ಪುಟ:Vimoochane.pdf/೩೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

"ಕಾರ್ಮಿಕ ಹಿತೈಷಿಗಳು-ಅಂತ ಬರೆದಾಯ್ತು."

"ಐದು ಘಂಟಿಗೆ ಬರಲಾ ಹಾಗಾದರೆ?"

"ಆರು ಘಂಟೆಗೆ ಬನ್ನಿ."

ಚೆಲುವಯ್ಯ ಮತ್ತೊಮ್ಮೆ ಬಾಗಿ ನಮಿಸಿ, ನನಗೂ ಒಂದು ನಮ

ಸ್ಕಾರ ಕೊಟ್ಟು ಹೊರಟ.

"ಹ್ಯಾಗಿದಾನೆ ಚೆಲುವಯ್ಯ? ಎಂಥೆಂಥವರ ಸಂಪಾಧ್ಸಿಟ್ಟಿ

ದೀನಿ ನೋಡು!"

ನಗುತ್ತ ಹೇಳಿದೆ:

"ಚೀಪ್ ಅಸೋಸಿಯೆಟ್ ಎಡಿಟರ್ !"

"ಬಲು ಚೀಪ್.... ಆದರೆ ಬಡ್ಡ್ಡೀಮಗ ಚೆನ್ನಾಗಿ ಬರೀತಾನೆ

ಕಣೋ. ಒಂದೊಂದು ಮಾತು ಹ್ಯಾಗಿರತ್ತೆ ಅಂತೀಯಾ?"

ನಿಜವಾಗಿಯೂ ಅವನ ಶೈಲಿ ಶಕ್ತಿಪೂರ್ಣವಾಗಿತ್ತು. ಆ ಕರ

ಪತ್ರದ ಶಿರೋನಾಮೆ ಗುಡುಗುತಿತ್ತು:

"ಮಾಸ್ಕೋ ಗೂಢಚಾರರ ಫಿತೂರಿ!"

ಆ ಮೇಲೆ ವಿವರಣೆ: ದೇಶವನ್ನು ಪರರಿಗೆ ಮಾರಲೆತ್ನಿಸುವ

ಪಂಚಮದಳದವರು-ಮಹಾ ಧೂರ್ತರು. ಮಾಲೀಕರನ್ನು ಪ್ರತಿಭಟಸು ವುದರ ಮೂಲಕ, ಉಂಡ ಮನೆಗೆ ಎರಡೆಣಿಸುವ ಪಾಪಿಗಳು........

ಇನ್ನೊಂದು ಕರಪತ್ರ ಬಂತು.

"ಎಚ್ಚರ! ಕಾಲರಾ ನಿಮ್ಮ ಮನೆಗೆ ಬಂದು ಬಾಗಿಲು

ತಟ್ಟುತ್ತಿದೆ. ಎಚ್ಚರ!"

ಆ ಬಳಿಕ ಕೂಲಿಕಾರ ಮುಖಂಡರಲ್ಲಿ ಮುಖ್ಯರಾದವರನ್ನು

ಕುರಿತು ವೈಯಕ್ತಿಕ ನಿಂದೆ.

ಒಂದು ಕರ ಪತ್ರ ನಾರಾಯಣನನ್ನು ಬಲಿ ತೆಗೆದುಕೊಂಡಿತ್ತು.

ಅದರಲ್ಲಿ ಅವನ ವಿಷಯವಾಗಿಯೂ ಅವನ ಹೆಂಡತಿ ವಿಷಯವಾಗಿಯೂ ಆವಾಚ್ಯ ಮಾತುಗಳನ್ನು ಬರೆದಿದ್ದರು.

ಅದನ್ನು ಶ್ರೀಕಂಠನಿಗೆ ತೊರಿಸುತ್ತಾ ಕೇಳಿದೆ:

"ಇದಕ್ಕೂ ನೀನೆ ಪಾಯಿಂಟ್ಸ್ ಕೊಟ್ಟಿಯೋ?"