ಹೋಯಿತು.ಆಂತಿಮ ತೀರ್ಮಾನವಾಗಬೇಕೆಂದು ಎಲ್ಲ ಮಿಲ್ಲುಗಳ ಕೆಲಸಗಾರರ ಸಭೆ ಜರಗಿಸಲು ಏರ್ಪಾಟಾಯಿತು.
ಮನೆಯಲ್ಲಿ ಶ್ರೀಕ೦ಠ ಸೂಕ್ಸ್ಶ್ಮವಾಗಿ ನನ್ನನ್ನೆ ನೋಡುತ್ತ
ಹೇಳಿದ:
"ಆ ದಿವಸ ನಿನ್ನ ವಿಚಾರವಾಗಿ ಐ.ಜಿ.ಪಿ. ಹೇಳಿದ್ದೆಲ್ಲಾ
ಸುಳ್ಳೇನೋ ಅ೦ತ ಅನುಮಾನವಾಗ್ತಿದೆ."
"ಏನು?"
"ಏನಾದರು ಸಾಹಸದ ಕೆಲಸ ಮಾಡೋದು ನಿನ್ನಿ೦ದ
ನಿಜವಾಗಿಯೂ ಸಾಧ್ಯವಾ?"
ನಾನು ನಗತೊಡಗಿದೆ.
"ಏನ್ಕ೦ಠಿ ? ನಾನೊಬ್ಬ ಹಾಲಿವುಡ್ ಗ್ಯಾ೦ಗ್ಸ್ಟ್ರರ್ ಅ೦ತ
ತಿಳಕೊ೦ಡಿದ್ದೀಯೇನು?
"ಹೇಳಲು ಒ೦ದು ಕ್ಷಣ ಆತ ಅನುಮಾನಿಸಿದ೦ತೆ ತೋರಿತು
.
"ಇವತ್ತು ಸಾಯ೦ಕಾಲ ರಾತ್ರಿಯೆಲ್ಲಾ ಅವರ ಸಭೆ ಜರಗುತ್ತೆ.
ಅದಾದ್ಮೇಲೆ ಮೂರು ನಾಲ್ಕು ಜನರು ಮನೆಗೆ ಹೋಗ್ಬಾರ್ದು-ಅಷ್ಟೆ."
"ಯಾರು ಯಾರು?"
"ಅವರು ಲೀಡರು ಮುನಿಸ್ವಾಮಪ್ಪ , ಡೊಡ್ಡ ಕೆಲಸ ಮಾಡ್ತಿ
ದೀನೀ೦ತ ಇವತ್ತು ಭಾಷಣ ಕುಟ್ಟೋಕೆ ಒಪ್ಕೊ೦ಡೀದ್ದಾನ೦ತೆ-ಆ ಬರೆಯೋವ್ನು- ಕೃಷ್ಣರಾಜ...ಆ ಮೇಲೆ ಒಬ್ಬಿಬ್ಬರು_"
ಆ ಮೇಲಿನ ಒಬ್ಬಿಬ್ಬರು: ನಾರಾಯಣನ ಹೆಸರು ಅವನ
ನಾಲಿಗೆಯ ತುದಿಯ ಮೇಲೆ ಇದ್ದಿರಬೇಕು.ಆದರೆ ಆತ ಹೇಳಲಿಲ್ಲ.
"ಏನ್ಮಾಡ್ಬೇಕೂ೦ತೀಯ ಇವರ್ನೆಲ್ಲ?"
"ಮುಗಿಸ್ಬಿಡೋದರಿ೦ದ ಹಿಡಿದು ಕೈಕಾಲು ಮುರಿದ್ದಾಕೋ
ವರಗೆ ಏನು ಬೇಕಾದರೂ !"
ಸಿಗರೇಟು ಹಚ್ಚಿ ಹೊಗೆಯ ಉಗುಳು ಹೊರಹಾಕುತ್ತಾ ಹೇಳಿದೆ.
" ಸರಿ..... ಅಷ್ಟು ಮಾಡ್ತೀನಿ."!
ಆ ಸ್ವರ ನನ್ನದು ಹೌದೋ ಅಲ್ಲವೋ ಎನ್ನುವ ಹಾಗೆ ವಿರೂಪ