79
ನಿನ್ನ ನಾಮದೊಳಿರಿಸು ನಿಜಲಿಂಗ ಭವಭಂಗ ಶರಣಜನವರದ ಜಯತು || ೬೩ ||
ಒಮ್ಮೆ ಸಂಸಾರವನು ತೊರೆಯಬೇಕೆಂಬಂತೆ
ಒಮ್ಮೆ ಸಂಸಾರವನು ಮಾಡಬೇಕೆಂಬಂತೆ
ಒಮ್ಮೆ ದೇವರ ಭಜನೆಯನು ಮಾಡಿ ನಿತ್ಯಪದವಿಯ ಪಡೆಯಬೆೇಕೆಂಬುವ
ಒಮ್ಮೆ ದೇವರ ಭಜನೆಯಿಂದೇನು ಫಲವೆಂದು
ಹಮ್ಮೈಸಿ ಹರಿಯುತಿಹ ಮನವನೊಬ್ಬುಳಿಗೊಳಿಸಿ
ನಿಮ್ಮ ಚರಣದೊಳಿರಿಸು ನಿಜಲಿಂಗ ಭವಭಂಗ ಶರಣಜನವರದ ಜಯತು || ೬೪ ||
ಏನೇನು ೧ತಿಳಿ೧ ಯದಜ್ಞಾನಿ ೨ದಿಟವ೨ಹುದೆನುತ
ಹೀನೈಸುತೆನ್ನ ಕೈ ೩ಬಿಡಲಾಗದೆಲೆ ದೇವ೩
ನೀನು ಶಂಕರನು ಭವಹರನು ಶಶಿಧರನು ಸಿರಿಕರನುಮೆಯವರನೆನ್ನುತ೪
ನಾ ನಿನ್ನ ಚರಣಶತಪತ್ರವನು ನಂಬಿದೆನು
ಜ್ಞಾನವನು ಕೊಟ್ಟು ಸಲಹುವುದೆನ್ನ ಜಗದೊಡೆಯ
೫ನೀನಲ್ಲದಿನ್ನುಂಟೆ೫ ನಿಜಲಿಂಗ ಭವಭಂಗ ಶರಣಜನವರದ ಜಯತು || ೬೫ ||
ಸ್ಥಿರಪದವು ಬರುತಿರ್ಪ೬ ಚರಿತವನು ಪಿಡಿದಂತೆ
ಮರ೭ಮರಳಿ೭ ಭವಕೆ ಬಹ ಚರಿತವನು ೮ತೊರೆ೮ವಂತೆ
ನರಲೋಕದಾಟದೊಳಗಿದ್ದುದಕೆ ಮನವ ತೊಡಕಿಸದೆ ಹೊರಗಾಗುವಂತೆ
ನಿರುತದಿಂದಾತ್ಮದೊಳು ಶಿವ ನಿಮ್ಮ ರೂಪವನು
ಅರಿವಂತೆ ಮರೆವಂತೆ ಕರೆವಂತೆ ಬೆರೆವಂತೆ
ವರವಿತ್ತು ಸಲಹುವುದು ನಿಜಲಿಂಗ ಭವಭಂಗ ಶರಣಜನವರದ ಜಯತು || ೬೬ ||
ನೀನಿದ್ದ ಸಮಯದಲಿ ನಿನ್ನ ತಿಳಿಯದೆ ಜ್ಞಾನ
ಹೀನನಾದಡೆ ಬಳಿಕ ನೀ ತೊಲಗಿದಾಕ್ಷಣಕೆ
ಏನು ಪೇಳುವೆನಿನ್ನು ಬಗೆಬಗೆಯ ಯೋನಿಯೊಳು ತೊಳತೊಳಲಿ ಬಳಬಳಲುತ
ನಾನೆಂತು ಜೀವಿಸುವೆನಯ್ಯ ಕರುಣಾಕರನೆ