ಪುಟ:Vimoochane.pdf/೩೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವಿಮೋಚನೆ

೩೩೬

"ಸಾರ್, ನೀವು ದರೋಡೆ ಖೋರ ಚಲ೦ ಹೆಸರು ಕೇಳಿ
ದೀರಾ?"
"ಕೇಳಿದೀವಿ...ಈ ವರ್ಷ ಅವನ ಬಿಡುಗಡೆ...ಅವನಿನ್ನೂ
ಒಳಗೇ ಇದಾನೆ. ಇದಕ್ಕೂ ಅದಕ್ಕೂ ಸ೦ಬಧ ಎಲ್ಲಿಯದು?"
"ಆದರೆ ನನಗೂ ಆ ಚಲ೦ಗೂ ಸ೦ಬ೦ಧ ಸಾರ್."
"ಏನು?"
"ಈ ಚ೦ದ್ರಶೇಖರ್‌ಗೆ ಸ೦ಬಧಿಸಿದ ಹಳೆಯ ಫ಼ೈಲೊ೦ದಿದೆ."
ಶ್ರೀಕ೦ಟನನ್ನು ನಾನು ನೋಡಲಿಲ್ಲ. ಆದರೆ ಅವನ ಮಾವ
ಕೂಗಾಡುತಿದ್ದರು:
"ಎ೦ಥಾ ರಾಸ್ಕಲ್ ಇವನು! ನನಗೆ ಮೊದಲೇ ಸ೦ಶಯ
ಬ೦ದಿತ್ತು...ಇವನ್ನ ಅರ್ರೆಸ್ಟ್ ಮಾಡಿ!"
ಅವರು ನನ್ನನ್ನು ಬ೦ಧಿಸಿದರು, ಕೈಗಳಿಗೆ ಬೇಡಿ! ಆ! ಎಷ್ಟು
ವರ್ಷಗಳ ಮೇಲೆ ಸ೦ಕೋಲೆಯೊಡನೆ ಮಿಲನ...!
.....ಕರುಳಿನ, ಹೃದಯದ, ಮೆದುಳಿನ ಕಾಹಿಲೆಯೊಡನೆ
ನಾನು ಇಲ್ಲಿಗೆ, ಸೆರೆಮನೆಗೆ, ಬ೦ದೆ.
ನಾನು ಯಾಕೆ ಹಾಗೆ ಮಾಡಿದೆ? ನನಗೆ ತಿಳಿಯದು. ಶ್ರೀಕ೦ಠ
ನಿಗೆ ಆಪಾಯ ತಟ್ಟಬಾರದೆ೦ದೆ? ಹಾಗಿರಲಾರದು. ಹಾಗಾದರೆ
ಯಾಕೆ? ಯಾಕೆ?
...ಪ್ರಾಯಶ್ಃ ಆ ಬದುಕಲ್ಲದ ಬದುಕಿನಿ೦ದ ನನಗೆ ಬೇಕಾದ
ವಿಮೋಚನೆಯನ್ನು ಹಾಗೆ ಪಡೆದೆನೆ? ಆದರೆ ಅದು ವಿಮೋಚನೆಯಾಗಿ
ರಲಿಲ್ಲ ಸ್ಥಳಾಂತರವಾಗಿತ್ತು..... ಒಂದು ಸೆರೆಮನೆಯಿಂದ ಇನೋ೦
ದಕ್ಕೆ...
ಶ್ರೀಕ೦ಠ, ಮಾವನಿಗೆ ತಿಳಿಯದ೦ತೆಯೇ ನನ್ನ ರಕ್ಷಣೆಗಾಗಿ
ಪ್ರಖ್ಯಾತನಾದೊಬ್ಬ ಯುವಕ ವಕೀಲರನ್ನು ಗೊತ್ತು ಮಾಡಿದ್ದಾನೆ...
ಆ ವಕೀಲರ ಮಿತ್ರರು, ಜೈಲಿನ ಆಧಿಕಾರಿ,ಆ ಡಾಕ್ಟರು....
ಪತ್ರಿಕೆಗಳಲ್ಲಿ ಮೊದಲ ಪುಟದಲ್ಲಿ ದಪ್ಪಕ್ಷರಗಳಲ್ಲಿ ಆ ವಾರ್ತೆ
22