ಪುಟ:Vimoochane.pdf/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಆಮೇಲೆ ನಾಲ್ಕು ದಿನ ಮಾತ್ರ ತಂದೆ ಬದುಕಿದ. ಹಗಲು ರಾತ್ರೆ, ಆತನ ಆರೈಕೆ ಮಾಡಿದೆ. ಒಮ್ಮೆ ನನ್ನನ್ನು ಬಳಿಯಲ್ಲೆ ಕುಳ್ಳರಿಸಿ ಕೊಂಡು ತಂದೆ ಆ ಪ್ರಶ್ನೆ ಕೇಳಿದ:

"ನೀನು ಆ ದಿವಸ ಪಾಕೀಟು ಕದ್ದಿರಲಿಲ್ಲ, ಅಲ್ವಾ ಚಂದ್ರು, ಅಲ್ವಾ?

"ನಾಲ್ಕು ತಿಂಗಳಾದ ಮೇಲೆ ತಂದೆ ಆ ಪ್ರಶ್ನೆ ಕೇಳಿದ್ದ. ನಾನು ನಿರಪರಾಧಿಯೆಂಬುದು ಆತನಿಗೆ ಗೊತ್ತಿತ್ತು. ಆದರೂ ಆ ಪ್ರಶ್ನೆ ಕೇಳಿದ್ದ.

"ಇಲ್ವಪ್ಪ. ನಾನು ಯಾವತ್ತಾದರೂ ಹಾಗ್ಮಾಡೇನಾ?

"ಆದು ಆ ದಿನ ನಾನು ಹೇಳಿದ ಮಾತು--ಮರಣಶಯ್ಯೆಯಲ್ಲಿದ್ದ ತಂದೆಗೆ ಹೇಳಿದ ಮಾತು.

ಈ ದಿನ ಅದನ್ನು ಸ್ಮರಿಸಿಕೊಂಡಾಗ ನನ್ನ ಬಗ್ಗೆ ನನಗೆ ಕನಿ ಕರವೆನಿಸುತ್ತಿದೆ.

ಕೊನೆಯ ದಿನ ಕೆಮ್ಮು ನರಳಾಟಗಳ ನಡುವೆ ಜೀವ ಗುಟುಕರಿ ಸುತ್ತಿದ್ದಾಗ ತಂದೆ ಹನ್ನೊಂದು ವರ್ಷ್ಗಗಳ ಹಿಂದಿನ ಆ ದಿನವನ್ನು ಬಾರಿ ಬಾರಿಗೂ ಸ್ಮರಿಸಿದ.

"ಚಂದ್ರೂ. ನಿಂಗೆ ನೆಪ್ಪಯ್ತ? ನೆಪ್ಪಯ್ತೇನೊ ಚಂದ್ರು? ನಾವು ಆ ದಿವಸ ಹಳ್ಳಿಯಿಂದ ಬಂದಿದ್ದು............ನಿನ್ನ ತಾಯಿ ಹೇಮಾವತಿ ಹೊಳೇಲಿ..........ರುಕ್ಕೂ........... ನಿಂತಾಯಿ ಕಣೋ ..........ನೆಪ್ಪಾಯ್ತಾ ನಿಂಗೆ?......ನೆಪ್ಪಯ್ತೇನೊ.............?"

ನಾನು ಧಾರಾಕಾರವಾಗಿ ಕಣ್ಣೀರನ್ನುಹರಿಯಗೊಟ್ಟೆ. ಮುಂದೆ ಜೀವನದಲ್ಲಿ, ಕಂಬನಿಯ ಅವಶ್ಯಕತೆ ಇಲ್ಲವೆಂಬ ಪೂರ್ವಗ್ರಹಿಕೆ ನನಗಿರಲ್ಲಿಲ್ಲ ನಿಜ. ಆದರೆ ನನ್ನ ಹೃದಯ ಆಳವಾಗಿತ್ತು, ವಿಶಾಲವಾಗಿತ್ತು. ಅಲ್ಲಿ ಒಂದೇಸಮನೆ ಸೋರಿಹೋದರೂ ಮುಗಿಯದಷ್ಟು ನೀರಿತ್ತು.

ರಾತ್ರೆ ನಡುವಿರುಳಲ್ಲಿ, "ರುಕ್ಕೂ ಚಂದ್ರೂ-ರಾಮ-ರಾಮ" ಎನ್ನುತ್ತಾ ತಂದೆ ಕೊನೆಯ ಉಸಿರನ್ನೆಳೆದ.