ಪುಟ:Vimoochane.pdf/೨೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅನುಭವವು ಆಗುತ್ತಿದೆ

ನೋವು ನನ್ನ ಕರುಳಿಗೆ ಸಂಬಂಧಿಸಿದ್ದು. ನಿದ್ದೆ ಕೆಟ್ಟಾಗ ಈ ನೋವು ಕೆರಳುತಿದೆ. ಘಂಟಿಗಟ್ಟಲೆ ಸಹಿಸಲಗದ ವೇದನೆ ಆಗ. ಮೊದಲು, ಅನ್ನಕೋಶವಿಂದ ಆರಂಭವಾಗಿ ಮೈಲುಗಳುದ್ದ ಕರುಳಿನ ದಾರಿಯಲ್ಲಿ ಯವೊದೋ ನೋವಿನ ಸಂಚಾರ. ಆ ಬಳಿಕ ಅತ್ತಿಂದಿತ್ತ ನೋವಿನ ತೀವ್ರ ಗಮನ. ದಿಂಬು ಕಚ್ಚಿಕೊಂಡು ಗೋಳಿಡುತ್ತ ಎಲ್ಲವನ್ನು ಮರೆಯುವ ಯತ್ನ..... ಹೃದಯದ ಮೆದುಳಿನ ನೋವು ಕಿತ್ತಾಟಗಳಿಗೆ, ಕಿರೀಟವಿಡುತ್ತಿದೆ ಈ ಕರುಳು.

ದೇಶಕ್ಕೆ ಸ್ವಾತಂತ್ರೈ ಬಂದಿತ್ತು. ಆದರೆ ನನ್ನ ಜಗತ್ತಿನೊಳಗೆ ನಾನೊಬ್ಬ ಕೈದಿಯಾಗಿಯೇ ಇದ್ದೆ-ನೇರಸ ಜೀವನದ ನೂರು ನಿಬ೯ಂಧಗಳ ಬೇಡಿ ತೊಟ್ಟ ಕೈದಿ.

ನಮ್ಮ ನಾಡಿನಲ್ಲಿನ್ನೂ ಹೊಸ ಬದಲಾವಣೆಯ ನಿಜಸ್ವರೊಪದ ಅರಿವು ಎಲ್ಲರಿಗು ಆಗಿರಿಲಿಲ್ಲ. ಅದಕ್ಕೋಸ್ಕರ ಇನ್ನೊಂದು ಹೋ ರಾಟ ನಡೆಯಿತು-ತ್ರಿವಣ೯ ಧ್ವಜವನ್ನು ಅರಮನೆಯ ಮೇಲೆ ಏರಿ ಸುವ ಹೋರಾಟ... ಆ ಬಳಿಕ ಮಂತ್ರಿಗಳ ಬಂದರು-ಕಾಂಗ್ರೆಸ್ ಮಂತ್ರಿಗಳು.

ತನ್ನ ಕಾರಿನ ಬಾನೆಟಗೊ ಶ್ರೇಕಠ ಮೂರು ಬಣ್ಣದೊಂದು ಬಾವುಟ್ಟ ಹಚ್ಚಿದ. ಅವನ ಕರಖಾನೆಯ ಮೇಲೆ, ಮನೆಯ ಮೇಲೆ, ರೇಷ್ಮಯ ದೊಡ್ಡ ಆಕೃತಿಯ ತ್ರಿವಣ೯ ಧ್ವಜಗಳು ಹಾರಾಡಿದುವು. ಮಗ ಬೇಬಿ ಬಾವುಟ ನೋಡಿ, ಎಲ್ಲ ಮಕ್ಕಳು ಹಾಗೆ ಕೈ ತಟ್ಟ ಕುಣಿದ. ಶ್ರೀಕಂಠನ ಮಾವನ ಮನೆಯಲ್ಲಿ ಸಚಿವ ಸಂಪುಟದ ಗೌರ ವಧ೯ ಭಾರೀ ಭೋಜನ ಕೊಟವೇಪ೯ಟ್ಟಿತು. ಶಾರದಾ ಸಮಧೆ೯ ಯಾಗಿ ಅತ್ತಿಂದಿತ್ತ ಓಡಾಡಿ ಏಪಾ೯ಟುಗಳ ಮೇಲ್ವಿಚಾರಣೆ ವಹಿಸಿ ದಳು. ಮಿಲಿಟರಿಯ ಸಶಸ್ತ್ರ ಹಿರಿಯರನ್ನೇ ತೊಗಿ ನೋಡಿದ್ದ ಶಾರದೆಗೆ, ಅಹಿಂಸೆಯ ಆರಾಧಕರಾದ ಸ್ವದೇಶೀ ಸಚಿವರನ್ನೆಲ್ಲ ಅಳೆಯುವುದು ಕಷ್ಟದ ಕೆಲಸವಾಗಿರಲಿಲ್ಲ.