ಪುಟ:YASHODARA CHARITE.pdf/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೭

ಯಶೋಧರ ಚರಿತೆ


ವೀರತಪಸ್ವಿ ಯಶೌಘಮ-

ಹಾರಾಜಂ ನೋನ್ತು ಕಳೆದು ಸುರವರವನಿತಾ

ಸ್ಮೇರಕಟಾಕ್ಷ ನಿರೀಕ್ಷಣ

ಕೈರವಶೀತಾಂಶುದೇವನಾದಂ ದಿವದೊಳ್ 55


ಅಮೃತಮತಿ ಅಷ್ಟವಂಕಂ-

ಗೆ ಮರುಳ್ಗೊಂಡತ್ತೆ ಗಂಡನಂ ವಿಷದಿಂ ಕೊಂ

ದು ಮುದಿರ್ತು ಕುಷ್ಠಿಕೊಳೆ ಪಂ-

ಚಮ ನರಕದೊಳಳ್ದಳರಸ ಧೂಮಪ್ರಭೆಯೊಳ್ 56


ಜನಕಂ ಯಶೋಧರಂ ಪಿ-

ಟ್ಟಿನ ಕೋಳೇಯನಳೆದು ಕಳೆದು ನಿಲೆಯ್ಮೀನಾ-

ಡಿನ ಪೋರಿ ಪೋಂತು ಕುಕ್ಕುಟ-

ಮನೆ ಪುಟ್ಟಿದನೀಗಳಭಯರುಚಿಯಾಗಿರ್ದಂ 57

_____

ವಿವರಿಸತೊಡಗಿದರು. 55. “ನಿನ್ನ ಅಜ್ಜ ಯಶೌಘ ಮಹಾರಾಜನು ವೀರತಪಸ್ವಿಯಾಗಿ ವ್ರತಗಳನ್ನು ಆಚರಿಸಿದನು ತೀರಿಕೊಂಡ ಮೇಲೆ ಅವನು ಸ್ವರ್ಗದಲ್ಲಿ ಉತ್ತಮ ದೇವತಾಸ್ತ್ರೀಯರ ಮಂದಹಾಸದ ಕಟಾಕ್ಷ ವೀಕ್ಷಣದ ಕನ್ನೈದಿಲೆಗಳಿಗೆ ಚಂದ್ರನಾಗಿದ್ದುಕೊಂಡು ದೇವನಾಗಿದ್ದಾನೆ. 56. ಅಮೃತಮತಿ ಅಷ್ಟವಮಕನಿಗೆ ಹುಚ್ಚಾಗಿ ತನ್ನ ಅತ್ತೆ ಚಂದ್ರಮತಿಯನ್ನೂ ಗಂಡ ಯಶೋಧರನನ್ನೂ ವಿಷವಿಕ್ಕಿ ಕೊಂದಳು. ಅವಳು ಆಮೇಲೆ ಕ್ರಮ ಕ್ರಮವಾಗಿ ಕ್ಷೀಣಿಸುತ್ತಾ ಒಂದು ಕುಷ್ಠರೋಗಕ್ಕೆ ಗುರಿಯಾದಳು. ಸತ್ತಮೇಲೆ ಅವಳು ಧೂಮಪ್ರಭೆಯೆಂಬ ಪಂಚಮನರಕದಲ್ಲಿ ಮುಳುಗಿ ನವೆಯುತ್ತಾ ಇದ್ದಾಳೆ. 57. ನಿನ್ನ ತಂದೆಯಾದ ಯಶೋಧರನು ಹಿಟ್ಟಿನ ಕೋಳಿಯನ್ನು ಕೊಂದು, ಸತ್ತ ಮೇಲೆ ನವಿಲು, ಮುಳ್ಳುಹಂದಿ, ಮಿÁನು, ಆಡು, ಹೋತ, ಕೋಳಿ ಎಂದು ಜನ್ಮಾಂತರಗಳನ್ನು