ವಿಷಯಕ್ಕೆ ಹೋಗು

ಪುಟ:YASHODARA CHARITE.pdf/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೧

ಯಶೋಧರ ಚರಿತೆ

ಕಳಲೆ ನಿಜಹರ್ಷಬಾಷ್ಪ

ಮರೆವನಿ ಧರ್ಮಾನುರಾಗ ಮೇಘಧ್ವನಿವೊಲ್

ಮೊಳಗುವಿನುರಂಕೆಯ ಪೊಯಿಲ್

ಫಳೆಲನೆ ಕೂಗಿದುವು ಕೇಳ್ದನಿತ್ತ ನೃಪಾಲಂ 37


ಸ್ವರವೇದವಿದ್ಯೆಯಂ ತ-

ನ್ನರಸಿಗೆ ಮೆರೆಯಲ್ಕೆ ದೇವಿ ನೋಡೆನುತೆಚ್ಚಂ

ಸರಲೆಯ್ದಿಸೆ ಕಡೆದುವವಂ-

ತೆರಡರ್ಕಾಯುಃ ಪ್ರಮಾಣಮೊಂದಾದುದೆನಲ್ 38


ದೊರೆಕೊಳೆ ಸಮಾಧಿಮರಣಂ

ಚರಣಾಯುಧಯುಗಳಮಳೆದು ಕುಸುಮಾವಳಿಯೆಂ

ಬರಸಿಯ ಬಸಿರೊಳ್ ಬಂದವು

ನರಯುಗಳಕಮಾಗಿ ನಚ್ಚನಚ್ಚೊತ್ತಿದವೊಲ್ 39

_____

37. ತಮಗುಂಟಾದ ಆನಂದಬಾಷ್ಪವು ಮಳೆಹನಿಯಾಗಿ ಕೆಳಕ್ಕುದುರಿತು. ಆಗ ಧರ್ಮಾನುರಾಗವೆಂಬ ಮೋಡಗಳು ಗುಡುಗಿದುವೋ ಎಂಬಂತೆ ಆ ಕೋಳಿಗಳೆರಡರ ರೆಕ್ಕೆಗಳು ಶಬ್ದ ಮಾಡಿದುವು ಮತ್ತು ಸಂತೋಷಾಧಿಕ್ಯದಿಂದ ಕಲೆದುವು. ಈ ಕೂಗು ರಾಜನ ಕಿವಿಗೆ ಬಿದ್ದಿತು. 38. ಅವನು ತನ್ನ ಸ್ವರವೇದ (ಶಬ್ದವೇದಿ) ವಿದ್ಯೆಯನ್ನು ತನ್ನ ರಾಣಿಗೆ ತೋರಿಸಿ ಮೆರೆಯಲು ಮನಸ್ಸು ಮಾಡಿದನು. ‘ದೇವಿ ನೋಡು!’ ಎಂದು ಹೇಳುತ್ತಾ ಅವನು ಒಂದು ಬಾಣವನ್ನು ಪ್ರಯೋಗಿಸಿದನು. ಆ ಬಾಣವು ಎರಡೂ ಕೋಳಿಗಳನ್ನು ಒಮ್ಮೆಲೆ ಕೊಂದಿಕ್ಕಿತು, ಎರಡಕ್ಕೂ ಆಯಸ್ಸು ಒಂದೇ ಆಗಿತ್ತೆಂಬಂತೆ. 39. ಕೋಳಿಗಳೆರಡಕ್ಕೂ, ದೊರೆತುದು ಸಮಾಧಿ ಮರಣ.58 ಹೀಗೆ ಸತ್ತು ಅವೆರಡೂ ಕುಸುಮಾವಳಿಯ ಗರ್ಭದಲ್ಲಿ ಆ ದಂಪತಿಗಳ ಪ್ರೇಮವನ್ನೇ ಅಚ್ಚೊತ್ತಿದಂತೆ ಅವಳಿಮಕ್ಕಳಾಗಿ ಜನಿಸಿದವು.