ಪುಟ:Vimoochane.pdf/೧೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅಜ್ಜಿ ಕೆರಳಿದರು.

"ನೀನೇನಾದಾರೂ ಆ ಮಗೂಗೆ ಅಂದುಗಿಂದಿ ಅಂದರೆ ನಿನ್ನ ನಾಲಿಗೆ ಸೀದು ಹೋಗುತ್ತೆ. ಪಾಪಿ ಚಂಡಾಲ. ಅವರು ಬದುಕಿ ದ್ದಾಗ ನನ್ನನ್ನ ಪೀಡಿಸಿದ ಪಿಶಾಚಿ, ಈಗಲೂ ಬಂದಿಯಾ?"

ನಾನು ಧೈರ್ಯ ತಾಳಿ, "ನೀವು ಯಾರೇ ಇರಿ. ದಯವಿಟ್ಟು ಈಗ ಹೊರಟ್ಟುಹೋಗಿ. ಅಜ್ಜಿಗೆ ತೊಂದರೆ ಆಗುತ್ತೆ. ದಯವಿಟ್ಟು ಹೊರಟುಹೋಗಿ," ಎಂದು ಗಟ್ಟಿಯಾಗಿ ಹೇಳಿದೆ.

ತಪೋಬಲ ಇರುತ್ತಿದ್ದರೆ ಅಲ್ಲೆ ನನ್ನನ್ನು ಅವರು ಸುಟ್ಟು ಬಿಡು ತ್ತಿದ್ದರೇನೋ. ಆದರೆ ಆ ಕೆರಳಿದ ನೋಟಕ್ಕೆ ನಾನು ಮಿಸುಕಲ್ಲಿಲ್ಲ.

ನೆರೆ ಮನೆಯವರು ಬಂದರು. ಮತ್ತೆ ಗದ್ದಲವಾಯಿತು. ಅಜ್ಜಿಯ ಅಪೇಕ್ಷೆಯಂತೆ ಎಮ್ಮೆಯ ದಾನ ಪಡೆದಿದ್ದ ಅವರು, ಅಜ್ಜಿಯ ಪಕ್ಷವನ್ನೆ ವಹಿಸಿದರು. ಬಂದಿದ್ದ ಶಂಕರ ಕೆರಳಿ ಕಿರಿಚಿಕೊಂಡ.

"ಪಾಪಿಗಳು. ಮುದುಕಿ ಸಾಯ್ತಾ ಇದ್ದರೆ, ಆಸ್ತಿ ಹೊತ್ತಾ ಕೋಕೆ ನೋಡ್ತಾ ಇದ್ದಾರೆ. ತೋರಿಸ್ತೀನಿ, ಕೋರ್ಟಿಗೆ ಎಳೀತೀನಿ. ಆಗ ಗೊತ್ತಾಗುತ್ತೆ. ನ್ಯಾಯ ಧರ್ಮ ಮಣ್ಣುಪಾಲಾಯಿತೇನು ಇಷ್ಟ ರಲ್ಲೆ?"

ಆತನಿಗೇನು ಬೇಕಾಗಿತ್ತು? ಆ ಮನೆಯೆ? ಅದಾಗಿದ್ದರೆ ಅದನ್ನು ಕೊಟ್ಟು ಬಿಡಬಹುದು. ಅಷ್ಟು ದೊರೆತರೆ ಆತ ಅಲ್ಲಿಂದ ತೊಲಗಲಾರನೆ? ಅಜ್ಜಿಯನ್ನು ನೆಮ್ಮದಿಯಲ್ಲಿ ಬಿಟ್ಟು ಹೋಗಲಾರನೆ?

ಆ ವ್ಯಕ್ತಿ ಅಜ್ಜಿಯ ಭಾವ ಮೈದುನನಾಗಿದ್ದ. ಆ ಹುಡುಗ ಆತನ ಕಿರಿಯ ಮಗ. ಆ ಮಗನೊಡನೆ, ಬಂದವನು ಹೊರಟು ಹೋದ. ನ್ಯಾಯಾಸ್ಧಾನದ ಕಟ್ಟೆಯೇರಲು ನಿರ್ಧರಿಸಿದ್ದ ಅವನು, ನಮ್ಮ ಮನೆಯ ಮೆಟ್ಟಲಿಳಿದು ಹೋಗಲು ತಡಮಾಡಲಿಲ್ಲ.

ಆ ಮೇಲೋಂದು ದಿನ, ಮಧ್ಯಾಹ್ನದ ಹೊತ್ತಿಗೆ ಅಜ್ಜಿಗೆ ಮಾತು ಕುಂಠಿತವಾಗ ತೊಡಗಿತು. ಆಕೆ ನನ್ನನ್ನು ಸಮಿಪಕ್ಕೆ ಕರೆದು ಕ್ಷೀಣ ಸ್ವರದಲ್ಲಿ ಹೇಳಿದರು.

"ಚಂದ್ರೂ........ಇನ್ನೇನು ಆಗ್ತಾ ಬಂತು.........ಅಲ್ನೋಡ್ದಾ