೧೦೪
ಯಶೋಧರ ಚರಿತೆ
ಪೊಡನಡಲೆತ್ತುವ ಕೈಗಳ್
ಪೊಡೆಯಲ್ಕೆತ್ತುಗುಮೆ ಮೂರುಲೋಕದ ಕೈಗ-
ನ್ನಡಿ ಸಾಮಥರ್ಯ್ದ ಸದ್ಗುಣ-
ದೊಡೆಯರೊಳದು ತಕ್ಕುದಲ್ಲದತ್ತಿಡು ಬಾಳಂ 46
ಆ ರುಷಿಯ ಚರಣಕಮಲಮ-
ನಾರಾಧಿಸಲೆಂದು ಬಂದು ಕಂಡೆಡೆವೊಕ್ಕು-
ರ್ವೀರಮಣ ದುರ್ಬಲಸ್ಯ ಬ-
ಲೋ ರಾಜಾ ಎನ್ನದಿವರ್ಗೆ ಮುಳಿವುದೆ ಮರುಳೇ 47
ಇವರಾರೆಂದಿರ್ದಪೆ ನೀನ್
ಭುವನತ್ರಯ ತಿಳಿಕರಮಳಸದ್ಭೋಧ ಸುಧಾ-
ರ್ಣವ ಪೂರ್ಣಚಂದ್ರರವನತ
ದಿವಿಜನರೋಗರನನ್ಯ ಸಾಮಾನ್ಯಗುಣರ್ 48
____
ಇರಲಾರವು ಎಂದು ಹೇಳಿದನು. 46. “ರಾಜಾ, ನಮಸ್ಕಾರ ಮಾಡುವುದಕ್ಕಾಗಿ ಎತ್ತಬೇಕಾದ ಕೈಗಳನ್ನು ಕಡಿದಿಕ್ಕುವುದಕ್ಕಾಗಿ ಎತ್ತುತ್ತಾರೆಯೆ? ಅವರು ಮೂರು ಲೋಕದ ಕೈಗನ್ನಡಿ, ಸಾಮಥರ್ಯ್ದÀ ಒಡೆಯರು, ಸದ್ಗುಣಗಳ ಬೀಡು. ಅವರಲ್ಲಿ ಈ ಅಕೃತ್ಯವು ತಕ್ಕುದಲ್ಲ. ನಿಮ್ಮ ಕತ್ತಿಯ್ನನು ಅತ್ತ ಇಡಿರಿ. 47. ಆ ಋಷಿಗಳ ಚರಣಕಮಲವನ್ನು ಆರಾಧಿಸುವ ಸಲುವಾಗಿ ಬರುವುದೂ, ಬಂದು ಅವರನ್ನು ಕಂಡು, ಸಮಿಪಿಸಿ, ‘ದುರ್ಬಲರಿಗೆ ಬೆಂಬಲವಾಗಿ ರಾಜನೇ ಇದ್ದಾನೆ’ ಎಂದು ಅವರೊಡನೆ ಬಿನ್ನವಿಸುವುದೂ ಕರ್ತವ್ಯವಾಗಿರುವಾಗ ಅವರ ಮೇಲೆ ಸಿಟ್ಟುಗೊಳ್ಳುವುದೆ? ನಿಮಗೇನು ಹುಚ್ಚೆ? 48. ಇವರು ಯಾರೆಂದು ಗೊತ್ತಿದೆಯೆ ನಿಮಗೆ? ಮೂರು ಲೋಕಕ್ಕೆ ತಿಲಕ ಪ್ರಾಯರಾದ ಇವರು, ನಿರ್ಮಲವಾದ ಸಮ್ಯಜ್ಞಾನವೆಂಬ ಅಮೃತ ಸಾಗರಕ್ಕೆ ಪುರ್ಣಚಂದ್ರರಾಗಿದ್ದಾರೆ. ದೇವತೆಗಳೂ ಮನುಷ್ಯರೂ ಉರಗರೂ ಇವರಿಗೆ ಮಣಿಯುತ್ತಾರೆ. ಇತರರಲ್ಲಿ ಇರಲಾರದಷ್ಟು