ಸತ್ವಹೀನರಾಗಿ ಸಪ್ಪೆಯಾಗಿದ್ದ ಬಡವರು.....
ಅದಾಗಿ ಸ್ವಲ್ಪ ದಿನಗಳಮೇಲೆ ಮುನಿಸ್ವಾಮಪ್ಪ,ನಾಣಿ ಮತ್ತಿತ ರರ ಬಿಡುಗಡೆಯಾಯಿತು.
....ಮತ್ತೆ ಶಂಕೆಗಳು ಮೂಡಿದುವು......ಪ್ರಾಯಶಃ ಪ್ರಪಂಚ ಹೀಗೆಯೇ ಇರಬೇಕೇನೊ.ಪ್ರಬಲವಾದ ಒಂದೇ ಶಕ್ತಿಗೆ ಮಣಿದು ಎಲ್ಲರೂ ಬಾಳ ಬೇಕೇನೋ. ಅದನ್ನು ತಿಳಿದೂ ತಿಳಿದೂ ಆ ಜನರು ಹೋರಾಡುವುದರಲ್ಲಿ ಅರ್ಥವೇನಿತ್ತು ? ನಾರಾಯಣನಿಗೆ ಅಷ್ಟೂ ತಿಳಿಯದೆ?
ಆ ಒಂದು ದಿನ ಹೋಟೆಲಿನಲ್ಲಿ ಯುವಕನೊಬ್ಬ "ಚೇತನಾ" ಎಂಬ ಪತ್ರಿಕೆಯನ್ನೋದುತಿದ್ದ. ಬಣ್ಣಬಣ್ಣದ ಹೊದಿಕೆಯಿತ್ತು ಹೊರಗೆ. ಬಲು ಆಸಕ್ತಿಯಿಂದ ಆ ಯುವಕ ಯಾವುದೋ ಎರಡು ಪುಟಗಳನ್ನು ಒಂದಕ್ಷರವೂ ಬಿಡದಂತೆ ಓದುತಿದ್ದ.
ಸಮೀಪ ಕುಳಿತಿದ್ದ ನಾನು, "ಯಾವ ಲೇಖನ ಓದ್ತಾ ಇದೀರಾ?" ಎಂದು ಕೇಳಿದೆ
"ಕತೆ ಸಾರ್, ಕೃಷ್ಣರಾಜರ ಕತೆ ಬಂದಿದೆ!' 'ಸೋಲಿನ ಬಳಿಕ' ಅಂತ. ಚೆನ್ನಾಗಿದೆ ಸಾರ್!"
ಕೃಷ್ಣರಾಜರ ಕತೆ. ಓದಬೇಕೆನ್ನಿಸಿತು. ಆದರೆ ಆ ಯುವಕ ಪತ್ರಿಕೆಯೊಡನೆ ಹೊರಟು ಹೋದ. ಅದು ಆತನ ಸ್ವಂತದ ಪತ್ರಿಕೆ ಯಾಗಿತ್ತು.
ನಾನು ಬೀದಿಯುದ್ದಕ್ಕೂ ಸ್ವಲ್ಪ ದೂರ ನಡೆದು ಹೋದೆ. ಅಲ್ಲೊಂದು ಪತ್ರಿಕೆಯಂಗಡಿ ಇತ್ತು, ಶೇಷಗಿರಿಯದಲ್ಲ--- ಬೇರೆ ಯಾರದೋ...... ಚೌಕದಲ್ಲಿ ಹುಡುಗರು ನಿಂತಿದ್ದರು--ಪತ್ರಿಕೆ ಮಾರುವ ಹುಡುಗರು...ಊರ ಚೌಕಗಳು..."ಪೇಪರ್ ಬೇಕೇ ಸಾರ್ ಪೇಪರ್ !"
ಮತ್ತೆ ಬಾಲ್ಯದ ನೆನಪುಗಳು.......
ನಾನು ಆ ಅಂಗಡಿಯಿಂದ "ಚೇತನಾ" ಪತ್ರಿಕೆಯ ಒಂದು