ವಿಷಯಕ್ಕೆ ಹೋಗು

ಪುಟ:VISHAALAAKSHI - Niranjana.pdf/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೪೪
ವಿಶಾಲಾಕ್ಷಿ

“ಹೂಂ.”

ವಿಶಾಲಾಕ್ಷಿ ಕೇಳಿದಳು :

“ಒಲೆ ಹಚ್ಚಿಕೊಡ್ಲಾ, ರಮಾ ?”

ಅಮ್ಮನಿಗೆ ಜ್ವರ ಬಿಟ್ಟಿದೆಯೆಂದು ಹರ್ಷಿತಳಾದ ರಮಾ ಅಂದಳು :-

“ಬೇಡ್ರೀ : ನನಗೆ ಒಲೆ ಹೆಚ್ಚೋಕೆ ಬರುತ್ತೆ!”:

ನಾಲ್ಕು ಮಕ್ಕಳನ್ನು ಹೆತ್ತಿದ್ದ ಗಿರಿಜಾಬಾಯಿಗಿನ್ನೂ ನಾಲ್ವತ್ತು ದಾಟಿರಲಿಲ್ಲ. ನೋಡಲು ಮಾತ್ರ ಹೆಚ್ಚು ವಯಸ್ಸಾದವರಂತೆ ಕಾಣುತ್ತಿದ್ದರು, ಆ. ಭಾವನೆಗೆ ಕಾರಣವಾಗಿದ್ದುದು ಬಿಳಿಯ ತಲೆಗೂದಲು, ರಾಧಾಕೃಷ್ಣನ ಸಾವಿಗೆ ಮುನ್ನ ಒಂದು ಕೂದಲೂ ಬಿಳುಪಾಗಿರಲಿಲ್ಲ... ಆ ಬಳಿಕ, ಬಲು ಬೇಗನೆ, ಅರ್ಧಕ್ಕರ್ಧ ನರೆತಿತು. . ..

ಟೀಪಾಯ್'ಯ ಮೇಲೆ ವಿಶಾಲಾಕ್ಷಿ ಇರಿಸಿದ್ದ ಪ್ಯಾಕೆಟನ್ನು ಗಿರಿಜಾ ಬಾಯಿ ಎತ್ತಿಕೊಂಡರು, ಹಿಂದುಮುಂದು ನೋಡದೆ, ಗೆಳತಿಯ ಸಮ್ಮತಿಯನ್ನೂ ಕೇಳದೆ, ಅದನ್ನು ಬಿಚ್ಚಿದರು, ಒಳಗಿದ್ದುದನ್ನು ನೋಡಿ ಉದ್ಗರಿಸಿದರು :

ಓ ! ಬಂತೇನ್ರೀ ಲೇಖನ ?”

ವಿಶಾಲಾಕ್ಷಿಗೆ ಆದಷ್ಟೇ ಸಂತೋಷವಾಯಿತು ಅವರಿಗೂ. ಮತ್ತೂ ಉಳಿದಿದ್ದ ಲೇಖನದ ಪ್ರತಿಯ ಮೇಲೆ, ವಿಶಾಲಿ ಬರೆದಳು.:

ಆತ್ಮೀಯರಾದ ಗಿರಿಜಾಬಾಯಿ-ಗೆ..

ಪ್ರೀತಿಪೂರ್ವಕ ಕಾಣಿಕೆ.

ಅದರ ಕೆಳಗೆ “ವಿ' ಎಂಬ ಅಂಕಿತಿವಷ್ಟೇ ಸಾಕೆನಿಸಿತು.

ಇಪ್ಪತ್ತೈದು ಕೊಟ್ಟಿದ್ದಾರೆ, ಅಲ್ವಾ? ಹಂಚಿಬಿಡಿ, ಹತ್ತಾರು ಜನ ಓದಿ,” ಎಂದರು ಗಿರಿಜಾಬಾಯಿ.. -

“ಸರಿ, ಸರಿ! ಏನು ಮಹಾ ಅಂತ ಹಂಚೋದು ?

“ಏನು ಮಹಾ ಅಂದರೆ ? ಇಷ್ಟೊಳ್ಳೆ ಲೇಖನ ಬೇರೆ ಯಾರಾದರೂ " ಬರೀಲಿ ನೋಡೋಣ !”

“ಸುಮ್ಮನೆ ಮುಖಸ್ತುತಿ ಮಾಡ್ತೀರಾ ....”

“ಯಾರು ನಾನೇ ? ಈ ಮಿತಿಮಿಾರಿದ ಸೌಜನ್ಯ ಬಿಟ್ಟುಬಿಡಿ ವಿಶಾಲಿ....”