೩೩೪
ವಿಮೋಚನೆ
ಅವಮಾನಿತನಾದ ಶ್ರೀಕಂಠ,ಅವಳ ಕೊಠಡಿಗೆ ನುಗ್ಗಿದ.
"ಕರೆದಿದ್ದು ಕೇಳಿಸ್ಲಿಲ್ಲ ನಿಂಗೆ."
ನಿಲುವುಗನ್ನಡಿಯ ಮುಂದೆ ಕುಳಿತು, ಆಭರಣಗಳನ್ನು ಕಳ
ಚುತ್ತಲಿದ್ದ ಅವಳು ಹೇಳಿದಳು.
"ಕೆಲಸದಾಕೆ ಸಾಯಂಕಾಲ್ವೇ ಹೊರಟೋಗಿದ್ದಾಳೆ."
ಆ ಉತ್ತರ ಕೇಳಿ ಶ್ರೀಕಂಠನ ಮೈ ಉರಿಯಿತು.ಆತ ಕುಪಿತ
ನಾಗಿ ಶಪಿಸಿದ.
ಅವಳ ಬಳಿ ಸಾರುತ್ತಾ ಶ್ರೀಕಂಠ ಗುಡುಗುವ ಧ್ವನಿಯಲ್ಲಿ
ಕೇಳಿದ:
"ಯಾವ ನಾಯಿ ಜತೇಲಿದ್ದೆ ಸಾಯಂಕಾಲ?"
ಆಕೆ ಜಿಗಿದೆದ್ದು ಉತ್ತರಕೊಟ್ಟಳು-.-ಶ್ರೀಕಂಠನ ಕೆನ್ನೆಯ
ಮೇಲೆ ಬಲವಾದ ಏಟು.ಆತ ಅವಳನ್ನು ಮಾತನಾಡಗೊಡಲಿಲ್ಲ.
ಅವನ ಕೈಗಳೆರಡೂ ಆಕೆಯ ಕತ್ತನ್ನು ಹಿಸುಕಿದ್ದುವು......
ಅವನಿಗೆ ಮೈಮೇಲೆ ಎಚ್ಚರವಿರಲಿಲ್ಲ.ಎಷ್ಟೋ ದಿನಗಳಿಂದ
ತಡೆಹಿಡಿದಿದ್ದ ಆಣೆಕಟ್ಟು ಒಮ್ಮೆಲೆ ಕಡಿದು ಹೋಯಿತೇನೊ.....ಆ
ಕೈಗಳು ಮತ್ತೂ ಮತ್ತೂ ಹಿಸುಕಿದುವು....ಮೊದಲು ಪ್ರತಿಭಟಿಸಿದ ಆ
ಹೆಣ್ಣು ಬರ ಬರುತ್ತ ನಿಶ್ಚೇಷ್ಟಿತವಾಯಿತು.ಶಾರದಾ ನೆಲದ ಮೇಲು
ರುಳಿದಳು.ಆದರೆ ಶ್ರೀಕಂಠ ಕೈಗಳ ಹಿಡಿತವನ್ನು ಸಡಿಲಿಸಿರಲಿಲ್ಲ.
ಹಿಂದೆಯೊಂದು ಕಾಲದಲ್ಲಿ ಅವನ ಕೈಹಿಡಿದಿದ್ದ ಹೆಂಗಸು-ಹಾಗೆ ಕೈ
ಹಿಡಿದು ಆ ಮಹಡಿಯ ಎತ್ತರಕ್ಕೆ ಅವನನ್ನು ಕರೆದು ತಂದಿದ್ದ ಹೆಣ್ಣು.
ಕೊನೆಗೆ ಬಳಲಿದ ಶ್ರೀಕಂಠ ಅವಳನ್ನು ನೆಲದಮೇಲಿನ ರತ್ನ
ಕಂಬಳಿಯ ಮೇಲೆಯೇ ಬಿಟ್ಟು,ಅಲ್ಲೇ ಒರಗು ಕುರ್ಚಿಯ ಮೇಲೆ
ಕುಳಿತ.......ಆಕೆ ಎಚ್ಚರಗೊಂಡು ಏಳಬಹುದು,ಎದ್ದಾಗ ಅವಳ
ಮುಖದಮೇಲೆ ಥೂ ಎಂದು ಉಗುಳಿ ಕಾಲಿನಿಂದ ಒದೆಯಬೇಕು,-
ಇದೀಗ ಆತನಿಗಿದ್ದ ಯೋಚನೆ.ಆಕೆಯನ್ನು ನೋಡುತ್ತ ನೋಡುತ್ತ
ಅವನು ಅಲ್ಲಿ ಕುಳಿತ.ಅವಳು ಏಳಲೇ ಇಲ್ಲ.
"ನಟನೆ ಸಾಕು.ಸಿನಿಮಾ ನಟನೆ.,ಏಳು!"