...ಮಂಗಳವಾರ
ಬಲು ತಡವಾಗಿ ಎದ್ದು, ಈ ದಿನ ಎಲ್ಲರು ಕೌತುಕಕ್ಕೆ ಕಾರಣ ನಾಗಿದ್ದೀನೆ.....
ಕರಿಯ ಕೇಳಿದ "ಹೆಂಗಿದೀರ ರಾಯರೆ?"
ರಾಯರು 'ಹೆಂಗಿದ್ದರು'!
ಬಲ ಮಗ್ಗುಲಿನ ಯುವಕ ಕೇಳುತಿದ್ದಾನೆ:
"ನಿಮ್ಮ ವಿಚಾರಣೆ ಯಾವತ್ತು ಸಾರ್?"
ಹೌದು, ಯಾವತ್ತು ನನ್ನ ವಿಚಾರಣೆ? ಯಾವತ್ತು?
ಕಳೆದ ಮಂಗಳವಾರದಿಂದ ಈ ಮಂಗಳವಾರಕ್ಕೆ. ಇದೊಂದು
ವಾರದೊಳಗೆ ಇಷ್ಟೊಂದು ಪುಟಗಳನ್ನು ನಾನು ಬರೆದೆನೆ? ನನಗೆ
ಆಶ್ಚರ್ಯವಾಗುತ್ತಿದೆ. ನಿಜವಾಗಿಯೂ ನಾನೇ ಇಷ್ಟನ್ನೂ ಬರೆದೆನೆ?
ಇನ್ನು ನಾನು ಬರೆಯಬೇಕಾಗಿರುವುದು ಬಲುಸ್ವಲ್ಪ... ಇನ್ನು
ಉಳಿದಿರುವುದು ಕೊನೆಯದಾಗಿ ವಿದಾಯ ಹೇಳುವ ಕೆಲಸ.
....ಈ ದಿನ ಬೆಳಕಾಗಿ, ಹಗಲು ಕಳೆದು, ಸಂಜೆ ಬಂದಿದೆ-
ಎಷ್ಟೊಂದು ಬೇಗನೆ! ನನ್ನ ಬಾಳ ಸಂಜೆ ಬಂದೊದಗಿರುವುದು
ಎಷ್ಟೊಂದು ಬೇಗನೆ!
ಈ ದಿನ ನಾನು ಉಪವಾಸವಿದ್ದೇನೆ... ವ್ರತನಿಷ್ಠೆಯಿಂದಲ್ಲ!
ನನ್ನ ಅಂಗಾಂಗಗಳಿಗೆಲ್ಲ ವಿರಾತುಕೊಡುವ ಬಯಕೆಯಿಂದ ಹಾಗೆ
ಮಾಡುತ್ತಿದ್ದೇನೆ.
ಇನ್ನು ಸಂಜೆಯ ಸೂರ್ಯ ಮುಳುಗುತ್ತಾನೆ - ಈ ಮಂಗಳ
ವಾರವೂ. ಚಂದ್ರೋದಯವಾಗಬೇಕಾದರೆ ನಡು ರಾತ್ರೆ ಕಳೆಯ
ಬೇಕು. ಈ ಕೊಠಡಿಯ ಹಿಂಭಾಗದಲ್ಲಿ ಎತ್ತರದಲ್ಲಿರುವ ಕಿಟಕಿಯಿಂದ
೨೨೯