ಪುಟ:Vimoochane.pdf/೧೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಬೀದಿಯ ದೀಪಗಳು ಹತ್ತಿಕೂಂಡಿದ್ಡವು. ಹೊರಗೆ ನಿಂತಿದ್ದ ನಾಲ್ಕಾರು ಜನ, ಸೂಟುಧಾರಿಯಾಗಿದ್ದ ನನನ್ನು ಕುತೂಹಲದಿಂದ ನೋಡಿದರು. ತಲೆಗೂದಲನ್ನು ಬದಿಗೆ ಸರಿಸಿ ಗಂಭೀರವಾಗಿ ಹೆಜ್ಜೆಯ ಮೇಲೆ ಹೆಜ್ಜೆ ಇಟ್ಟು, ನಾನು ಮುಂದೆ ನಡೆದೆ . ಸಾವಿರ ಕಣ್ಣುಗಳು ನನ್ನನ್ನೇ ನೋಡುತ್ತಿದ್ದಂತೆ ಭಾಸವಗುತ್ತಿತ್ತು. ಆ ತೀಕ್ಷ್ಣ ದೃಷ್ಟಿಗಳ ಮುಂದೆ ನಾನು ತಲೆಬಾಗಲಿಲ್ಲ. ಬಾಹ್ಯ ಜಗತ್ತು ನನ್ನನ್ನು ಅಣಿಕಿ ಸುತ್ತಿದ್ದಂತೆ ತೋರಿತು. ನಾನು ಎದುಗುಂದದೆ ಮುಂದುವರಿದೆ.

ಮನೆಯ ನೆನಪಾಯಿತು. ಬೀಗ ತಗುಲಿಸಿರಲಿಲ್ಲ. ಬೆಳ್ಳಿಗ್ಗೆ ಹೊರ ಬಿದ್ದಾಗ ಬಾಗಿಲುಗಳು ತೆರೆದೇ ಇದ್ದವು...

ಬಲು ವೇಗವಾಗಿ ನಾನು ಮನೆಯತ್ತ ನಡೆದೆ, ಆದರೆ ತಡವಾಗಿ ನಾನು ಮನೆ ಸೇರಿದ್ದೆ. ನೆರೆ ಮನೆಯಲ್ಲಿ ತಂದೆ ಮಗನಿಗೆ ಪಾಠ ಓದಿ ಸುವುದು ಕೇಳುತ್ತಿತ್ತು. ನಾನು ಬಂದ ಸದ್ದಾದಾಗ ಆತ ಎದ್ದು ಹೊರಕ್ಕೆ ಬಂದರು.

"ಚಂದ್ರಶೇಖರ್, ವಿಷಯ ತಿಳಿತಾ ನಿನಗೆ? "

ಆ ಮಾತಿನಲ್ಲಿ ಕಾತರವಿತ್ತು.

"ಏನು ವಿಷಯ? "

ನೀನು ಹೋದ್ಮೇಲೆ ಬಾಗಿಲು ಹಾಕ್ಕೊಳ್ಳೋಣಾಂತ ಇದ್ವಿ. ಆದರೆ ಧೈರ್ಯ ಬರ್ಲಿಲ್ಲ. ಪೋಲೀಸರ ಸಹವಾಸ ಬೇರೆ. ಆದರೂ ಮನೆ ಮೇಲೆ ನಿಗಾ ಇಟ್ತಿದ್ವಿ. ಮಧ್ಯಾಹ್ನ ಇಬ್ಬರು ಬಂದ್ರು. ಯಾರೂಂತ ನಾನು ಕೇಳಿದಾಗ ಸ್ಟೇಷನ್ನಿಂದ ಬಂದಿದೀವಿ ಅಂತ ದಬಾಯಿಸಿದರು. ನಾನು ಮನೆ ಸೇರ್ಕೋಂಡ್ಬಿಟ್ಟೆ. ಅಂತೂ ಎರಡು ದೊಡ್ದ ಮೂಟೆ ಕಟ್ಕೊಂದು ಹೋದ ಹಾಗಿತ್ತಪ್ಪ. "

ಆ ಮಾತಿನಲ್ಲಿ ಸಹಜತೆ ಇತ್ತು. ನನ್ನ ಕಣ್ಣೆದುರಲ್ಲೆ ಅವರು ಬೆಳೆದು ಮುದುಕರಾಗಿದ್ದರು. ಅವರ ಸಂಸಾರ ರಥ ಸಾಗಿಸುವುದರಲ್ಲೆ ಅವರ ಕೂದಲು ಹಣ್ಣಾಗಿತ್ತು.

ನಾನು ಮೌನವಾನಿ ಕಡ್ದಿ ಕೊರೆದೆ. ಗಾಳಿಗೆ ಅದು ನಿಲ್ಲಲಿಲ್ಲ. ಮತ್ತೆ ಮತ್ತೆ ಕಡ್ದಿ ಗೀರಿದೆ. ನೆರೆಮನೆಯಾತ ಕಂದೀಲು ತಂದು