ಪುಟ:VISHAALAAKSHI - Niranjana.pdf/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೬ ವಿಶಾಲಾಕ್ಷಿ ಆಗಲೇ ಎದ್ದಿದ್ದ ತಾಯಿ ಏನು ಮಾಡುತ್ತಿರುವರೋ ನೋಡಲೆಂದು, ವಿಶಾಲಾಕ್ಷಿ ಅತ್ತ ನಡೆದಳು. 1 E.. ಹತ್ತು ಹೊಡೆಯಲು ಕೆಲ ನಿಮಿಷಗಳಿದ್ದಾಗಲೇ, ಹೊರಗೆ ಟಾಂಗಾ ನಿಂತ ಸದ್ದಾಯಿತು.

  • ಇದೇನು ? ಹಾಸಿಗೆ ಟ್ರಂಕು ಸಮೇತ ಇವರು ಇಲ್ಲಿಗೇ ಬಂದುಬಿಟ್ಟರೋ, ಹೇಗೆ ?-ಎಂದು ವಿಶಾಲಾಕ್ಷಿ ಗಾಬರಿಗೊಂಡು, ಹೌಹಾರಿ ಎದ್ದು, ಕಿಟಕಿಯ ಪ ರ ದ ಯ ಎಡೆಯಿಂದ ನೋಡಿದಳು. [ಏಳುತ್ತ, 'ಗಂಗಾಧರನಲ್ಲ-ಬೇರೆ ಯಾರೋ ಬಂದಿರಬೇಕು,' ಎಂದೂ ಯೋಚಿಸಿದಳು..

ಬಂದಿದ್ದುದು ಬೇರೆ ಯಾರೂ ಅಲ್ಲ, ಗಂಗಾಧರನೇ, ಇಳಿಯುತ್ತಿದ್ರ ಆತನ ಕೈಯಲ್ಲಿದ್ದುದು, ಒಂದು ಬುಟ್ಟಿ ಮಾತ್ರ. ಆತನನ್ನು ನೋಡುತ್ತಲೇ, ವಿಶಾಲಾಕ್ಷಿಯ ಎದೆಗುಂಡಿಗೆ ಅತ್ಯಂತ ತೀನ ವಾಗಿ ಬಡೆದುಕೊಂಡಿತು, ಉಸಿರಾಟ ಕಷ್ಟವೆನಿಸಿತು, ಅಂಗಾಂಗಗಳು ಒಂದ್ದ ಕ್ಷಣ ನಿಚ್ಚೇಷ್ಟಿತವಾದುವು. - ಗೇಟು ತೆರೆದ ಸದ್ದು, ಹೊರಗೆ ಬರಬೇಕು ತಾನು, ಆದರೆ ಬರಲಾರಳು : ಟಕ್‌ಟಕ್‌ಟಕ್‌ ಬಾಗಿಲಿಗೆ, ಮನೆಯಲ್ಲಿದ್ದುದು ಚಂದ್ರನೊಬ್ಬನೇ, ಇಸಿ. ಪೆಟ್ಟಿಗೆಗೆ [ಹೊಸದು] ಆಗಲೇ ಇದ್ದಿಲು ತುಂಬುತ್ತಿದ್ದ. 'ನನ್ನದು ಬುಶ್ಕೋಟುಪ್ಯಾಂಟು, ಅಷ್ಟೇ ನಿನ್ನ ರವಕೆಗಿವಕೆ ಏನಾದರೂ ಇದ್ದರೆ, ಆಮೇಲೆ ಮಾಡ್ಕೊ' ಎಂದಿದ್ದ, ಹೊರಗೆ 'ಅವರು' ಬಂದುದು, ಆತನಿಗೆ ಕೇಳಿಸಲಿಲ್ಲವೇನೋ. ತಾನೇ ಹೊರಡಬೇಕೆಂದು, ನೆಲಕ್ಕೆ ಅಂಟಿದ್ದ ಕಾಲುಗಳನ್ನು ವಿಶಾಲಾಕ್ಷಿ ಕಿತ್ತಳು. ಅಷ್ಟರಲ್ಲೇ ಚಂದ್ರಬಾಗಿಲಲ್ಲಿ ಕಾಣಿಸಿಕೊಂಡ. : “ಕವಿಗಳು ನಿನ್ನನ್ನು ಕೇಳ್ಕೊಂಡು ಬಂದಿದಾರೆ,” ಎಂದು ನುಡಿದು, ಪುನಃ ಇಸ್ತ್ರಿ ಪೆಟ್ಟಿಗೆಯನ್ನಿರಿಸಿದ್ದ ಕೊಠಡಿಗೆ ಆತ ಹೋದ. [ಭಾವೋದ್ವೇಗಕ್ಕೆ ಗಂಗಾಧರನೂ ಬಲಿಯಾಗಿದ್ದ, ಮನಸಿನ ಯಾತನೆ ಯನ್ನೇನೋ ವಿಶಾಲಾಕ್ಷಿಯ ಉತ್ತರ ಕೊನೆಗಾಣಿಸಿತ್ತು. ಆದರೆ, ಈಗ ಆರಂಭ

  • \'|

+ಆಳದ -,3:w++- "" "• ! ಜ.............. ಎಲ್ಲಿ ': - ಮಟ್ಟಹಾಸಿ: