ನಾನು ಕ್ಷಮೆ ಕೇಳಬೇಕಾದ ಅನಿವಾರ್ಯತೆಯಿಂದ ನನಗೆ ದುಃಖವಾಗಲಿಲ್ಲ. ಆದರೆ ತಂದೆ ಅಂತಹ ಹಿತೋಪದೇಶ ಮಾಡ ಬೇಕಾತಯ್ತಲ್ಲಾ ಎಂದು ದುಃಖನೆನಿಸಿತು.
ಮರುದಿನ ಬೆಳಿಗ್ಗೆ ತಂದೆ ಕೆಲಸಕ್ಕೆ ಹೋಗಲಿಲ್ಲ. ನನ್ನೊಡನೆ ಶಾಲೆಗೆ ಬಂದ. ಉಪಾಧ್ಯಾಯರಿನ್ನೂ ಬಂದಿರಲಿಲ್ಲ. ಹುಡುಗರ ದೃಷ್ಟಿ ತಪ್ಪಿಸಿ ನಾವಿಬ್ಬರೂ ದೂರ ನಿಂತೆವು. ಅಂತೂ ಕೊನೆಗೊಮ್ಮೆ ಉಪಾಧ್ಯಾಯರು ಬಂದರು. ತಂದೆ ಹಾದಿಯಲ್ಲಿ ಅವರೆದುರು ನಿನೀತ ನಾಗಿ ಬಾಗಿ ನಮಸ್ಕರಿಸಿದ.
" ಏನು ?" ಎಂದರು ಉಪಾಧ್ಯಾಯರು, ದರ್ಪಯುಕ್ತವಾಣಿ ಯಿಂದ.
" ನಮ್ಚಂದ್ರು-"
" ಅವನು ಶುದ್ಧ ಪೋಲಿ. ಚೆನ್ನಾಗಿ ಓದ್ಕೋತಾನೆ ಅಂತಿದ್ರೆ ನನೈಲಸಕ್ಕೇ ಸಂಚ್ಚಾರ ತರೋಹಾಗೆ ಮಾಡ್ತನೆ. ಯಾರು ಎತ್ತ ಅಂತ ನೋಡ್ದೆ ಆಡ್ತನೆ. ನಾಯಿನ ತಂಗೊಂಡೋಗಿ ಸಿಂಹಾಸನದ ಮೇಲೆ....."
ಅವರು ಅದೇನೇನೊ ಹೇಳುತ್ತಿದ್ದರು. ನಾಯಿ ಮತ್ತು ಸಿಂಹಾ ಸನ. ಮಹಾರಾಜರ ಸಿಂಹಸನವನ್ನು ನಾನು ನೋಡಿರಲಿಲ್ಲ. ಆದರೆ ನಾಯಿಯನ್ನು ಕಂಡಿದ್ದೆ- ಬೀದಿಯ ಬಡಕಲು ನಾಯಿಯನ್ನು. ನಾನು ಮತ್ತು ನಾಯಿ.
ನಮ್ಮಪ್ಪ ಹೇಳುತ್ತಿದ್ದರು.
" ಇದೊಂಸಾರೆ ಕ್ಷಮಿಸಿ ಮೇಷ್ಟ್ರೆ,ನಮ್ಚಂದ್ರು ಇನ್ಯಾವತ್ತೂ ಹೀಗ್ಮಾಡೋಕಿಲ್ಲ."
ದೊಡ್ಡ ಮನುಷ್ಯನಾಗುವುದು ಎಷ್ಟು ಕಷ್ಟದ ಕೆಲಸ! ಇನ್ನು ಯಾವತ್ತೂ ನಾನು ಏನನ್ನೂ ಮಾಡಬರದು. ದುಂಡ ದುಂಡನೆಯ ಕೆಂಪು ಕೆಂಪನೆಯ ನಯ ನಾಜುಕಿನ ಆ ಹುಡುಗರು ನನಗೆ ಅವಮಾನ ಮಾಡಿದರೆ, ನಾನು ಏನನ್ನೂ ಮಾಡಬಾರದು.
ನಮ್ಮ ಉಪಾಧ್ಯಾಯರ ಸ್ವರ ಕೇಳಿಸಿತು.