗಮ್ನೋರೆ?"
"ಏನಾಗಿದೆಯಪ್ಪಾ...?"
"ಥೂ ಥೂ... ಹೊಲಸೂಂದರೆ ಹೊಲಸು.."
"ಕಕ್ಕಸು ತೊಳೆಯೋಳು ಬರ್ಲಿಲ್ವೇನೊ?"
"ಬಂದಿದ್ಲು. ನೀವು ಕೊಡೋದು ನಾಲ್ಕೇ ಆಣೆ. ನಾಲ್ಕಾಣೆಗೆ ಎಷ್ಟು ತೊಳೀ
ಬೇಕೋ ಅಷ್ಟು ತೊಳೀತಾಳೆ."
ರಂಗಮ್ಮ ಸಿಟ್ಟಾಗಿ ಕೇಳಿದರು.
"ಇನ್ನೇನು? ಒಂದು ರೂಪಾಯಿ ಕೊಡ್ಲೆ ನಾನು?"
"ನೀವ್ಯಾಕೆ ಕೊಡ್ಬೇಕು? ಇಷ್ಟು ಸಂಸಾರ ಇಲ್ವೆ ಇಲ್ಲಿ? ಒಬ್ಬೊಬ್ಬರು ಬಾಡಿಗೆ
ಜತೇಲಿ ಎರಡೆರಡಾಣೆ ಕೊಡ್ಲಿ. ಆಗ ಒಂದು ರೂಪಾಯಿ ಕಕ್ಕಸು ತೊಳೆಯೋಳಿಗೆ
ಕೊಡೋಕೆ ಅಗಲ್ವೊ?"
ಅಲ್ಲಿದ್ದ ಹೆಂಗಸರೆಲ್ಲ ಜಯರಾಮುವನ್ನು ದುರುಗಟ್ಟಿ ನೋಡಿದರು. ಅದರೆ
ಅವನ ಕಣ್ಣುಗಳಲ್ಲಿ ತುಂಟತನ ಮಿನುಗುತ್ತಿದ್ದುದು ಕೆಲವರಿಗೆ ಕಾಣಿಸದಿರಲಿಲ್ಲ. ಆದರೆ
ಆ ವ್ಯಂಗ್ಯ ಅರ್ಥವಾಗದೆ ರಂಗಮ್ಮ ಎರಡೆರಡಾಣೆಯಂತೆ ಒಂದು ರೂಪಾಯಿ ಹನ್ನೆರ
ಡಾಣೆ ಜಮೆಯಾಗುವುದನ್ನೂ ಮುನಿಸಿಪಾಲಿಟಿಯವಳಿಗೆ ಎಂಟಾಣೆ ಕೊಟ್ಟರೂ ಒಂದೂ
ಕಾಲು ರೂಪಾಯಿ ಮಿಗುವುದನ್ನೂ ಮನಸ್ಸಿನಲ್ಲೆ ಲೆಕ್ಕ ಹಾಕಿದರು. ಅದೊಂದನ್ನೂ
ಹೊರಗೆ ತೋರಗೊಡದೆ ಅವರು ಗೊಣಗಿದರು:
"ಸರಿ, ಇನ್ನು ಅದೊಂದು. ಇವರೆಲ್ಲಾ ಬಾಡಿಗೆ ಒಮ್ಮೆ ಸರಿಯಾಗಿ ಕೊಟ್ಟರೆ