ಸ್ಥಾಪಿಸಿದಂತೆ, ಭಾಸವಾಗುತ್ತಿತ್ತು.
ನನ್ನ ಮೌನ ಅಮೀರನಿಗೆ ಅಸಹನೀಯವಾಗಿತ್ತು. ಅವನು ಎದ್ದು ಕೊರಳಿಗೆ ಕರ ವಸ್ತ್ರ, ಬಿಗಿದುಕೊಳ್ಳುತ್ತಾ ಬೀದಿಗಿಳಿದ.
ಆ ಮೇಲೆ ಶೀಲ ಮಾತನಾಡಿಸಿದಳು.
"ಏನಪ್ಪ, ನೀವಬ್ಬರೂ ಜಗಳವಾಡಿದಿರಾ?"
"ಇಲ್ವಲ್ಲಾ ಅತ್ತಿಗೆ."
ಮತ್ಯಾಕೆ, ಒಂಥರಾ ಇದ್ದೀಯೆ?"
"ನೀನು ಊರಿಗೆ ಹೋಗ್ಬೇಕೂಂತ ಇದೀಯಂತೆ ನಿಜವಾ?"
"ಹೌದು ಅತ್ತಿಗೆ. ನನ್ನಜ್ಜಗೆ ಕಾಹಿಲೆನಂತೆ. ಅವಳಿಗೆ ಬೇರೆ ಯಾರೂ ಇಲ್ಲ. ನಾನು ಹೋಗಬೇಕು ಅತ್ತಿಗೆ."
ಅವಳ ಸ್ತ್ರೀ ಹೃದಯ ಮೃದುವಾಗಿತ್ತು. ದಿನದಿನಕ್ಕೂ ಅಮೀರ ನಂತೆ ಹೆಚ್ಚಾಗಿ ಹೃದಯವನ್ನು ವಜ್ರ ಶಿಲೆಯಾಗಿ ಅವಳು ಕಠಿಣಗೊಳಿಸುತ್ತಿರಲಿಲ್ಲ. ಅವಳು ನಿಟ್ಟುಸಿರು ಬಿಟ್ಟು ಸುಮ್ಮನಾದಳು.
"ಅಮೀರಣ್ಣನಿಗೆ ನಾನು ಹೋಗೋದು ಇಷ್ಟವಿಲ್ಲ."
"ಹೇಗಿದ್ದೀತು ಹೇಳು? ನಿನ್ನ ಅವನೆಷ್ಟೊಂದು ಪ್ರೀತಿಸ್ತಾನೆ ಗೋತ್ತಾ? ನಾನಾದ ಮೇಲೆ ಜೀವದಲ್ಲಿ ಮುಖ್ಯ ವ್ಯಕ್ತಿ ಎಂದರೆ ನೀನೇ. ಅದು ನಿನಗೆ ಗೊತ್ತಾ?"
"ಗೊತ್ತು ಅತ್ತಿಗೆ. ಆದ್ದರಿಂದಲೇ ನಾನು ಹೊರಟು ಹೋಗೋದು ಕಷ್ಟವಾಗಿದೆ ಯಾವುದೋ ಕಾಣದ ಬಳ್ಳಿ ನನ್ನನ್ನು ಎಲ್ಲಿಗೆ ಕಟ್ಟಿ ಹಾಕಿದೆ."
"ಅಮಿರ್ ಯಾವತ್ತೂ ಊರಿಗೆ ಹೋಗೋ ಯೋಚನೆ ಮಾಡಲ್ಲ. ಮತ್ತೆ ನೀನು ಯಾಕೆ ಮಾಡ್ಬೇಕು?"
"ಅಲ್ಲೇ ಅಮಿರ್ಗೂ ನನಗೂ ಇರೋ ವ್ಯತ್ಯಾಸ.
"ಏನೋಪ್ಪ ನಿನ್ಮಾತೇ ಅಥರ್ವಾಗೋದಿಲ್ಲ ನನಗೆ."
"ಊರಿಗೆ ಹೋಗಿ ಏನ್ಮಾಡ್ಬೇಕೂಂತ ಇದೀಯಾ?"