ಪುಟ:Vimoochane.pdf/೧೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೭೬

ವಿಮೋಚನೆ

ಯಂತ್ರವಾಗಿ ಮಾರ್ಪಟ್ಟಿರಲಿಲ್ಲ. ಆತನ ಜೀವನದ ಕತೆಯನ್ನು
ಸುಳ್ಳೆಂದು ಹೇಳಲು ನಾನು ಸಿದ್ದನಿರಲಿಲ್ಲ, ಆದರೆ ಅಂತಹ ಕತೆ
ಯನ್ನು ನಾನು ದ್ವೇಷಿಸುತ್ತಿದ್ದೆ, ಇದು ಜೀವನದ ಪುನರಾವರ್ತ
ನೆಯೆ? ಆತ ಕ್ಯಾತನಹಳ್ಳಿಯಿಂದ ಬಂದಿದ್ದ ಬಡ ಗೌಡ. ಹಳ್ಳಿ
ಯಿಂದ ಬರುವುದು.....ಮಿಲ್ಲಿನಲ್ಲಿ ಕೆಲಸ ...ಕೆಮ್ಮು, ಭಿಕ್ಷೆ ಹದಿ
ನೈದು ವರ್ಷಗಳ ಹಿಂದೆ, ತಂದೆ ನನ್ನ ತಂದೆ, ಹಾಗೆಯೇ ಬಂದಿದ್ದ.
ಆದರೆ ನಾನು ಅವನಿಗೆ ಜೊತೆಗಾರನಾಗಿದ್ದೆ, ಈ ಮುದುಕನಿಗೆ
ಅಂತಹ ಜೊತೆಗಾರರಿದ್ದರೊ ಇಲ್ಲವೊ ತಿಳಿಯದು, ತಿಳಿಯುವ
ಇಚ್ಛೆಯೂ ನನಗಿರಲಿಲ್ಲ, ಇಂತಹ ಗೋಳಿನ ಕತೆಗಳನ್ನು ನಾನು
ಯಾಕೆ ಕೇಳಬೇಕು?ಸುತ್ತ ಮುತ್ತಲಿನ ಸಂಕಟವನ್ನೆಲ್ಲಾ ಕಂಡು
ಕನಿಕರಪಡುತ್ತಾ ಹೃದಯ ಕರಗಿಸಲು, ನಾನು ಸುಖದ ಸುಪ್ಪತ್ತಿಗೆ
ಯಿಂದ ಇಳಿದು ಬಂದ ದೇವತೆಯಾಗಿರಲಿಲ್ಲ.... ದೇವತೆಯಾಗುವ
ಇಚ್ಛೆ ನನಗಿರಲಿಲ್ಲ.

.....ಶ್ರೀಕಂಠನ ಹಾಗೆಯೇ ನನಗೆ ಬಾಲ್ಯ ಸ್ನೇಹಿತರು ಹಲವ

ರಿದ್ದರು, ವರ್ಷ ವರ್ಷಗಳು ಕಳೆದ ಹಾಗೆ ಅವರೆಲ್ಲ ಬೇರೆ ಬೇರೆ
ಯಾಗಿ ಬೆಳೆದು ತಮ್ಮ ತಮ್ಮ ಹಾದಿ ಹಿಡಿದಿದ್ದರು. ನಾನು ಆ
ಹಿಂಡಿಗಿಂತ ದೂರವಾದವನು–ಅನಿವಾರ್ಯ ಕಾರಣಗಳಿಗಾಗಿ ದೂರ
ವಾದವನು. ಅವರು ಯಾರನ್ನೂ ಕಾಣಲು ನಾನು ಇಷ್ಟ ಪಡಲಿಲ್ಲ,
ಆದರೂ ಬೊಂಬಾಯಿಗಿಂತ ಚಿಕ್ಕದಾದ ನನ್ನ ಊರಿನಲ್ಲಿ ಅವರಲ್ಲಿ
ಎಂದಾದರೂ ಯಾರಾದರೂ ಒಬ್ಬರನ್ನು ನಾನು ಅಪೇಕ್ಷಿಸದೆ ಇದ್ದರೂ
ಕೂಡ, ಬೀದಿಯಲ್ಲಿ ಕಾಣಬೇಕಾಗುತ್ತಿತ್ತು.

ಮತ್ತೊಂದು ಸಂಜೆ, ನಾರಾಯಣ ನನಗೆ ಕಾಣಲು ದೊರೆತ.

ಹುಡುಗನಾಗಿದ್ದಾಗ ಜೊತೆಯಲ್ಲಿ ಓದುತ್ತಿದ್ದಾಗ ಅವನ ಮುಖ
ದುಂಡಗೆ ತುಂಬಿಕೊಂಡು ಸದಾ ಗೆಲುವಾಗಿರುತ್ತಿತ್ತು, ತಾನೂ ನಕ್ಕು
ಎಲ್ಲರನ್ನೂ ನಗಿಸುವ ಮಹಾ ಸಾಮರ್ಥ್ಯ ಆತನಿಗಿತ್ತು, ಆದರೆ ಈಗ?
ಆತ ಎತ್ತರವಾಗಿ ಬೆಳೆದಿದ್ದ-ಒಣಗಿದ ಕಡ್ಡಿಯಂತೆ. ಕಪೋಲಗಳು
ಬತ್ತಿದ್ದುವು. ಮುಖದ ಮೂಳೆಗಳು ಎದ್ದು ಕಾಣಿಸುತ್ತಿದ್ದುವು.........