೧೦೦
ಯಶೋಧರ ಚರಿತೆ
ವ್ರತಹಾನಿ ಹಿಂಸೆಯೊಂದೀ
ಗತಿಗಿಕ್ಕಿದುದುಳಿದ ನಾಲ್ಕು ಮಾದೊಡೆ ಬಳೆಕೇಂ
ಚತುರಂಗಬಲ ಸಮೇತಂ
ಪ್ರತಿಪಕ್ಷಂ ಶೂರನಾದೊಡೇನಂ ಮಾಡಂ 34
ಅದರೆಂ ತನ್ನಂತಿರೆ ಬಗೆ-
ವುದು ಪೆರರಂ ಪ್ರಾಣಿಹಿಂಸೆಯಂ ಮಾಡಲ್ವೇ-
ಡ ದಯಾಮೂಲಂ ಧರ್ಮಂ
ಪದುಳಿಸಿ ಕೇಳ್ ಮಗನೆ ಹಿತಮಿದುಭಯಭವಕ್ಕಂ 35
ಗುರುವಿಂತು ಬೆಸಸೆ ಜಾತಿ
ಸ್ಮರಂಗಳಾಗಿರ್ದು ಪಕ್ಕಿಗಳ್ ಕೇಳ್ದೆರ್ದೆಯೊಳ್
ಪರಮೋತ್ಸವದಿಂ ವ್ರತಮಂ
ಧರಿಯಿಸುತಿರೆ ಚಂಡಕರ್ಮನುಂ ಧರಿಯಿಸಿದಂ 36
_____
4. ಅಹಿಂಸೆ ಎಂಬ ಒಂದು ವ್ರತಕ್ಕೆ ಈ ಬಗೆಯ ಅಪಚಾರ ಸಂಭವಿಸಿದುದರಿಂದ ಅವರಿಗೆ ಈ ಗತಿಯೊದಗಿತು. ಉಳಿದ ನಾಲ್ಕು ವ್ರತಗಳಿಗೂ ಭಂಗವುಂಟಾದರೆ ಇನ್ನೇನಾಗದು? ಶೂರನೊಬ್ಬನು ಚತುರಂಗಬಲ ಸಮೇತನಾಗಿ ಬಂದರೆ ಏನು ಮಾಡಲಾರ ? 35. ಆದುದರಿಂದ ಪರರನ್ನು ತನ್ನಂತೆ ಬಗೆಯಬೇಕು. ಪ್ರಾಣಿಹಿಂಸೆಯನ್ನು ಮಾಡಬಾರದು, ಧರ್ಮವು ದಯಾಮೂಲವಾದುದು. ಮಗು! ನೆಮ್ಮದಿಯಿಂದ ಕೇಳು: ಇದು ಇಹಪರಲೋಕಗಳ ಭವಕ್ಕೂ ಹಿತವನ್ನುಂಟುಮಾಡುತ್ತದೆ.” 36. ಗುರುಗಳು ಕೊಟ್ಟ ಉಪದೇಶವನ್ನು ಕೇಳುತ್ತಿದ್ದಂತೆ ಪುರ್ವಜನ್ಮದ ಸ್ಮರಣೆಯುಂಟಾದ ಆ ಕೋಳಿಗಳೆರಡೂ ಅಂತರಂಗದಲ್ಲಿ ಆನಂದಗೊಂಡು ಈ ವ್ರತವನ್ನು ಕೈಗೊಂಡವು. ಚಂಡಕರ್ಮನೂ ವ್ರತವನ್ನು ಅಂಗೀಕರಿಸಿದನು.