೧೧೬
ಯಶೋಧರ ಚರಿತೆ
ಸಜ್ಜನ ಚೂಡಾಮಣಿ ತ-
ಮ್ಮಜ್ಜಂಗಂ ಪುಣ್ಯದಿಂದೆ ಸಾಸಿರ್ಮಡಿಯಾ-
ಗುಜ್ಜಳಿಕೆವಡೆದ ಪೆರ್ಮೆಯೊ
ಳುಜ್ಜೇನಿಯೊಳರಸುಗೆಯ್ಯುತಿರ್ದಂ ಸುಖದಿಂ 82
ತಾರಾತಾರಾ ಧರಾಧರ
ತಾರಾ ದರತಾಹಾರ ನೀಹಾರ ಪಯಃ
ಪೂರ ಹರಹಸನ ಶಾರದ
ನೀರದ ನಿರ್ಮಲ ಯಶೋಧರಂ ಕವಿತಿಲಕಂ 83
ಕ್ಷಯಮಂ ಪಿಟ್ಟಿನ ಕೋಳಿಗಿತ್ತು ನವಿಲುಂ ನಾಯಾದರೆಯ್ಯುಂ ವಿಷಾ-
ಹಿಯುಮಾದರ್ ಪಗೆ ಸುತ್ತೆ ಮೀನ್ ಮೊಸಳೆಯಾದರ್ ಪೋಂತುಮಾಡಾದರ-
ಲ್ಲಿಯೆ ಪೋಂತುಂ ಪುಲಿಗೋಣರಾದರೆರಡುಂ ಬಲ್ಗೋಳೆಯಾದರ್ ತಪ-
ಸ್ವಿಯ ಮಾತಿಂದಮಳಾದರಳ್ತೆ ಮಗನುಂ ತಾಯುಂ ಯಶೌಘಪ್ರಿಯರ್ 84
_____
82. ಯಶೋಧರನು ಸಜ್ಜನ ಚೂಡಾಮಣಿಯೆನ್ನಿಸಿ ತನ್ನ ಪುಣ್ಯದಿಂದ ತನ್ನ ಅಜ್ಜ ಯಶೌಘನಿಗಿಂತಲೂ ಸಾವಿರಪಾಲು ಉಜ್ವಲತೆಯನ್ನು ಪಡೆದು ಉಜ್ಜಯಿನಿಯಲ್ಲಿಕ್ಕಿ ಸುಖವಾಗಿ ರಾಜ್ಯಭಾರ ಮಾಡುತ್ತಿದ್ದನು, 83. ಬೆಳ್ಳಿ, ಬೆಳ್ಳಿಯ ಬೆಟ್ಟ(ಕೈಲಾಸ) ನಕ್ಷತ್ರ (ಚಂದ್ರ) ಶಂಖ, ಮುತ್ತಿನಹಾರ, ಮಂಜು, ಹಾಲಹೊಳೆ, ಹರನ ನಗು, ಶರತ್ಕಾಲದ ಮೋಡ ಇವುಗಳಂತೆ ನಿರ್ಮಲ ಯಶೋಧರನೂ ಕವಿತಿಲಕನು.60 84. ಯಶೌಘನಿಗೆ ಮೆಚ್ಚಿನವರಾದ ಯಶೋಧರನೂ ಚಂದ್ರಮತಿಯೂ ಹಿಟ್ಟಿನ ಕೋಳಿಯನ್ನು ಕೊಂದು ನವಿಲೂ ನಾಯಿಯೂ ಆದರು. ಅನಂತರ ಮುಳ್ಳುಹಂದಿಯೂ ಸರ್ಪವೂ ಆದರು. ಹಗೆ ಸುತ್ತಿ ಸತ್ತು ಮೀನು ಮೊಸಳೆಗಳಾಗಿ, ಬಳಿಕ ಹೋತ ಆಡುಗಳಾಗಿ, ಆಮೇಲೆ ಹೋತ ಕೋಣಗಳಾಗಿ ಜನ್ಮ ಪಡೆದರು. ಮುಂದೆ ಎರಡು ಕೋಳಿಗಳಾಗಿ ಹುಟ್ಟಿದರು. ತಪಸ್ವಿಗಳಾದ ಸುದತ್ತಾಚಾರ್ಯರ ಮಾತನ್ನು ಕೇಳಿದುದರಿಂದ ಈ ಮಗನೂ ತಾಯಿಯೂ ಅವಳಿ ಮಕ್ಕಳಾಗಿ ಜನ್ಮವೆತ್ತಿದರು.