ಪುಟ:Vimoochane.pdf/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಹೀಗಿದ್ದರೂ ತಂದೆಯ ಆ ಕಣ್ಣುಗಳು ನನ್ನನ್ನು ಗುರುತಿಸಿದುವು.

ಅಧಿಕಾರಿ, "ಏನು? ಏನೀಗ?"ಎಂದ.

ಜಗಲಿಯ ಮೇಲೆ ತುಕಡಿಸುತ್ತಿದ್ದ ಪೋಲೀಸಿನವನು ಎದ್ದು ಬಂದು, "ನಡಿ, ಹೊರಕ್ಕೆ ನಡಿ!" ಎಂದ.

ತಂದೆ ಹೊರಕ್ಕೆ ನಡೆಯಲಿಲ್ಲ.ಆತ ಅಧಿಕಾರಿಯನ್ನೇ ದಿಟ್ಟಿಸಿ ನೋಡಿದ.ಆ ನೋಟದಲ್ಲಿ ದೈನ್ಯವಿತ್ತೋ ಧ್ವೀಷವಿತ್ತೋ ನನಗೆ ತಿಳಿಯದು.ಆ ಸ್ವರ ಮಾತ್ರ ಏಕರೂಪವಾಗಿ ಹೋರಬೀಳುತ್ತಿತ್ತು.

"ಸ್ವಾಮಿ, ನನ್ನ ಹುಡುಗ ಚ್ಂದ್ರಶೇಖರ........ಸ್ವಾಮಿ........ತಾವು-"

ಅಧಿಕಾರಿ ಸಿಟ್ಟಾಗಿ ಕೂಗಾಡಿದ.

"ಹೊರಟುಹೋಗು.ನಿನ್ನ ಮಗನ್ನ ಇಲ್ಲಿ ಯಾರೂ ತಿಂತಾಯಿಲ್ಲ. ತೆಪ್ಪಗೆ ಹೊರಟುಹೋಗು."

ಆದರು ತಂದೆ ಅಲ್ಲೇ ನಿಂತ.

"ಸ್ವಾಮಿ,ನಾನು ಜಾಮೀನು ಕೊಡ್ತೀನಿ. ಹುಡುಗನ್ನ ಬಿಟ್ಬಡಿ ಸ್ವಾಮಿ........"

ನನಗೆ ಸಹಿಸುವುದಕ್ಕಾಗಲಿಲ್ಲ. ಎಂತಹ ಆಸೆಗಳನ್ನಿಟ್ಟು ಕೂಂಡಿದ್ದ ಆ ತಂದೆ! ಕ್ರೂರಿಯಾದ ನಾನು ಎಂತೆಂತಹ ನೋವುಗಳಿಗೆ ಆ ಜೀವವನ್ನು ಗುರಿಮಾಡಿದ್ದೆ! ಅಧಿಕಾರಿ ಮತ್ತೆ ಗದರಿದ:

"ನಿನ್ನ ಜಾಮೀನೂ ಬೇಡ.ಏನೂ ಬೇಡ. ಬೆಳಗಾದ್ಮೇಲೆ ಬಿಟ್ಬಡ್ತೀವಿ ಈಗ ಹೊರಟ್ಹೋಗು.

" ನನ್ನ ಎದೆ ಡವಡನೆ ಬಡಿದುಕೂಳ್ಳುತ್ತಿತ್ತು. ನಾನು ಗಟ್ಟಯಾಗಿ ಹೇಳಿದೆ.

"ಅಪ್ಪಾ, ನೀನು ಮನೆಗೆ ಹೋಗಪ್ಪಾ. ಈ ಚಳೀಲಿ ಹೊರಗೆ ಹೋಗ್ಬಾರ್ರ್ದು ಅಂತಲ್ವಾ ಡಾಕ್ಟರು ಹೇಳಿದ್ದು? ಮನೆಗೆ ಹೋಗಪ್ಪಾ ಬೆಳಿಗ್ಗೆ ಬಂದ್ಬಿಡ್ತೀನಿ. ಮನೆಗೆ ಹೋಗಪ್ಪಾ."