ಪುಟ:Vimoochane.pdf/೧೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೩೯

ವಿಮೋಚನೆ

ತಂದೆಯ ಸ್ವರ ಮೈದಡವುವ ಹಾಗೆ ಕೇಳಿಬರುತ್ತಿತ್ತು:

"ನೀನು ದೊಡ್ಡಮನುಷ್ಯನಾಗ್ಬೇಕು ಚಂದ್ರೂ. ದೊಡ್ಡ ಮನುಷ್ಯ ನಾಗಬೇಕಪ್ಪ."

ತಂದೆಯ ಬಯಕೆಯನ್ನು ನಾನು ಈಡೇರಿಸುವುದು ಎಂದಿಗೂ ಸಾಧ್ಯವಿರಲಿಲ್ಲ. ಆತನ ಕಲ್ಪನೆಯ ದೊಡ್ಡಮನುಷ್ಯನಾಗುವುದು ಎಂದಿಗೂ ಸಾಧ್ಯವಿರಲಿಲ್ಲ. ಇಪ್ಪತ್ತು ವರ್ಷಗಳ ಅವಧಿಯ ಜೀವನ ವನ್ನು ನಾನು ಕಂಡಿದ್ದೆ. ಅದು ಮಧುರವಾಗಿರಲಿಲ್ಲ, ಕಹಿಯಾಗಿತ್ತು. ಶಾಲೆಗೆ ಹೋಗದೆ ಇದ್ದರೂ ಜ್ಞಾನಿಯಾಗಿದ್ದ ಅಮೀರನ ಮಾತುಗ ಳಲ್ಲಿ ಸತ್ಯಾಂಶ ಒಡೆದು ತೋರುತ್ತಿತ್ತು: ಈ ಸಮಾಜ.... ಒಬ್ಬರನ್ನೊ ಬ್ಬರು ಸುಲಿಯುವ ಸೂತ್ರ.......

ಹೀಗಿದ್ದರೂ ನಾನು, ಸುಲಿಗೆಯ ಒಂದು ಯಂತ್ರಕ್ಕೆ ಸಣ್ಣ ಕೀಲಿ ಯಾಗಿ ಬದುಕಲು ಯತ್ನಿಸಿದೆ. ಆ ಯತ್ನಕ್ಕಾಗಿ ನಾನು ಜವಾಬ್ದಾರ ನಾದ ಯುವಕನಾಗಬೇಕಿತ್ತು. ಮುಖದ ಮೇಲಿನ ಮಗುತನದ ಬದಲು, ಎಲ್ಲರನ್ನೂ ದಿಟ್ಟತನದಿಂದ ನೋಡುವ ನೋಟ ಬೇಕಿತ್ತು. ಅಂಥಾ ನೋಟ ನನ್ನಲ್ಲಿದ್ದರೂ ಮುಖದ ಮುಗ್ಧತೆ ಮಾಯವಾಗಿರಲಿಲ್ಲ. ಕನ್ನಡಿಯಲ್ಲಿ, ಮುಖ ಸುಂದರವಾಗಿ ಕಾಣುತ್ತಿತ್ತು. ತೆಳ್ಳನೆಯ ಬಾಲಮೀಸೆಯೊಂದು ಆಲಂಕಾರವಾಗಿತ್ತು. ಗಲ್ಲದ ಕಳಗೆ ಮೂರು ನಾಲ್ಕು ಕೂದಲುಗಳು ವಿನಯದಿಂದ ನೀಳವಾಗಿ ಬೆಳೆಯತ್ತಿದ್ದವು. ನಾನು ಪೇಟೆಗೆ ಹೋಗಿ ಆರಾಣೆ ಕೊಟ್ಟು, ಒಂದು ಷೇವಿಂಗ್ ಸೆಟ್ಟು, ತಂದೆ. ತಂದ ಮರುದಿನ ಬಲು ಶ್ರಮಪಟ್ಟು ಮುಖಕ್ಷೌರಮಾಡಿ. ಗಲ್ಲದಲ್ಲಿ ಎರಡು ಪುಟ್ಟ ಗಾಯಗಳಾಗಿ ರಕ್ತ ಸೋರಿತು. ಮುಖವೆಲ್ಲಾ ಉರಿಯಿತು. ತಣ್ಣೀರಿನಲ್ಲಿ ಚೆನ್ನಾಗಿ ನೀರು ಹನಿಸಿ ಮುಖ ಒರೆಸಿದೆ. ನನ್ನನ್ನು ಕಂಡು ನನಗೇ ತಮಾಷೆ ಎನ್ನಿಸಿತು. ವಯಸ್ಸಿನ ಮಾರ್ಪಾಟನ್ನು ತಂದುಕೊಟ್ಟಿತ್ತು ಆ ಮುಖ ಕ್ಷೌರ.

ಉಣ್ಣೆಯ ಸೂಟು ತೊಟ್ಟು, ನಾನು ಕೆಲಸದ ಬೇಟೆಗೆ ಹೊರಟೆ. ನಾನು ವಿದ್ಯಾವಂತನಾಗಿದ್ದೆ-ಗುಮಸ್ತನಾಗಲು ಸಾಕಷ್ಟು ಸಾಮರ್ಥ್ಯವಿದ್ದ ವಿದ್ಯಾವಂತ.