ಪುಟ:Vimoochane.pdf/೧೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

"ಬೇಡಿ, ಏನೂ ಬೇಡಿ."

"ಮತ್ತೆ ?"

"ಬೇಡಿ ಎಂದೆನಲ್ಲ. ಈ ರಾತ್ರೆ ನಾನು ಇಲ್ಲಿರೋದಿಲ್ಲ."

ಅವರು ನಿಟ್ಟುಸಿರುಬಿಟ್ಟರು.

"ಏನೋಪ್ಪ ಚಂದ್ರಶೇಖರ್. ಹೀಗಾಗುತ್ತೇಂತ ಯಾರಿಗೆ ಗೊತ್ತಿತ್ತು ಹೇಳು,,,,,,,,ಒಂದೂ ಅರ್ಥವಾಗೋದಿಲ್ಲ ಈ ಕಾಲದಲ್ಲಿ."

ನಾನು ಅವರ ಕಂದಿಲ್ಲಿನೊಡನೆ ಬಾಗಿಲನ್ನು ದಾಟಿ ಹೊರಬಂದೆ. ಅವರು ತಮ್ಮ ಕಂದೀಲನ್ನು ಹಿಂಬಾಲಿಸಿ ಬಂದರು. ಹೊರಗೆ ದಟ್ಟ ವಾದ ಕತ್ತಲು ನಮ್ಮನ್ನೂ ಕಂದೀಲನ್ನೂ ಅಣಕಿಸುತ್ತಿತ್ತು.

ನನ್ನನ್ನು ಅಲ್ಲೆ ಬಿಟ್ಟು ನೆರೆಮನೆಯಾತ ಕಂದೀಲನ್ನು ಆಡಿ ಸುತ್ತಾ, ತಮ್ಮ ಮನೆಯೊಳಕ್ಕೆ ಹೋದರು. ನಾನು ಗೊತ್ತು ಗುರಿ ಇಲ್ಲದೆ ರಸ್ತೆಗಿಳಿದೆ.

ಬಾರಿ ಬಾರಿಗೂ ನನ್ನನ್ನು ಇದಿರಿಸುತ್ತಿದ್ದ ಆ ಶೂನ್ಯ. ಬಾರಿ ಬಾರಿಗೂ ಅದನ್ನು ನಾನು ದಾಟಿ ಮುಂದೆ ಸಾಗಬೇಕಾಗುತ್ತಿತ್ತು. ಅಂತಹ ಒಂದೊಂದು ಕಾಲಘಟ್ಟವೂ ನನಗೆ ಬಳಲಿಕೆಯನ್ನು ತರು ತ್ತಿತ್ತು. ಜೀವನದ ಆ ಒಂದೊಂದು ಹೆಜ್ಜೆಗೂ ನಾನು ಹೆಚ್ಚು ವಯಸ್ಕನಾಗುತ್ತಿದ್ದೆ.

ಹಿಂದಿನ ಸಂಜೆ ಬಡಪಾಯಿ ಹೆಂಗಸೊಬ್ಬಳಿಗೆ ನ್ಯಾಯ ದೊರಕಿಸಲು ಹೋದಾಗ, ಒಂದು ದಿನದೊಳಗೆ ಹೀಗಾಗುವುದೆಂದು ಯಾರು ಭಾವಿಸಿದ್ದರು? ಹಿಂದಿನ ಸಂಜೆ, ಆಕೆಯನ್ನು ಮನೆಗೆ ಕರೆದು ತಂದು ದೀಪ ಹಚ್ಚಿದ್ದಾಗ, ಮುಂದೆ ಒಂದು ದಿನದೊಳಗಾಗಿ ಆ ದೀಪವೇ ಮಾಯವಾಗುವುದೆಂದು ಯಾರು ತಿಳಿದಿದ್ದರು?

ಸಾವಧಾನವಾಗಿ ಚಲಿಸಿದರೆ ಒಂದು ವರ್ಷ ಬೇಕಾಗುವಷ್ಟು ದೂರವನ್ನು ಒಂದೇ ದಿನದಲ್ಲಿ ನಾನು ಕ್ರಮಿಸಿದ್ದೆ.

... ಇನ್ನು ಮುಂದಿನ ಹಾದಿ ಹುಡುಕಬೇಕು. ಉಣ್ಣೆಯ ಫೋಷಾ ಕಿನ ಹೊರ ಜೇಬುಗಳೂ ಒಳ ಜೇಬುಗಳೂ ಖಾಲಿಯಾಗಿದ್ದವು. ಹೊಟ್ಟೆ ಹಸಿದಿತ್ತು. ಮೈಯಲ್ಲಿ ಉತ್ಸಾಹವೆಲ್ಲಾ ಮಾಯವಾಗಿ ಕಾಲು