ಪುಟ:Vimoochane.pdf/೨೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕಾದು ನೋಡಿದ್ದಾಯಿತು ; ಹೇಳಿದ್ದಾಯಿತು.

ಮುಷ್ಕರದ ಸಿದ್ದತೆ ನಡೆದಿತ್ತು. ಆರಂಭಕ್ಕೆ ನಾಲ್ಕು ದಿನಗ ಳಿದ್ದಾಗ ಮಾಲಿಕರ ಸೂಚನೆಯಂತೆ ಕಾನೂನು- ನೆಮ್ಮದಿಯ ರಕ್ಷ ಕರು ಮುಂಜಾಗ್ರತೆಯ ಕ್ರಮ ಕೈಕೊಂಡರು.ನಿಯೋಗ ಬಂದಿದ್ದ ಆರು ಜನರೂ ಬಂಧಿಸಲ್ಪಟ್ಟರು. ಸಭೆ ಮೆರವಣಿಗಳನ್ನು ನಿಷೇಧಿ ಸುವ ಆಜ್ನೆ ಜಾರಿಯಾಯಿತು.

ಬಂಧನವಾದುದು ರಾತ್ರೆ ಹೊತ್ತು. ಸುದ್ದಿ ಮಾತ್ರ ಆಗಲೆ ಕಾಳ್ಗಿಚ್ಚಿನಂತೆ ಹಬ್ಬಿತು. ರಾತ್ರೆ ಷಿಫ್ಟಿಗೆ ಹೋಗಿದ್ದ ಕಾರ್ಮಿಕರು ಹೊರಬಂದು ವಿದ್ಯುಶ್ ಮುಶ್ಕರ ನಡೆದಿತ್ತು.

ಮರು ದಿನ ಒಂದೇ ಒಂದು ಬಟ್ಟೆ ಕಾರ್ಖಾನೆಯೂ ತೆರೆಯ ಲ್ಲಿಲ. ಕೂಲಿಕಾರರು ವಾಸವಾಗಿದ್ದ ಪ್ರದೆಶಗಲ್ಲೆಲಾ ಮಿಂಚಿನ ಸಂಚಾರವಾಗಿತ್ತು. ಆ ಗುಜು ಗುಜು ಮಾತು- ಚೈತನ್ಯ ಸೂಸುತಿದ್ದ ಕಣ್ಣುಗಳು . ಅದು ಸಾದ್ಯವಿತ್ತಲ್ಲವೆ? ನಾನು ಅಂಥ ಘಟನೆಯನ್ನು ಎಂದೂ ನಿರೀಕ್ಶಿಸಿರಲಿಲ್ಲ. ತಲೆ ಬಾಗಿ ನಡೆಯುವ ಬಡ ಕೂಲಿಗಾರ ಸೆಟಿದು ನಿಲ್ಲುವುದು ಸಾಧ್ಯವಿತ್ತಲವೆ?

ಆದರೆ ಆಗ ನನಗಿನ್ನೂ ಅವರ ಶಕ್ತಿ ಸಾಮರ್ಥ್ಯದ ಬಗ್ಗೆ ನಂಬಿಕೆ ಇರಲಿಲ್ಲ. ಸಾರ್ಕಾರದ ಬೆಂಬಲವಿದ್ದ ಬಲಾಢ್ಯ ಶಕ್ತಿಗಳೆದು ರಲ್ಲಿ ಕೂಲಿಕಾರರ ಪ್ರತಿಭಟನೆ ಖಂಡಿತ ಮುಣ್ಣುಗೂಡುವುದೆಂದು ನಾನು ತಿಳಿದಿದ್ದೆ.

......... ಆ ತಿಳಿವಳಿಕೆ ತಪ್ಪಗಿತ್ತು.

ಶ್ರೀಕಂಠ ಹೇಳಿದ.

"ನೋಡಿದಿಯಾ ಚಂದ್ರು ?ಈ ಕೂಲಿಕಾರರ ಪ್ರಶ್ನೆ ಇನ್ನು ಯಾವಾಗ್ಲೂ ಉಳಿಯುತ್ತೆ.ಈ ಸಾರೆ ಉಪಾಯವೇ ಇಲ್ಲ. ಒಂದು ದಿನ ಕಾರ್ಖನೆ ಮುಚ್ಚಿದರೂ ನಷ್ಟವಾಗತ್ತೆ....."

"ಏನ್ಮಾಡ್ಬೇಕೂಂತಿದೀರಾ?"

"ನಾಳೆಯಿಂದ್ಲೇ ಮಾತುಕತೆ ಷುರು ಮಾಡ್ಬೇಕು."

ಕಾಂಗ್ರೆಸ್ ಮುಖಂಡರೊಬ್ಬರು ರಾಯಭಾರದ ಭಾರಹೊತ್ತರು.