ಪುಟ:Vimoochane.pdf/೩೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅ‌ಲ್ಲ ಚಂದ್ರು. ನಿನ್ನ ವಿಷಯ ಏನಪ್ಪ? ಶ್ರೀಕಂಠೂ

ಜತೇಲಿ ಏನಾದರೂ ಮಾಡ್ಕೊಂಡು ಇದೀಯೋ?"

ಹೂನಪ್ಪಾ."

ನಿಯೋಗ ಬಂದ ಆ ದಿನದಿಂದ ಈ ವರೆಗೆ ಆಗಾಗ್ಗೆ ನಾಣಿಯ

ಬಗ್ಗೆ ಶ್ರೀಕಂಠ ಮತ್ತು ನನ್ನ ನಡುವೆ ನಡೆದುದನ್ನೆಲ್ಲ ಹೇಳಿ ಬಿಡುವ ಮನಸ್ಸಾಯಿತು. ಬಾಲ್ಯದಲಿ ಒಬ್ಬರ ಮೇಲೊಬ್ಬರು ಚಾಡಿ ಹೇಳಿ, ಗುಟ್ಟು-ಯಾರಿಗೂ ಹೇಳ್ಭೇಡ,ಎನ್ನುತ್ತಿರಲಿಲ್ಲವೆ ಹಾಗೆ.... ಆದರೆ ನನ್ನ ಮನಸ್ಸನ್ನು ಯಾವುದೋ ತೆರೆ ಕವಿಯುತಿತತ್ತು.

ಆ ಮೇಲೆ ಆ ಮಾತು ಈ ಮಾತು; ಅವರ ವಿಷಯ, ಇವರ

ವಿಷಯ. ತರಗತಿಯಲ್ಲಿ,ಮಠ್ಠಾಳಾ ಎಂದು ಶಾಪಿಸುತ್ತ ಎಲ್ಲರ ಕಿವಿ ಹಿಂಡಿ ಕೊನೆಗೆ ಎಲ್ಲರ ಪ್ರಕೋಪಕ್ಕೆ ತುತ್ತಾಗಿದ್ದ ಕನ್ನದ ಪಂಡಿ ತರನ್ನು ನೆನೆಸಿಕೊಂಡೆವು. ಆ ಮೇಲೆ ಯವುದೋ ಹುಡುಗಿಗೆ ಪ್ರೇಮ ಪಾಠ ಹೇಳಿ ಕೊಟ್ಟ ಹೊಸಬ ಉಪಧ್ಯಾಯರೊಬ್ಬರ ವಿಷಯ.

ಕಮಲ ತಯಾರಿಸಿದ ಉಪಿಟ್ಟು ಮತ್ತು ಕಾಫಿ........

ನನ್ನ ನಾಲಿಗೆಯ ರುಚಿ ಕೆಟ್ಟಿತ್ತು. ಸಿಕ್ಕಿದ್ದನ್ನು ತಿಂದು, ಸಿಕ್ಕಿ ದ್ದನ್ನು ಕುಡಿದು, ನನ್ನ ನಾಲಿಗೆ ಬೇಸತ್ತು, ಯಾವುದೂ ಬೇಡ- ಎನ್ನುತಿತ್ತು. ಆದರೂ ನಾನು, ನಾಣಿ ಪ್ರೀತಿಯಿಂದ ಮುಂದಿಟ್ಟುದನ್ನು ತಿಂದೆ-ಕುಡಿದೆ.

ಏನಾದರು ಒಳ್ಳೆಯ ಮಾತನ್ನಾಡಬೇಕೆಂದು,ಇದ್ಕೂನೂ

ನಿಮ್ತಾಯಿ ಕೋಡ್ತಿದ್ದ ಉಪ್ಪಿಟ್ಟು ರುಚೀನೇ ಇದೆ ಕಣೋ ಎಂದೆ.

ನಾಣಿ ನಕ್ಕ.

ಕಮಲೂ ನನ್ನ ಪಾಲಿಗೆ ತಾಯಿನೂ ಹೌದು ಚಂದ್ರು........

ನಮ್ಮಿಬ್ಬರ ನಡುವೆ ಸುಖ ಎಂಬ ಪದಕ್ಕೆ ಬಂದಿರೋ ಅರ್ಥವೇ ಬೇರೆ. ಸಾಮಾನ್ಯವಾಗಿ ತುಂಬಿದ ಹೊಟ್ಟೆ, ಒಳ್ಳೆಯ ಬಟ್ಟೆ, ಅಚ್ಚುಕಟ್ಟಾದ ಮನೆ, ಉಳಿತಾಯದ ಹಣ-ಇದೆಲ್ಲಾ ಇದ್ದರೆ 'ಸುಖ'ಅನ್ತಾರೆ. ನಮಗೆ, ಹೃದಯ ತುಂಬಿದ್ದರಾಯ್ತು.ಅದೇ ಸುಖ.