ಪುಟ:Vimoochane.pdf/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

"ಸಂಜೆ ಹೊತ್ಗೆ ಬಾ.ಮಾತೋಡೋಣ."

"ಇಲ್ಗೇಬರ್ಲಾ ಸ್ವಾಮಿ?"

"ನಮ್ಮನೆ ಗೊತ್ತೇನು ನಿಂಗೆ?"

"ಇಲ್ಲ ಸ್ವಾಮಿ."

"ಹೂಂ ಸರಿ,ಇಲ್ಗೇ ಬಾ."

ಮತ್ತೆ ನಾವು ಸ೦ಜೆ ಅಲ್ಲಿಗೇ ಹೋದೆವು,ಮನೆಗೆ ಹೊರಟಿದ್ದ ಹುಡುಗ ಹುಡುಗಿಯರೆಲ್ಲಾ ನಮ್ಮನ್ನೇ ನೊಡುತ್ತ ಹೋದರು. ನಾವು ಆಷ್ಟು ಅಲ್ವರಾಗಬೇಕಾಗಿ ಬಂದ ಆ ದುರವಸ್ಥೆಗೆ ಕಾರಣನಾದ ನನ್ನ ಸರಮ ಸ್ನೀಹಿತನನ್ನು ಹುಡುಕಿದೆ. ಆತಾಆಲ್ಲಿರಲಿಲ್ಲ. ಬಂದೇ ಇರಲಿಲ್ಲವೇನೂ. ಒಮ್ಮೆಲೆ ನನಗೆ ಸತ್ಯಾಂಶ ಹೊಳಿದು ಸಂತೋಷ ವಾಯಿತು: ನನ್ನ ಏಟು ಬಲವಾಗಿ ಬಿದ್ದು ಈಗ ಆ ಪೈಲ್ವಾನ ವಿಶ್ರಾಂತಿ ಪಡೆಯುತ್ತಿರಬಹುದು!

ಉಪಾಧ್ಯಾಯರು, ಅವರ ಹಿಂದೆ ನಮ್ಮ ತಂದೆ, ಅವರ ಹಿಂದೆ ನಾನು-ಹೀಗೆ ಮೆರವಣಿಗೆ ಹೊರಟೆವು.

ಉಪಾಧ್ಯಾಯರ ರುಮಾಲು ಅವರ ಹಿರಿತನವನ್ನು ಎತ್ತಿ ತೋರಿಸುತ್ತಿತ್ತು. ನಗರದ ಒಂದು ಮೂಲೆಯಲ್ಲಿ ಒಬ್ಬರೇ ಉಪಾಧ್ಯಾಯರಿದ್ದ ಸಣ್ಣ ಶಾಲೆ ನಿಜ. ಆದರೇನಂತೆ? ಅವರು ಉಪಾಧ್ಯಾಯರು. ಅವನ ಕೈಯಯಲ್ಲಿ ಛತ್ರಿಯಿತ್ತು. ಹರಿದುಹೋಗಿದ್ದ ಆದರ ಕರಿಯ ಬಟ್ಟೆಗೆ ಬಿಳಿಯ ಹೊದಿಕೆ ಹೊದಿಸಿದ್ದರು. ಮಳೆಯೋ ಬಿಸಿಲೋ ಆ ಛತ್ರಿ ಅವರ ಜೊತೆಗಿರಬೇಕು. ಬಡಕಲಗಿದ್ದ್ ಅವರ ನೀಳವಾದ ಕಲುಗಲಲ್ಲಿ ಚರಚರನೆ ಸದ್ದುಮಡುವ ಚಪ್ಪಲಿಗಳಿದ್ದವು. ಆ ಪಂಚೆ ಮತ್ತು ಕೋತಟು. ಅದರೊಳಗೆ ಷರಟು ಇತ್ತೋ ಇಲ್ಲವೊ ನನಗೆ ತಿಳಿಯದು, ಇದ್ದಿರಬೇಕು. ಬರಿಯ ಕೋಟನ್ನು ಯಾರದರೂ ತೊಡುವುದುಂಟೆ? ಅಂತೂ ಆಗ ನನಗೆ ಕೋಟು ಷರಟುಗಳ ತಾರ ತಮ್ಯದ ಪರಿಜ್ನ್ಜಾನವಿರಲಿಲ್ಲ.

ಅವರ ಹಿಂದೆ ನಮ್ಮಪ್ಪ, ಕರಿದಾಗಿದ್ದ ಜುಬ್ಬ-ಅಡ್ಡಪಂಚೆಗಳನ್ನು ಮರೆಸಿ ಮೈ ಬಣ್ಣವೇ ಎದು ಕಾಣಿಸುತ್ತಿತ್ತು. ಹಗಲೆಲ್ಲಾ ದುಡಿದು