ವಯ್ಯನನ್ನು ಕಂಡಿದ್ದ ನನಗೆ, ಇವರ ಕರಪತ್ರ ಬರೆಯುವ ಕೃಷ್ಣ ರಾಜ ರನ್ನು ಕಂಡರಾದೀತೆಂದು ತೋರಿತು.
"ಯಾವತ್ತಾದರೂ ಆವಶ್ಯವಾಗಿ ಬಂದು ಭೇಟಿಯಾಗ್ತೀನಿ."
"ಯಾವತ್ತಾದರೂ ಅಂತ ಯಾಕೆ? ನಾಳೆ ಸಾಯಂಕಾಲವೇ ಹೇಳಿ ಕಳಿಸಿದ್ರು."
"ಆಗಲಿ ನಾಣಿ ."
"ಬರ್ತೀಯೇನು ಹಾಗಾದರೆ?"
"ಹೂಂ ನಾಣಿ,ನಿನ್ನ ಆರೋಗ್ಯ ನೋಡ್ಕೊ."
ಆದರೆ ನಾನು ಮರುದಿನ ಬರಲಿಲ್ಲ. ಬರುವುದಾಕ್ಕಾಗಲಿಲ್ಲ.
ಅದಕ್ಕೆ ಕಾರಣವಿತ್ತು.
ರಾತ್ರೆ ನನಗೆ ಸಿಗದೇ ಇದ್ದ ಶ್ರೀಕಂಠ, ಬೆಳಗ್ಗೆ ನಮ್ಮಲ್ಲಿಗೆ ಬಂದ.ಬಂದವನೇ ನಗುತ್ತ ಹೇಳಿದ.
"ಐ.ಜಿ.ಸಿ.-ಹೊಸಬಾಂತಿಟ್ಕೊ-ಫೋನ್ ಮಾಡಿದ್ರು."
"ನಿನ್ನೆಯೆ?"
"ಹೂಂ, ನಿನ್ನೆ ರಾತ್ರೇನೆ. ನಿನ್ನ ವಿಷಯಾನೆ."
"ನನ್ನ ವಿಷಯ!"
"ನಾಣಿ ಮನೆಗೆ ಹೋಗಿದಾನಲ್ಲ ಚಂದ್ರಶೇಖರ್-ಏನು ವಿಷಯ? ಅಂತ ನಿಚಾರಿಸಿದ್ರು."
"ಓ!"
"ಶ್ರೀಕಂಠನಿಗೆ ತಿಳಿದಿತ್ತು ಹಾಗಾದರೆ.ನನ್ನ ಚಲನವಲನ ಗಳನ್ನ ಅವನು ನಿರೀಕ್ಷಿಸಿದ್ದ.
"ಅವರಿಗೆ ಹ್ಯಾಗಂತೆ ಗೊತ್ತಾದ್ರು?"
"ನೀನೊಳ್ಳೆ ಭೂಪತಿ.....ಕೂಲಿಕಾರ ಮುಖಂಡನ ಮನೇ ಮುಂದೆ ಸ್ಪೆಷಲ್ ಬ್ರಾಂಚಿನವರು ಇಲ್ದೇ ಇರ್ತಾರೇನಯ್ಯ?ನಿನ್ನ ಅಲ್ಲಿ ನೋಡಿದ್ರು-ರಿಪೋರ್ಟ್ ಮಾಡಿದ್ರು ಅಷ್ಟೆ."