ತಾಯಿಯ ಸ್ವರ ಕಠೋರವಾಗಿತ್ತು. ಆ ಬಳಿಕ ಹೊಡೆತಗಳು.
ಒಳಗಿನಿಂದ ಶ್ರೀಕಂಠನ ಧ್ವನಿ ಕೇಳಿಸಿತು.
"ಏನೋ ಅದು ಗಲಾಟೆ?"
ನಾನು ಸಮೀಪಹೋಗಿ ನಾಗರಾಜನನ್ನು ಕರೆದುಕೊಳ್ಳುತ್ತ
ಹೇಳಿದೆ.
"ಅತ್ತಿಗೆ, ಮಗೂ ಮನಸ್ನ ಯಾಕಮ್ಮ ನೋಯಿಸ್ತೀರ?"
ಅವಮಾನಗೊಂಡು ಶಾರದೆ ಸಿಡಿನುಡಿದಳು:
"ಸಾಕು ಸುಮ್ನಿರಿ. ನಿಮ್ಮ ಹಿತೋಪದೇಶ ಯಾರೂ ಕೇಳಿಲ್ಲ.
" ನಾಗರಾಜ "ಮಾಮಾ ಮಾಮಾ" ಎನ್ನುತ್ತ ನನ್ನ ಮಡಿಲಲ್ಲಿ
ಮುಖವಿಟ್ಟ. ಬೀಗಿಕೊಂಡಿದ್ದ ಆ ಮುಖದ ಸುಂದರ ಕಣ್ಣುಗಳಿಂದ ಕಂಬನಿ ತೊಟ್ಟಿಕ್ಕುತಿತ್ತು.
ಕಂಬನಿ ತೊಟ್ಟಿಕ್ಕುವ ಮುದ್ದು ಮುಖ...
ಎಲ್ಲ ಕಾರ್ಖಾನೆಗಳ ಒಡೆಯರೂ ಏಕ ಪ್ರಕಾರವಾದ ತಮ್ಮ
ನಿರ್ಧಾರವನ್ನು ಜಾಹೀರು ಮಾಡಿದರು. ಅದು ಕಾರ್ಮಿಕರಿಗೆ ಅವರು ಕೊಟ್ಟ ನೋಟೀಸು.
ಉದ್ರೇಕಗೊಂಡ ವಾತಾವರಣದಲ್ಲಿ ಕೂಲಿಗಾರರ ಬಹಿರಂಗ
ಸಭೆಗಳಾದವು. ಸಂಘದ ಕಾರ್ಯಸಮಿತಿ ಸಭೆಸೇರಿತು. ಕ್ರಿಯಾ ಸಮಿತಿಯೊಂದು ರಚಿತವಾಯಿತು. ಅದರ ಸದಸ್ಯರೇ ನಿಯೋಗವಾಗಿ ಮಾರ್ಪಟ್ಟು ಕಾರ್ಖಾನೆಗಳ ಒಡೆಯರನ್ನು ಕಾಣಬಯಸಿದರು.
ಮಾಲೀಕರು ಪ್ರತ್ಯಪ್ರತ್ಯೇಕವಾಗಿ ಉತ್ತರಕೊಟ್ಟರು.
"ನಮ್ಮ ವ್ಯವಹಾರವೆಲ್ಲ ನಮ್ಮ ಕಾರ್ಖಾನೆಯ ಕೆಲಸಗಾರ
ರೊಡನೆ. ನಿಮ್ಮ ಸಂಘವನ್ನು ನಾವು ಮಾನ್ಯ ಮಾಡೋದಿಲ್ಲ.
" ಹಿಂದೆ ಮೂರು ತಿಂಗಳ ಬೋನಸು ಕೊಡಲೊಪ್ಪಿ ಒಪ್ಪಂದಕ್ಕೆ
ಸಹಿ ಹಾಕಿದವರು, ಈಗ ಸಂಘದ ಮೇಲಿನ ಮಾನ್ಯತೆಯನ್ನು ಹಿಂತೆಗೆ ದಿದ್ದರು.
ಮಾನ್ಯತೆಯ ನಿರಾಕರಣೆಯಿಂದ ಪರಿಸ್ಥಿತಿ ವಿಕೋಪಕ್ಕೆ