ನಗ್ತೀರೇನೋ ಹೀಗೆ ಕೇಳ್ದೇಂತಾ ?"
'ಯಾಕೆ ? ಮದುವೆ ಅದೋರು ಅನುಭವಿಸ್ತಿರೋ ಸುಖ
ನೋಡಿದ್ದು ಸಾಲ್ದೇನು?"
ಆಕೆಯ ಮುಖ ಸ್ವಲ್ಪ ಬಾಡಿತು.
...ದೊಡ್ಡ ಗಂಡಾಂತರದಿಂದ ಪಾರಾಗಿದ್ದೆ. ಆ ಬಳಿಕ ಶಾರದೆ
ನನ್ನೊಡನೆ ಮಾನವಳಾಗಿ ಮಾತನಾಡಿದಳು. ಕಾಫಿ ಬಂತು--- ಕುಡಿದೆವು. ತಾಯಿ, ಮಗನನ್ನು ಮುದ್ದಾಡಿದಳು. ಆದರೆ ನಾಗ ರಾಜನಿಗೆ ಅಂಥ ಮುದ್ದಾಟದ ಅಭ್ಯಾಸವಿರಲಿಲ್ಲ. ಆತ ತಾಯಿಯಿಂದ ತಪ್ಪಿಸಿಕೊಂಡು ನನ್ನೆಡೆಗೆ ಬಂದ.
"ಮೇಷ್ಟ್ರು ಬರ್ಲಿಲ್ವಾ ರಾಜು?"
"ಬರ್ತಾರೆ ಮಾಮ, ಆರು ಘಂಟೆಗೆ."
ಶಾರದೆಯತ್ತ ತಿರುಗಿ ಹೇಳಿದೆ:
"ರಾಜನ್ನ ಇನ್ನು ಸ್ಕೂಲ್ಗೆ ಸೇರಿಸ್ಬೇಕು ಅತ್ತಿಗೆ."
"ಹೌದು, ಸೇರಿಸ್ಬೇಕು....."
ಮತ್ತೆ ಸ್ವಲ್ಪ ಹೊತ್ತಿನಲ್ಲೆ ಹೊರಬಿದ್ದು, ಹಾದಿಯುದ್ದಕ್ಕೂ
ನಡೆದುಹೋದೆ, ನೆನಪುಗಳು ಬೆಂಗಾವಲಿಗೆ ನಿಂತುವು.
ಆ ದಿನ ಶಾರದೆಯನ್ನು ನಾನು "ಅತ್ತಿಗೆ" ಎಂದು ಸಂಬೋಧಿ
ಸಿದ್ದೆ. ಅದು, ಆ ಹೆಸರಿನ ಢಾಲು ಹಿಡಿದು ಆ ಹೆಣ್ಣನ್ನು ದೂರ ವಿಡಲು ನಾನುಮಾಡಿದ ಸಿದ್ಧತೆ....ಆದರೆ ಆಕೆ ಮೇಲೇರಿ ಬರಲಿಲ್ಲ. ಆ 'ಅತ್ತಿಗೆ' ಪದದಿಂದ ಮಾತ್ರ, ಕೊಂಕುತನ ಹೊರಟು ಹೋಯಿತು...ಇನ್ನು ನಾನು ಆಕೆಯನ್ನು ಅತ್ತಿಗೆಯೆಂದೇ ಕರೆಯ ಬೇಕು.
ಹದಿನೈದು ವರ್ಷಗಳಿಗೆ ಹಿಂದೆಯೊಂದು ಜೀವವನ್ನು ನಾನು
"ಅತ್ತಿಗೆ" ಎಂದು ಕರೆದ್ದಿದ್ದೆ. ಆಕೆ ಶೀಲ. ಶೀಲ-ಅಮೀರರ ಆ ಬಾಳ್ವೆಯಲ್ಲಿ ಎಷ್ಟೊಂದು ಅನುನಯವಿತ್ತು--ಅನ್ಯೋನ್ಯ ಅನುರಾಗ ವಿತ್ತು! ಇಷ್ಟು ವರ್ಷಗಳಾದ ಮೇಲೆಯೂ ಅವರನ್ನು ಸ್ಮರಿಸಿ