ಆದರೆ ಇಲ್ಲೊಂದು ವ್ಯತ್ಯಾಸವಿತ್ತಲ್ಲವೇ? ಶೀಲ-ಸಾವಿತ್ರಿ ಯರು ಬೇರೆ, ಕಮಲಾ ಬೇರೆ. ಕಮಲೆಯ ಹೃದಯದಲ್ಲಿ ದುಗುಡ ತುಂಬಿದ್ದರೂ ಮುಖದ ಮೇಲೆ ಅದು ಕಾಣಿಸುತ್ತಿರಲ್ಲಿಲ. ಸಹಸ್ರ ಜನರ ಸಹಾನುಭೂತಿಯ ಆಸರೆಯಲ್ಲಿ ಆಕೆ ಸಂಕಷ್ಟಗಳನ್ನು ದಿಟ್ಟತನ ದಿಂದ ಇದಿರಿಸುತ್ತಿದ್ದಳು.
ಸಹಸ್ರ ಜನರ ಸಹಾನುಭೂತಿ ......
ಆ ಸಹಾನುಭೂತಿ ದಿನ ಕಳೆದಂತೆ ಕರಗಿ ಮಾಯವಾದುದನ್ನು ಕಂಡೆ.
ಬಂಧನಕ್ಕೊಳಗಾದವರನ್ನು ಸರಕಾರ ಹೊರಬಿಡಲಿಲ್ಲ. ಮುಷ್ಕ್ರ ರವೇನೋ ನಡೆಯಿತು . ನಡೆದು ಮಾಲೀಕರಿಗೆಲ್ಲ್ಲ ಸಂತೋಷವನ್ನೇ ಉಂಟುಮಾಡಿತು. ಸಭೆ ಮೆರವಣೆಗೆಗಳಿರಲಿಲ್ಲ. ಯೂನಿಯನ್ನಿನ ಕರಪತ್ರಗಳಿರಲಿಲ್ಲ. ಸ್ಫೂರ್ತಿ ಹುಟ್ಟಿಸುವ ಹಾಡುಗಳಿರಲಿಲ್ಲ.....
ಶ್ರೀಕಂಠ ವಿಜಯದ ನಗು ನಗುತ್ತ ಹೇಳಿದ.
" ಮುಷ್ಕರ ನಿಧಿ ಕೂಡಿಸ್ತಾ ಇದಾರಂತೆ ಕಣೋ...ನಾವೂ ಅವರ ಡಬ್ಬಕ್ಕೆ ನಾಲ್ಕು ಕಾಸು ಹಾಕೋಣವೇನು ?"
" ಸತ್ತ ಹೆಣಾನ ಕಂಡು ನಗೋ ಚೈತನ್ಯ ನಿನಗಿದೆ ಕಂಠಿ."
" ಅಳೋದು ಮಾಮೂಲು ಕಣಪ್ಪ. ನಗೋದು ವೈಶಿಷ್ಟ್ಯಾ." ಅವನ ಆ ಮಾತುಗಳು ಬೇಸರ ಬಾರಿಸುತಿದ್ದುವು.
"ನೀನು ರಾಜಕೀಯದಲ್ಲಿ ಒಂದು ಕೈ ನೋಡ್ಬೇಕಾಗಿತ್ತು ಕಂಠಿ."
"ಅದೊಂದು ಉಳಿದಿದೆ ಎನ್ನು. ನನಗ್ಯಾತಕ್ಕಯ್ಯಾ ರಾಜ ಕೀಯ ? ರಾಜಕೀಯದವರು ಮನೆಬಾಗಿಲಿಗೀ ಬರ್ತರೆ . ಬೇಕಾದವಾರ್ನ ಕೊಂಡ್ಕೋಬಹುದು. ತಾತಾ-ಬಿರ್ಲಾರ್ನ ನೋಡು. ಅವರೇನು ಸ್ವತಃ ಎಲೆಕ್ಷನ್ನಿಗೆ ನಿಂತ್ಕೋತಾರೇನು?"
ಶ್ರೀಕಂಠ,ತಾತಾ-ಬಿರ್ಲರ ಮಾತನ್ನಾಡುವುದು, ಅವರ ಮೇಲ್ಸಂಗ್ತಿಯನ್ನು ನೋಡುವುದು, ಸ್ವಾಭಾವಿಕವಾಗಿತ್ತು.
ಏನೋ ಯೋಚಿಸುತಿದ್ದ ಶ್ರೀಕಂಠ, ವಕ್ರವಾಗಿ ನಕ್ಕು ಹೇಳಿದ: