ಪುಟ:Vimoochane.pdf/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನಾನು ಮಾತನಾಡುತ್ತಿದ್ದ ಹಿಂದೂಸ್ಧಾನಿ ಹರಕು ಮುರು ಕಾಗಿತ್ತು. ಆತ ಅದನ್ನು ಗಮನಿಸುತ್ತಿರಲಿಲ್ಲ. ನನ್ನ ಮನಸ್ಸಿನಲ್ಲಿದ್ದುದನ್ನು ತಿಳಿದುಕೊಂಡು ಉತ್ತರ ಕೊಡುತ್ತಿದ್ದ.

"ಈ ಹಮಾಲಿ ಕೆಲಸ ನಿನಗೆ ಇಷ್ಟಾನ?"

ಆ ಕೆಲಸ ನನಗೆ ಇಷ್ಟವಾಗಿರಲಿಲ್ಲ. ಪರಿಸ್ಧಿತಿ, ನನ್ನನ್ನು ಆ ಗತಿಗೆ ಇಳಿಸಿತ್ತು.

"ನಾನೂ ಅಷ್ಟೇ, ನಾನು ಅಷ್ಟೇ ಶೇಖರ್."

ಆತ, ತಂದೆಯನ್ನು ಬಾಲ್ಯದಲ್ಲೆ ಕಳೆದುಕೊಂಡಿದ್ದ. ಮನೆ ತುಂಬ ಮಕ್ಕಳಿದ್ದ ಸಂಸಾರ ಅವರದು. ಮೂವರು ಸೋದರರು. ನಾಲ್ವರು ಹುಡಿಗಿಯರು. ಅಮಿರ್ ಮೂರನೆಯವನು. ಬಡತನದ ಲ್ಲೇ ನಿರ್ಗತಿಕನಾಗಿ ಅವರ ತಂದೆ ಸತ್ತಮೇಲೆ, ಆ ಮನೆಯೊಂದು ಪರಸ್ಪರ ಕೊಯ್ದು ಕಿತ್ತಾಡುವ ಯುದ್ಧ ಭೂಮಿಯಾಯಿತು. ಯಾರಿಗೂ ವಿದ್ಯಾಭ್ಯಾಸವಿರಲಿಲ್ಲ. ಅವರ ಸಂಪಾದನೆಯೆಲ್ಲವೂ ಆಷ್ಟಕಷ್ಟೆ. ಹಿರಿಯಣ್ಣನನ್ನೂ ಮದುವೆಗಾಗಿ ನೆರೆನಿಂತಿದ್ದ ಅಕ್ಕತಂಗಿಯರನ್ನೂ ಬಿಟ್ಟು ಅಮೀರ್ ಮತ್ತು ಅವನಣ್ಣ ಆ ಮನೆಯಿಂದ ಹೊರಟರು. ಅದು ಆರು ವರ್ಷಗಳ ಹಿಂದಿನ ಕತೆ. ಸೋದರರು ಹಿಡಿದ ಹಾದಿ ಬೇರೆ ಬೇರೆ.

ಅಮೀರ್ ಸಂಭಾವಿತನಾಗಿ ಒಳ್ಳೆಯವನಾಗಿ ಬದುಕಲು ಯತ್ನಿ ಸಿದ. ಆದರೆ ಅವನು ವಿದ್ಯಾವಂತನಾಗಿರಲಿಲ್ಲ. ಹಣವಂತನಾಗಿರ ಲಿಲ್ಲ. ಉಳಿದವರ ಮೇಲೆ ಪ್ರಭಾವ ಬೀರುವಂತಹ ಮನೆತನದ ಪ್ರತಿಷ್ಠೆ ಆತನಿಗಿರಲಿಲ್ಲ. ಅವನು ಹೆಸರಿನಲ್ಲಿ ಮಾತ್ರ ಆಮೀರ್. ಕಡು ಬಡವನಾದ ಲಕ್ಷ್ಮೀನಾರಾಯಣ್ ಇದ್ದ ಹಾಗೆ. ಹೀಗೆ ಆಮೀರ್ ಬಲು ತರ್ಕ ಬದ್ಧವೆಂದು ಕಾಣುವ ಹಾದಿಯಲ್ಲಿ ಹೆಜ್ಜೆಯ ಮೇಲೆ ಹೆಜ್ಜೆಯಿಡುತ್ತಾ ಜೇಬುಗಳ್ಳರ ವೃತ್ತಿಯ ಹೊಸ್ತಿಲಿಗೆ ಬಂದ; ಮೊದಲ ಪಾಠಗಳನ್ನು ಕಲಿತ.

ಆತನ ಕತೆಯನ್ನು ಕೇಳುವುದರ ಮೂಲಕ, ಕಾಲ್ಪನಿಕ ಕತೆಗಳ ಬದಲು ವಾಸ್ತವ ಜೀವನದ ಅಂಶಗಳನ್ನು ತಿಳಿಯುವುದರ